ಟ್ರೈ ಮಾಡಿ… ಚಪಾತಿ, ನಾನ್ ರೋಟಿ ಜತೆ ರುಚಿರುಚಿ ಬಟರ್ ಚಿಕನ್ ಮಸಾಲಾ ಸವಿಯಿರಿ!
ಶ್ರೀರಾಮ್ ನಾಯಕ್, Jan 9, 2020, 7:46 PM IST
ರಜಾ ಸಮಯ ಬಂತೆಂದರೆ ಸಾಕು ಯಾವ ರೆಸಿಪಿಗಳನ್ನು ಮಾಡಬೇಕು ಎಂಬ ಆಲೋಚನೆ ಬಹುತೇಕ ಎಲ್ಲರ ಮನೆಗಳಲ್ಲಿ ಕೇಳುವ ಮಾತು. ಅದರ ಸಲುವಾಗಿ ನಿಮ್ಮಿಷ್ಟವಾದ ಬಟರ್ ಚಿಕನ್ ಮಸಾಲಾವನ್ನು ಸವಿಯಲು ಹೋಟೆಲ್ ಗಳಿಗೆ ಹೋಗುವ ಅಗತ್ಯವಿಲ್ಲ. ಬದಲಿಗೆ ಮನೆಯಲ್ಲಿಯೇ ಸರಳವಾಗಿ ಮಾಡಿ ಕುಟುಂಬದವರೊಂದಿಗೆ ಬಟರ್-ಚಿಕನ್ ಮಸಾಲಾವನ್ನು ಸವಿಯಿರಿ…
ಬೇಕಾಗುವ ಸಾಮಗ್ರಿಗಳು
ಬೋನ್ ಲೆಸ್ ಚಿಕನ್ 1ಕೆ.ಜಿ., ಟೊಮೇಟೋ 3, ಈರುಳ್ಳಿ 4, ದಾಲ್ಚಿನ್ನಿ ಎಲೆ 1, ಲವಂಗ 2, ಬೆಳ್ಳುಳ್ಳಿ ಶುಂಠಿ ಪೇಸ್ಟ್ 2 ದೊಡ್ಡ ಚಮಚ, ಗೇರು ಬೀಜ ಪೇಸ್ಟ್ 2 ದೊಡ್ಡ ಚಮಚ,ಅರಸಿನ ಪುಡಿ ಅರ್ಧ ಚಮಚ, ಕೊತ್ತಂಬರಿ ಪುಡಿ 1ಸಣ್ಣ ಚಮಚ, ಕಸೂರಿ ಮೇತಿ 1 ಸಣ್ಣ ಚಮಚ, ಗರಂ ಮಸಾಲಾ ಪುಡಿ 1 ಸಣ್ಣ ಚಮಚ, ಬೆಣ್ಣೆ 3 ದೊಡ್ಡ ಚಮಚ., ಹಾಲಿನ ಕೆನೆ 2 ದೊ.ಚ., ಕೊತ್ತಂಬರಿ ಸೊಪ್ಪು 1 ದೊ.ಚ., ಮೆಣಸಿನ ಪುಡಿ 2 ದೊ.ಚ., ಹಸಿ ಮೆಣಸು 4 ರಿಂದ 6,ನಿಂಬೆ ಹಣ್ಣಿನ ರಸ ಸ್ವಲ್ಪ,ಉಪ್ಪು ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ
– 2 ಈರುಳ್ಳಿ ಸಿಪ್ಪೆ ತೆಗೆದು ಕುದಿಯುವ ನೀರಿನಲ್ಲಿ ಹಾಕಿ 10 ನಿಮಿಷ ಮುಚ್ಚಿಡಿ.ಅನಂತರ ತೆಗೆದು ಮಿಕ್ಸರ್ ನಲ್ಲಿ ಕಡೆಯಿರಿ. ಟೊಮೇಟೋವನ್ನು ಕುದಿಯುವ ನೀರಿನಲ್ಲಿ ಹಾಕಿ 10 ನಿಮಿಷ ಮುಚ್ಚಿಡಿ. ಅನಂತರ ತೆಗೆದು ಮಿಕ್ಸರ್ ನಲ್ಲಿ ಕಡೆಯಿರಿ.
-1 ದೊಡ್ಡ ಚಮಚ ಬೆಣ್ಣೆಯನ್ನು ಬಾಣಲೆಯಲ್ಲಿ ಬಿಸಿ ಮಾಡಿ ದಾಲ್ಚಿನ್ನಿ ಎಲೆ, ಲವಂಗ ಹಾಕಿ ಅರ್ಧ ನಿಮಿಷ ಫ್ರೈ ಮಾಡಿ, ಹೆಚ್ಚಿದ್ದ ಈರುಳ್ಳಿ ಹಾಕಿ ನಸು ಕೆಂಪು ಬಣ್ಣ ಬರುವ ತನಕ ಹುರಿಯಿರಿ.
– ಬೆಳ್ಳುಳ್ಳಿ ಶುಂಠಿ ಪೇಸ್ಟ್ ಹಾಕಿ 2 ನಿಮಿಷ ಹುರಿಯಿರಿ. ಮೆಣಸಿನ ಪುಡಿ ಹಾಕಿ 1 ನಿಮಿಷ ಹುರಿದುಕೊಳ್ಳಿ. ಗೇರು ಬೀಜದ ಪೇಸ್ಟ್ ಹಾಕಿ ಸಣ್ಣ ಉರಿಯಲ್ಲಿ 5 ನಿಮಿಷ ಹುರಿಯಿರಿ.
– ಟೊಮೇಟೋ ಪೇಸ್ಟ್ , ಈರುಳ್ಳಿ ಪೇಸ್ಟ್, ಕಸೂರಿ ಮೇತಿ , ಕೊತ್ತಂಬರಿ ಪುಡಿ, ಅರಸಿನ ಪುಡಿ, ಗರಂ ಮಸಾಲ ಪುಡಿ, ಹಸಿಮೆಣಸು, ಉಪ್ಪು ಹಾಕಿ 5 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿರಿ.
– ಚಿಕನ್ ಪೀಸ್ ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿರಿ. ಬೇಕಾದಷ್ಟು ನೀರನ್ನು ಸೇರಿಸಿ ಹದಕ್ಕೆ ತನ್ನಿ. ಚೆನ್ನಾಗಿ ಕುದಿಸಿರಿ. ಉರಿ ಆರಿಸಿ, ಉಳಿದ ಬೆಣ್ಣೆ ಹಾಗೂ ಹಾಲಿನ ಕೆನೆ ಹಾಕಿ ನಂತರ ನಿಂಬೆ ಹಣ್ಣಿನ ರಸವನ್ನು ಸೇರಿಸಿರಿ. ತದನಂತರ ಹೆಚ್ಚಿಟ್ಟ ಕೊತ್ತಂಬರಿ ಸೊಪ್ಪಿನಿಂದ ಆಲಂಕರಿಸಿರಿ.
ಬಹಳ ಸುಲಭವಾಗಿ ಮಾಡಿಕೊಂಡು ಈ ಬಟರ್ – ಚಿಕನ್ ಮಸಾಲಾ ಮಾಡಿಕೊಂಡು ಚಪಾತಿ, ನಾನ್,ರೋಟಿಯ ಜೊತೆ ಇದನ್ನು ಸವಿಯಿರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಹೊಸ ಸೇರ್ಪಡೆ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