ಶಿರಸಿ ಟು ಮಾಯಾನಗರಿ…ಈ ಗೃಹಿಣಿ ಸಾಧನೆ ನಿಜಕ್ಕೂ ಸ್ಫೂರ್ತಿಯ ಸೆಲೆ


Team Udayavani, Aug 22, 2018, 5:08 PM IST

shailaja-focus-main.jpg

ಮಲೆನಾಡಿನ ಶಿರಸಿ ಎಂಬ ಪಕ್ಕಾ ದೇಸಿ ಸೊಗಡಿನ ಊರಿನಿಂದ ಮುಂಬಯಿ ಎಂಬ ಮಾಯಾನಗರಿಗೆ ಹೋಗಿ ಅಲ್ಲಿ ಸಂಸ್ಕೃತ ಹಾಗೂ ಕನ್ನಡ ಭಾಷೆಯಲ್ಲಿ ನಿತ್ಯ ತರಗತಿಗಳಿಗೆ ಹಾಜರಾಗಿ ಎಂ.ಎ. ಪದವಿಯನ್ನು ಪಡೆದ ಗೃಹಿಣಿಯೊಬ್ಬರ ಸಾಧನೆಯ ಕಥೆಯಿದು. ಸಂಸಾರದ ನೊಗಕ್ಕೆ ಹೆಗಲನ್ನು ಕೊಟ್ಟ ಬಳಿಕ ಹೆಚ್ಚಿನ ಗೃಹಿಣಿಯರು ಗಂಡ-ಮನೆ-ಮಕ್ಕಳ ಜವಾಬ್ದಾರಿ ನಿಭಾಯಿಸುವುದರಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡುಬಿಟ್ಟಿರುತ್ತಾರೆ ಮತ್ತು ತಮ್ಮ ಆಸಕ್ತಿಯ ಕಡೆಗೆ ಗಮನವನ್ನೇ ಕೊಡುವುದಕ್ಕೆ ಸಾಧ್ಯವಾಗುವುದಿಲ್ಲ. ಅಂತಹ ಅನೇಕ ಗೃಹಿಣಿಯರಿಗೆ ಸ್ಪೂರ್ತಿಯ ಸೆಲೆಯಾಗಬಲ್ಲ ವಿಷಯವೊಂದನ್ನು ಈ ಬಾರಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ.

ಇವರ ಹೆಸರು ಶೈಲಜಾ ಶಾಂತಾರಾಮ ಹೆಗ್ಡೆ, ಯಕ್ಷಗಾನ ತಾಳಮದ್ದಳೆಯಲ್ಲಿ ಬಹುದೊಡ್ಡ ಹೆಸರನ್ನು ಮಾಡಿದ್ದ ಕೆರೇಕೈ ಕೃಷ್ಣ ಭಟ್ಟರ ಮಗಳು ಮತ್ತು ಪ್ರಸ್ತುತ ತಾಳಮದ್ದಳೆ ಕ್ಷೇತ್ರದಲ್ಲಿ ಮಿಂಚುತ್ತಿರುವ ಕೆರೇಕೈ ಉಮಾಕಾಂತ ಭಟ್ಟ ಅವರ ಸಹೋದರಿ ಈಕೆ. ಯಡಹಳ್ಳಿಯಲ್ಲಿ ಪಿ.ಯು.ಸಿ. ಮುಗಿಸಿ ಶಿರಸಿಯಲ್ಲಿ ಡಿಗ್ರಿ ಮುಗಿಸಿ ಬಳಿಕ ಶಾಂತರಾಮ ಹೆಗಡೆಯವರೊಂದಿಗೆ ವಿವಾಹವಾಗಿ ಮಹಾನಗರಿ ಮುಂಬಯಿಗೆ ಹೋಗುವ ಅನಿವಾರ್ಯತೆ ಬಂದಿತು. ನಂತರ ಸಂಸಾರದ ಒತ್ತಡದಲ್ಲಿ ಮುಂದಕ್ಕೆ ಓದಬೇಕೆನ್ನುವ ಆಸೆ ಹಾಗೆಯೇ ಉಳಿಯಿತು.

