ಮಸಾಲೆ ರಾಜ ಏಲಕ್ಕಿಯಲ್ಲಿದೆ ರೋಗ ನಿರೋಧಕ ಶಕ್ತಿ…ಏನಿದರ ಔಷಧಿ ಗುಣ?


Team Udayavani, Jan 10, 2020, 7:16 PM IST

1

ಏಲಕ್ಕಿ ಭಾರತ ದೇಶದಲ್ಲಿ ಬೆಳೆಯುವ ಒಂದು ಸಸ್ಯ. ಮಲೆನಾಡು ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುವ ಏಲಕ್ಕಿಯನ್ನು, ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಪರಿಮಳಕ್ಕಾಗಿ ಉಪಯೋಗಿಸುತ್ತಾರೆ. ಇದರಲ್ಲಿ ಅನೇಕ ಔಷಧಿ ಗುಣಗಳಿದ್ದು, ಕಾಫಿ ತೋಟದಲ್ಲಿ ಉಪ ಬೆಳೆಯಾಗಿ ಬೆಳೆಯುತ್ತಾರೆ. ವಾಣಿಜ್ಯ ಬೆಳೆಯಾಗಿ ಪ್ರಸಿದ್ಧಿ ಪಡೆದಿರುವ ಇದು ಮಸಾಲೆ ರಾಜ ಎಂದೇ ಖ್ಯಾತಿ ಪಡೆದಿದೆ. ಏಲಕ್ಕಿಯಿಂದ ರೋಗನಿರೋಧಕ ಶಕ್ತಿ, ಜೀರ್ಣ ಶಕ್ತಿ ವೃದ್ಧಿಸುವ ಜತೆಗೆ ಆರೋಗ್ಯಕ್ಕೆ ಉತ್ತಮ ಎಂದು ಸಾಕಷ್ಟು ಉಪಯೋಗಗಳಿವೆ.

ಜೀರ್ಣಕ್ರಿಯೆ ಸುಧಾರಣೆ ಮಾಡುವುದು
ಕೆಟ್ಟ ಹಾಗೂ ಅನಾರೋಗ್ಯಕರ ಆಹಾರ ಕ್ರಮದಿಂದಾಗಿ ಇಂದಿನ ದಿನಗಳಲ್ಲಿ ಹೆಚ್ಚಿನ ಜನರನ್ನು ಜಠರ ಕರುಳಿನ ಸಮಸ್ಯೆಯು ಕಾಡುತ್ತಲಿರುವುದು. ಯಾವಾಗ ನೋಡಿದರೂ ಗ್ಯಾಸ್ ಸಮಸ್ಯೆ ಬಾಧಿಸುವುದು ಎಂದು ಹೇಳುವವರೇ ಅಧಿಕ ಮಂದಿ. ಗ್ಯಾಸ್, ಆಸಿಡಿಟಿ, ಸೆಳೆತ, ವಾಕರಿಕೆ, ಎದೆಯುರಿ ಇತ್ಯಾದಿ ಸಮಸ್ಯೆ ನಿವಾರಣೆ ಮಾಡಲು ಏಲಕ್ಕಿ ಬಳಸಿಕೊಳ್ಳಬಹುದು.

ಬಾಯಿಯ ಆರೋಗ್ಯ ಸುಧಾರಿಸುವುದು
ಪ್ರತಿ ದಿನ ಊಟದ ಬಳಿಕ ಒಂದು ಕಪ್ ಏಲಕ್ಕಿ ಚಹಾ ಕುಡಿಯುವ ಮೂಲಕ ಅಥವಾ ಒಂದೆರಡು ಏಲಕ್ಕಿ ಜಗಿಯುವುದರಿಂದ ಬಾಯಿಯ ದುರ್ವಾಸನೆಯ ನಿಯಂತ್ರಿಸಬಹುದು ಹಾಗೂ ಬಾಯಿಯ ಸ್ವಚ್ಛತೆಯನ್ನು ಕಾಪಾಡಿ ಕೊಳ್ಳಬಹುದು.

