ಕ್ರಿಕೆಟ್ ಚೆಂಡಿಗೂ ಬಂತು ‘ಸ್ಮಾರ್ಟ್’ ತಂತ್ರಜ್ಞಾನ ; ಏನಿದರ ಸ್ಪೆಷಾಲಿಟಿ ಗೊತ್ತೇ?


Team Udayavani, Mar 13, 2020, 5:55 PM IST

ಕ್ರಿಕೆಟ್ ಚೆಂಡಿಗೂ ಬಂತು ‘ಸ್ಮಾರ್ಟ್’ ತಂತ್ರಜ್ಞಾನ ; ಏನಿದರ ಸ್ಪೆಷಾಲಿಟಿ ಗೊತ್ತೇ?

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಟೂರ್ನಿ ಆರಂಭವಾಗುತ್ತಧ್ದೋ ಇಲ್ಲವೊ ಆದರೆ ರಾಜಸ್ಥಾನ್‌ ರಾಯಲ್ಸ್ ತಂಡ ಈಗಾಗಲೇ ಪೂರ್ವಸಿದ್ಧತಾ ಶಿಬಿರ ಆರಂಭಿಸಿದೆ.

ಆದರೆ ಈ ಬಾರಿ ಶಿಬಿರದಲ್ಲಿ ಒಂದು ವಿಶೇಷ ಇದೆ.ಇಲ್ಲಿ ಬಳಸುವುದು ಸಾಮಾನ್ಯ ಚೆಂಡಲ್ಲ, ಸ್ಮಾರ್ಟ್‌ ಬಾಲ್’ ಪ್ರಯೋಗ ಇಲ್ಲಿ ನಡೆಯುತ್ತಿದೆ. ಸಲಹೆಗಾರ ಸ್ಟೆಫಾನಿ ಈ ಚೆಂಡಿನ ಮೂಲಕ ಬೌಲರ್‌ಗಳ ಸಾಮರ್ಥ್ಯ ವೃದ್ಧಿಗೆ ಮುನ್ನುಡಿ ಬರೆದಿದ್ದಾರೆ.

ಅಂದ ಹಾಗೆ ಈ ಸ್ಮಾರ್ಟ್‌ ಚೆಂಡು ಸಿದ್ಧವಾಗಿರುವುದು ‘ಸಿಲಿಕಾನ್‌ ಸಿಟಿ’ ಬೆಂಗಳೂರಿನಲ್ಲಿ. ಇಲ್ಲಿಯ ಸೀ ಹೌಸ್‌ ಟೆಕ್ನಾಲಜೀಸ್‌ ಸಂಸ್ಥಾಪಕ ದೇವ್‌ ಬೆಹೆರಾ ಅವರ ಕನಸಿನ ಕೂಸು ಈ ಸ್ಮಾರ್ಟ್‌ ಬಾಲ್ ಕ್ರಿಕೆಟ್‌ನಲ್ಲಿ ಬಳಕೆಯಾಗುವ ಚೆಂಡಿನಲ್ಲಿ ಪುಟ್ಟದೊಂದು ಮೆಮೊರಿ ಚಿಪ್‌, ಬ್ಯಾಟರಿ ಮತ್ತು ಸೂಕ್ಷ್ಮ ಸಂವೇದಕಗಳನ್ನು ಅಳವಡಿಸಲಾಗಿದೆ. ಅದಕ್ಕೆ ಪೂರಕವಾಗಿ ಸಿದ್ಧಗೊಳಿಸಲಾಗಿರುವ ಅಪ್ಲಿಕೇಷನ್‌ (ಆ್ಯಪ್‌) ಮೊಬೈಲ್‌ನಲ್ಲಿ ಡೌನ್ಲೋಡ್‌ ಮಾಡಿಟ್ಟುಕೊಂಡರೆ, ಚೆಂಡಿನ ಪ್ರತಿಯೊಂದು ಚಲನವಲನವೂ ನೋಂದಣಿಯಾಗುತ್ತದೆ.

ಸ್ವಿಂಗ್‌, ಸ್ಪಿನ್‌, ಸ್ಪೀಡ್‌ ಆ್ಯಂಗಲ್‌ ಮತ್ತು ಬ್ಯಾಟ್ಸ್‌ಮನ್‌ಗಳು ಪ್ರಯೋಗಿಸಿದ ಹೊಡೆತದ ತೀವ್ರತೆಗಳ ಕುರಿತ ಮಾಹಿತಿಗಳು ಈ ಆ್ಯಪ್‌ನಲ್ಲಿ ದಾಖಲಾಗುತ್ತವೆ. ಅವುಗಳನ್ನು ಅವಲೋಕಿಸಿ ಬೌಲಿಂಗ್‌ನಲ್ಲಿ ಬದಲಾವಣೆ ಮಾಡುವ ಅವಕಾಶಗಳು ವಿಫ‌ುಲವಾಗಿವೆ.