ಉನ್ನತ ವ್ಯಾಸಂಗದ ಹಂಬಲ ಕರಗಲಿಲ್ಲ…

ಹೀಗಿದ್ದರೂ ಶೈಲಜಾ ಅವರಿಗೆ ಉನ್ನತ ವ್ಯಾಸಂಗವನ್ನು ಮಾಡಬೇಕೆನ್ನುವ ಹಂಬಲ ಮನದ ಮೂಲೆಯಲ್ಲಿ ಹಾಗೆಯೇ ಕುಳಿತುಬಿಟ್ಟಿತ್ತು. ಹೀಗಿರುತ್ತಾ ಅದೊಂದು ದಿನ ದೃಢ ನಿರ್ಧಾರಕ್ಕೆ ಬಂದವರಂತೆ ಶೈಲಜಾ ಅವರು ಸ್ನಾತಕೋತ್ತರ ಪದವಿ ಪಡೆದುಕೊಳ್ಳುವ ನಿರ್ಧಾರ ಮಾಡಿಯೇ ಬಿಟ್ಟರು, ಅದೂ ಅಂಚೆ ತೆರಪಿನ (Distance course) ಮೂಲಕವಲ್ಲ, ಬದಲಾಗಿ ಇವರ ಮನೆಯಿಂದ 20 ಕಿಲೋಮೀಟರ್ ದೂರದಲ್ಲಿದ್ದ ವಿಶ್ವವಿದ್ಯಾನಿಲಯಕ್ಕೆ ಪ್ರತೀದಿನ ರೈಲಿನಲ್ಲಿ ಸಾಗಿ ನೇರ ತರಗತಿಗಳಿಗೆ ಪ್ರವೇಶ ಪಡೆದು ನಿತ್ಯ ತರಗತಿಗಳಿಗೆ ಹಾಜರಾಗುವ ಮೂಲಕ.

ಮುಂಬಯಿಗೆ ಬಂದ ಬಳಿಕ ಇವರಿದ್ದಿದ್ದು ಮರಾಠಿಗರು ಮತ್ತು ಹಿಂದಿ ಭಾಷಿಕರ ಮಧ್ಯದಲ್ಲಿ. ಆದರೆ ಅಲ್ಲಿದ್ದ ಕನ್ನಡ ಸಂಘಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಶೈಲಜಾ ಅವರು ತನ್ನ ಮಾತೃಭಾಷೆಯ ಸಂಪರ್ಕವನ್ನು ಉಳಿಸಿ ಬೆಳೆಸಿಕೊಳ್ಳುತ್ತಾ ಸಾಗಿದರು. ಮುಂಬಯಿ ಮಹಾನಗರಕ್ಕೆ ಬಂದ ಹದಿನೈದು ವರ್ಷಗಳ ಬಳಿಕ ಇವರು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪರೀಕ್ಷೆಯನ್ನು ಬರೆದರು. ಈ ಸಂದರ್ಭದಲ್ಲಿ ಇವರ ಮಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದ. ಮಕ್ಕಳನ್ನು ಓದಿಸಿ ಅವರು ಮಲಗಿದ ಬಳಿಕ ಇವರು ರಾತ್ರಿಯಿಡೀ ಕುಳಿತು ಓದುತ್ತಿದ್ದರು. ಹೀಗೆ ಈ ಸಂದರ್ಭದಲ್ಲಿ ಶೈಲಜಾ ಅವರಿಗೆ ಹಗಲು-ರಾತ್ರಿ ಒಂದೇ ಆಗಿತ್ತು. ಅಲ್ಲಿಗೇ ಸುಮ್ಮನಾಗದ ಶೈಲಜಾ ಅವರು ಕರ್ನಾಟಕ ಸರಕಾರ ಹೊರನಾಡಿನ ಕನ್ನಡಿಗರಿಗೆ ಉನ್ನತ ವ್ಯಾಸಂಗಕ್ಕೆ ನೀಡುವ 25 ಸಾವಿರ ರೂಪಾಯಿಗಳ ಪ್ರೋತ್ಸಾಹ ಧನವನ್ನು ಪಡೆದು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಈ ಸಂದರ್ಭದಲ್ಲಿ ಅವರ ಮಗಳು ಎಸ್ಸೆಸ್ಸೆಲ್ಸಿಯಲ್ಲಿದ್ದಳು.


ಡಬಲ್ ಪಿ.ಜಿ. ಬಳಿಕ ಪಡೆದರು ಡಿ.ಲಿಟ್ ಪದವಿ

ಸಂಸ್ಕೃತ ಮತ್ತು ಕನ್ನಡದಲ್ಲಿ ಎಂ.ಎ.ಪದವಿಯನ್ನು ಪಡೆದ ಬಳಿಕ ಶೈಲಜಾ ಅವರಿಗೆ ಡಿ.ಲಿಟ್ ಪದವಿಯನ್ನು ಮಾಡಬೇಕು ಎಂದೆಣಿಸಿತು. ಅದಕ್ಕಾಗಿ ಅವರು ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಜಿ.ಎನ್. ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ‘ಕಾಳಿದಾಸನ ಮೇಘದೂತ ಮತ್ತು ಕನ್ನಡ ರೂಪಾಂತರಗಳ ಕುರಿತು ಹಾಗೂ ತುಲನಾತ್ಮಕ ಅಧ್ಯಯನ’ ಎಂಬ ವಿಷಯದಲ್ಲಿ ಡಿ.ಲಿಟ್ ಪದವಿಯನ್ನು ಪಡೆದರು. ಇನ್ನು ಮುಂದೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಅಧ್ಯಯನಕ್ಕೆ ಇದೀಗ ಅವಕಾಶ ಕೋರಿದ್ದಾರೆ ಶೈಲಜಾ ಅವರು. ಬಹುಮುಖ ಪ್ರತಿಭೆಯ ಶೈಲಜಾ ಅವರು ತಾಳಮದ್ದಳೆ ಕಲಾವಿದೆಯೂ ಹೌದು.