ಸೂಕ್ಷ್ಮಜೀವಿ ವಿರೋಧಿ
ಏಲಕ್ಕಿಯು ಕೆಲವೊಂದು ರೀತಿಯ ಹಾನಿಕಾರಕ ಸೂಕ್ಷ್ಮಜೀವಿಗಳಾಗಿರುವಂತಹ ಶಿಲೀಂಧ್ರ, ಬ್ಯಾಕ್ಟೀರಿಯಾ ಮತ್ತು ವೈರಸ್ ನ ಬೆಳವಣಿಗೆಯನ್ನು ನಿಧಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ರಕ್ತದೊತ್ತಡ ಸಮತೋಲನದಲ್ಲಿಡುವುದು
ಏಲಕ್ಕಿ ಗ್ಲೂಕೋಸ್ ನಿಯಂತ್ರಿಸುವ ಅಂಶ ಮತ್ತು ಇನ್ಸುಲಿನ್ ಚಯಾಪಚಯಗೊಳಿಸುವುದು. ಏಲಕ್ಕಿಯಲ್ಲಿರುವ ಅಂಶವು ಆರೋಗ್ಯಕರ ಗ್ಲೂಕೋಸ್ ನ್ನು ವೃದ್ಧಿಸುವುದು ಮತ್ತು ಇನ್ಸುಲಿನ್ ಚಯಾಪಚಯಗೊಳಿಸುವುದು.

ದಂತ ಆರೋಗ್ಯ
ಹಲ್ಲಿನ ಹಲವಾರು ಸಮಸ್ಯೆಗಳಿಗೆ ಹಿಂದಿನಿಂದಲೂ ಆಯುರ್ವೇದ ಕ್ರಮದಲ್ಲಿ ಏಲಕ್ಕಿ ಬಳಸಿಕೊಂಡು ಬರಲಾಗುತ್ತಿದೆ. ಏಲಕ್ಕಿಯಲ್ಲಿ ಇರುವಂತಹ ಕೆಲವೊಂದು ಸೂಕ್ಷ್ಮಾಣು ವಿರೋಧಿ ಗುಣಗಳು ದಂತಕುಳಿ ನಿವಾರಣೆ ಮಾಡುವುದು. ದಂತ ಪದರ ನಿವಾರಣೆಮಾಡಲು ಇದನ್ನು ಬಾಯಿ ಮುಕ್ಕಳಿಸಿಕೊಳ್ಳಲು ಹಿಂದಿನಿಂದಲೂ ಸಾಂಪ್ರದಾಯಿಕವಾಗಿ ಬಳಸಿ ಕೊಂಡು ಬರಲಾಗುತ್ತಿದೆ.

ಜ್ವರ ಹಾಗೂ ಮೂಗು ಕಟ್ಟಿಕೊಂಡಿದ್ದರೆ
ಶೀತ ಜ್ವರದಿಂದ ನರಳುತ್ತಿದ್ದರೆ ಹಾಗೂ ಶೀತದಿಂದಾಗಿ ಮೂಗು ಕಟ್ಟಿಕೊಂಡಿದ್ದರೆ, ತಲೆನೋವಿದ್ದರೆ, ದಿನನಿತ್ಯ ಒಂದು ಕಪ್ ಏಲಕ್ಕಿ ಚಹಾ ಮಾಡಿ ಕುಡಿಯುತ್ತಾ ಬಂದರೆ, ಶೀಘ್ರದಲ್ಲಿಯೇ ಉಪಶಮನ ದೊರಕುತ್ತದೆ. ಅಷ್ಟೆ ಅಲ್ಲದೇ, ಮಳೆಗಾಲದಲ್ಲಿ ಹೆಚ್ಚಾಗಿ ಕಾಡುವ ಗಂಟಲ ಬೇನೆ, ಕೆಮ್ಮು ಹಾಗೂ ಕಫದ ಸಮಸ್ಯೆ ಇದ್ದರೆ, ಬಿಸಿ ಬಿಸಿ ಏಲಕ್ಕಿ ಚಹಾ ಮಾಡಿ ಕುಡಿಯುತ್ತಾ ಬಂದರೆ ಕೂಡಲೇ ಇವೆಲ್ಲಾ ಸಮಸ್ಯೆ ಕಡಿಮೆಯಾಗುತ್ತದೆ.