ಕ್ರಿಕೆಟ್‌ನಲ್ಲಿ ಇವತ್ತು ಸ್ಪರ್ಧಾತ್ಮಕತೆ ಮುಗಿಲು ಮುಟ್ಟಿದೆ. ದಿನನಿತ್ಯ ಒಂದಿಲ್ಲೊಂದು ವಿನೂತನ ಪ್ರಯೋಗ ಇದ್ದೇ ಇರುತ್ತದೆ. ಕ್ರಿಕೆಟ್‌ ಧರ್ಮವೇ ಆಗಿರುವ ಈ ದೇಶದಲ್ಲಿ ಲಕ್ಷಾಂತರ ಹುಡುಗರು ಪ್ರತಿದಿನ ಬ್ಯಾಟ್‌, ಚೆಂಡು ಹಿಡಿದು ಮೈದಾನಕ್ಕೆ ಲಗ್ಗೆ ಇಡುತ್ತಾರೆ. ಎಲ್ಲರಿಗೂ ಅಂತಾರಾಷ್ಟ್ರಿಯ ತಾರೆ ಆಗುವ ಕನಸು. ತಮ್ಮ ಬಳಿ ಬಂದ ಹುಡುಗರಿಗೆ ಕನಿಷ್ಟ ಐಪಿಎಲ್‌ ಅರ್ಹರನ್ನಾಗಿ ಮಾಡಬೇಕೆಂಬ ಛಲ ಕೋಚ್‌ಗಳದ್ದು.

ಸ್ಟೀಪನ್‌ಜೋನ್ಸ್‌ ಅಕಾಡೆಮಿ, ಗ್ಯಾರಿ ಕರ್ಸ್ಟನ್‌ ಕ್ರಿಕೆಟ್‌ ಅಕಾಡೆಮಿ, ಪಡುಕೋಣೆ ಅಕಾಡೆಮಿಗಳಲ್ಲಿ ಈ ಚೆಂಡು ಪ್ರಯೋಗವಾಗಿದೆ. ಚೆಂಡು ಉತ್ಪಾದಕರೊಂದಿಗೆ ಒಪ್ಪಂದ ಮಾಡಿಕೊಂಡು ಈ ಸೆನ್ಸಾರ್‌ ಅಳವಡಿಸಲಾಗುತ್ತಿದೆ. ಇವತ್ತು ಕೋಚಿಂಗ್‌ ಕೂಡ ಸೂಪರ್‌ ಸ್ಪೆಶಾಲಿಟಿ ಆಗುತ್ತಿದೆ. ಬೌಲರ್‌ಗಳ ಸಾಮರ್ಥ್ಯ ವೃದ್ಧಿಗೆ ಅನುಕೂಲವಾಗುತ್ತದೆ.

ಸೌರಾಷ್ಟ್ರದ ಅಭಿಷೇಕ್‌ ಭಟ್‌ (ಈಚೆಗೆ ಕೆಪಿಎಲ್‌ನಲ್ಲಿ ಆಡಿದ್ದರು) ಅವರು ತಮ್ಮ ಎಸೆತದ ವೇಗವನ್ನು ಪ್ರತಿ ಗಂಟೆಗೆ 120 ಕಿ.ಮೀ. ನಿಂದ 130ರವರೆಗೆ ವೃದ್ಧಿಸಿಕೊಳ್ಳಲು ಈ ಚೆಂಡಿನಲ್ಲಿ ತರಬೇತಿ ಪಡೆದಿದ್ದರು. ಮಾಜಿ ಕ್ರಿಕೆಟಿಗ ಸುನಿಲ್‌ ಜೋಶಿ ಅವರೂ ಈ ಉತ್ಪನ್ನದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿ ಭವಿಷ್ಯದಲ್ಲಿ ಎಲ್ಲ ಕ್ರೀಡಾ ಪ್ರಕಾರಗಳಲ್ಲಿಯೂ ಈ ಚಿಪ್‌ ಬಳಕೆಯಾಗುವ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಕೇವಲ ಕ್ರಿಕೆಟ್‌ ಮಾತ್ರವಲ್ಲದೆ ಈ ಉಪಕರಣವನ್ನು ಬಾಕ್ಸಿಂಗ್‌, ಮಾರ್ಷಲ್‌ ಆರ್ಟ್ಸ್, ಇನ್ನಿತರ ಕ್ರೀಡೆಗಳಲ್ಲೂ ಉಪಯೋಗಿಸಿಸಬಹುದಾಗಿದೆ. ಒಟ್ಟಾರೆಯಾಗಿ ಈ ಸಾಧನ ಎಲ್ಲ ಕ್ರೀಡೆಗಳಲ್ಲು ಬಳಕೆಗೆ ಬಂದರೆ ಪಲಿತಾಂಶ ನಿರ್ಧರಿಸಲು ಸಹಕಾರಿಯಾಗುತ್ತದೆ.

– ಅಭಿ

ಟಾಪ್ ನ್ಯೂಸ್

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.