ಮಾಹಿತಿ ಕೃಪೆ : ರಾಘವೇಂದ್ರ ಬೆಟ್ಟಕೊಪ್ಪ

Ad

ಟಾಪ್ ನ್ಯೂಸ್

RCB overtakes CSK to become the most valuable team in IPL

RCB: ಸಿಎಸ್‌ಕೆಯನ್ನು ಹಿಂದಿಕ್ಕಿ ಐಪಿಎಲ್‌ನ ಅತ್ಯಂತ ಮೌಲ್ಯಯುತ ತಂಡವಾದ ಆರ್‌ ಸಿಬಿ

BJP Karnataka: We are not bigger than the party….: Kumar Bangarappa

BJP Karnataka: ಪಕ್ಷಕ್ಕಿಂತ ದೊಡ್ಡವರು ನಾವಲ್ಲ….: ಕುಮಾರ ಬಂಗಾರಪ್ಪ

Davanagere: ಮನೆಗೆ ಹೋಗುವ ನಡುಕದಿಂದ ಸಿಎಂ ಸಿದ್ದು ಸಭೆ ನಡೆಸುತ್ತಿದ್ದಾರೆ: ಪ್ರತಾಪ್‌ ಸಿಂಹ

Davanagere: ಮನೆಗೆ ಹೋಗುವ ನಡುಕದಿಂದ ಸಿಎಂ ಸಿದ್ದು ಸಭೆ ನಡೆಸುತ್ತಿದ್ದಾರೆ: ಪ್ರತಾಪ್‌ ಸಿಂಹ

10-

Madikeri: ಹಸು, ಎಮ್ಮೆಗಳ ಕಳ್ಳತನ : ನಾಲ್ವರು ಆರೋಪಿಗಳ ಬಂಧನ

Mangaluru: ಮಳಿಗೆಯಿಂದ 3.30 ಲಕ್ಷ ರೂ. ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Mangaluru: ಮಳಿಗೆಯಿಂದ 3.30 ಲಕ್ಷ ರೂ. ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

13 IAS officers including D.Kannada CEO transferred

IAS Transfer: ದ.ಕನ್ನಡ ಜಿಲ್ಲಾ ಸಿಇಒ ಸೇರಿ 13 ಐಎಎಸ್‌ ಅಧಿಕಾರಿಗಳ ವರ್ಗಾವಣೆ

9-train

ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಜಾರಿಗೆ ಪ್ರಯತ್ನ; ಸೋಮಣ್ಣ ನೇತೃತ್ವದ ಸಭೆಯಲ್ಲಿ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mahakumbha–Kharge-Bjp

MahaKumbh Mela: ಪುಣ್ಯಸ್ನಾನದ ಬಗ್ಗೆ ಪ್ರಶ್ನಿಸಿ ಮಲ್ಲಿಕಾರ್ಜುನ ಖರ್ಗೆ ಸಾಧಿಸಿದ್ದೇನು?

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

death

Bantwal: ಪಾಣೆಮಂಗಳೂರು; ಮಹಿಳೆ ಆತ್ಮಹ*ತ್ಯೆ

POlice

Punjalkatte: ಸಿದ್ದಕಟ್ಟೆ; ಅಂಗಡಿಯಲ್ಲಿ ಮದ್ಯ ಅಕ್ರಮ ಮಾರಾಟ

2

Mangaluru: ದಾವಣಗೆರೆ ಮೂಲದ ಯುವತಿ ನಾಪತ್ತೆ

RCB overtakes CSK to become the most valuable team in IPL

RCB: ಸಿಎಸ್‌ಕೆಯನ್ನು ಹಿಂದಿಕ್ಕಿ ಐಪಿಎಲ್‌ನ ಅತ್ಯಂತ ಮೌಲ್ಯಯುತ ತಂಡವಾದ ಆರ್‌ ಸಿಬಿ

hun-Arrest

ರಸ್ತೆಯಲ್ಲಿ ವ್ಹೀಲಿಂಗ್‌, ಲಾಂಗ್‌ ಹಿಡಿದು ರೀಲ್ಸ್‌: ಯುವಕ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.