ರಕ್ತ ಸಂಚಾರ
ರಕ್ತ ಪರಿಚಲನೆಯನ್ನು ಸರಾಗವಾಗಿಸುವಲ್ಲಿ ಏಲಕ್ಕಿ ಸಹಕಾರಿ.

ಬಿಕ್ಕಳಿಕೆ
ಶ್ವಾಸಕೋಶದ ಕೆಳಗಿನ ಭಾಗದ ಅಂಗಾಂಶದಲ್ಲಿನ ಸೆಳೆತದಿಂದಾಗಿ ಬಿಕ್ಕಳಿಕೆ ಉಂಟಾಗುವುದು. ಇದರ ಪರಿಣಾಮ ನಗು, ಬಿಕ್ಕಳಿಕೆ ಅಥವಾ ಬೇರೆ ಸ್ಥಿತಿ ಕಾಣಿಸಬಹುದು. ಏಲಕ್ಕಿ ಹಾಕಿದ ನೀರನ್ನು ಕುದಿಸಿ ಕುಡಿದರೆ ಅದರಿಂದ ಈ ಸಮಸ್ಯೆಯು ನಿವಾರಣೆ ಆಗುವುದು ಎಂದು ಹೇಳಲಾಗುತ್ತದೆ.

ಜೀರ್ಣಕ್ರಿಯೆ ಸಮಸ್ಯೆ
ಜೀರ್ಣಕ್ರಿಯೆ ಸಮಸ್ಯೆ ನಿವಾರಣೆ ಮತ್ತು ತಡೆಯಲು ಏಲಕ್ಕಿಯು ಅದ್ಭುತವಾಗಿ ನೆರವಾಗುವುದು. ಏಲಕ್ಕಿಯಲ್ಲಿ ಇರುವಂತಹ ತಂಪುಕಾರಕ ಗುಣವು ಅಸಿಡಿಟಿ ನಿವಾರಣೆ ಮಾಡಲು ನೆರವಾಗುವುದು.

-ಅಸ್ತಮ ಇದ್ದರೆ ಏಲಕ್ಕಿ ಎಣ್ಣೆಯನ್ನು ಬಿಸಿ ನೀರಿಗೆ ಹಾಕಿ ಆವಿ ತೆಗೆದುಕೊಂಡರೆ ಕಟ್ಟಿರುವ ಕಫ ಕರಗಿ ಅಸ್ತಮ ಕಡಿಮೆಯಾಗುತ್ತದೆ.

-ಸ್ವಲ್ಪ ಏಲಕ್ಕಿ ಪುಡಿಗೆ ಕಾಲು ಚಮಚ ಕಲ್ಲುಸಕ್ಕರೆ ಸೇರಿಸಿ ದಿನಕ್ಕೆ 3 ರಿಂದ 4 ಬಾರಿ ಸೇವಿಸಿದರೆ ಗಂಟಲು ನೋವು, ಶೀತ, ಕೆಮ್ಮು ಶಮನವಾಗುತ್ತದೆ.

-ಪ್ರಯಾಣ ಮಾಡುವಾಗ ವಾಂತಿ, ವಾಕರಿಕೆ ಬರುತ್ತಿದ್ದರೆ ಏಲಕ್ಕಿ ಪುಡಿಯನ್ನು ಬೆಲ್ಲದ ಜತೆ ಸೇವಿಸಿದರೆ ವಾಂತಿ ಬರುವುದಿಲ್ಲ.

ಟಾಪ್ ನ್ಯೂಸ್

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

1-weweqwe

Globant; ಮನೆಯಿಂದಲೇ 30,000 ಮಂದಿ ಕೆಲಸ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.