KGF ಸಂಸ್ಥೆಯಿಂದ ರಾಮಮಂದಿರ ನಿರ್ಮಾಣಕ್ಕೆ ಬಳಸುವ ಕಲ್ಲುಗಳ ಪರೀಕ್ಷೆ

ಕನ್ನಡಿಗ ವಿಜ್ಞಾನಿಗಳಿಂದ ರಾಮಮಂದಿರ ಕಲ್ಲುಗಳ ಗುಣಮಟ್ಟ ತಪಾಸಣೆ

Team Udayavani, Jan 21, 2024, 5:50 AM IST

1-sadasdasd

ಕೆಜಿಎಫ್‌: ಕೋಟ್ಯಂತರ ಭಾರತೀಯರು ಸುಮಾರು 500 ವರ್ಷಗಳಿಂದ ಕಾತರದಿಂದ ಎದುರು ನೋಡುತ್ತಿರುವ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಕೆಜಿಎಫ್‌ನ ನ್ಯಾಶನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ರಾಕ್‌ ಮೆಕಾನಿಕ್ಸ್‌ ಸಂಸ್ಥೆ ಮಹತ್ವದ ಪಾತ್ರ ವಹಿಸಿದೆ.

ಮಂದಿರ ನಿರ್ಮಾಣಕ್ಕೆ ಬಳಸಿದ‌ ಪ್ರತಿ ಯೊಂದು ಕಲ್ಲಿನ ಗುಣಮಟ್ಟ ವಿಶ್ಲೇಷಣೆ, ಪರೀಕ್ಷೆಗಳು ಇಲ್ಲಿನ ಎನ್‌ಐಆರ್‌ಎಂ ಸಂಸ್ಥೆ ಯೇ ಮಾಡಿದೆ. ಈ ಕಲ್ಲುಗಳ ಪರೀಕ್ಷಾ ಕಾರ್ಯವನ್ನು ಕೈಗೊಂಡ ವ್ಯಕ್ತಿ ಎನ್‌ಐಆರ್‌ಎಂನ ಪ್ರಿನ್ಸಿಪಲ್‌ ಸೈಂಟಿಸ್ಟ್‌ ಮತ್ತು ಎಚ್‌ಒಡಿ ಡಾ| ಎ.ರಾಜನ್‌ ಬಾಬುರವರು ಕನ್ನಡಿಗರು.
ಇಲ್ಲಿ ವೈಜ್ಞಾನಿಕ ಸಹಯಕರಾದ ರಾಯ್‌ಸ್ಟನ್‌ ಏಂಜಲೋ ವಿಕ್ಟರ್‌, ಡಿ.ಪ್ರಶಾಂತ್‌ ಕು ಮಾರ್‌, ಪ್ರಭು ಆರ್‌., ಎಸ್‌. ಬಾಬು ಇವರು ಕಲ್ಲಿನ ತಪಾಸಣೆ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ. ರಾಮಮಂದಿರದ ಮುಖ್ಯ ಕನ್ಸಲ್ಟೆಂಟ್‌ಗಳಾದ ಎಲ್‌ ಆ್ಯಂಡ್‌ ಟಿ ಕಂಪೆನಿ ಮತ್ತು ಟಿಸಿ ಎಲ್‌(ಟಾಟಾ) ಕಂಪೆನಿಯವರು ವಹಿಸಿ ಕೊಂಡಿ ದ್ದು, ಕಲ್ಲಿನ ಪರೀಕ್ಷೆ ಮಾಡುವ ಕಾರ್ಯವನ್ನು ಎನ್‌ಐಆರ್‌ಎಂ ಸಂಸ್ಥೆಗೆ ನೀಡಿದ್ದರು.

ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಮೂರು ಮಾದರಿಯ ಕಲ್ಲುಗಳನ್ನು ಬಳಕೆ ಮಾಡ ಲಾಗಿದ್ದು, ತಳಪಾಯಕ್ಕೆ ಗ್ರಾನೈಟ್‌ ಮಾದರಿಯ ಕಲ್ಲುಗಳನ್ನು, ಸೂಪರ್‌ ಸ್ಟ್ರಕ್ಚರ್‌ ಕಲ್ಲುಗಳನ್ನು ಕಾಲಂ, ಕಾರ್ವಿಂಗ್ಸ್‌, ಭೀಮ್ಸ್‌ ಗಳಿಗೆ ಮತ್ತು ಡೆಕೊರೇಟಿವ್‌ ಕಲ್ಲುಗಳನ್ನು ದೇವಾಲಯಕ್ಕೆ ಅಂದವನ್ನು ನೀಡಲು ಬಳಸಲಾಗಿದೆ.

ಕರ್ನಾಟಕದ ಕಲ್ಲುಗಳೂ ಪರೀಕ್ಷೆ

ಕರ್ನಾಟಕದ ಸಾದರಹಳ್ಳಿ, ದೇವನಹಳ್ಳಿ, ಚಿಕ್ಕಬಳ್ಳಾಪುರ, ತುಮಕೂರಿನ ಶಿರಾದಿಂದ ಕಲ್ಲುಗಳನ್ನು ಪರೀಕ್ಷೆ ಗೊಳಪಡಿಸಿ ಅನುಮೋದನೆ ನೀಡಲಾಗಿದೆ. 7 ಪದರಗಳುಳ್ಳ ದೇವಾಲಯದ ತಳಪಾಯ ನಿರ್ಮಾಣಕ್ಕೆ 1.2 ಮೀಟರ್‌ ಉದ್ದ ಮತ್ತು 0.80 ಸೆಂ.ಮೀ ಅಗಲ ಸೇರಿದಂತೆ ವಿವಿಧ ಅಳತೆ ಯ ಒಟ್ಟು 20,700 ಕಲ್ಲುಗಳನ್ನು ಅಂದರೆ ಶೇ.60ರಷ್ಟು ಕಲ್ಲುಗಳನ್ನು ತಳಪಾಯಕ್ಕೆ ಬಳಸಲಾಗಿದೆ. ಅಲ್ಲದೇ ಇವುಗಳನ್ನು ಇಂಟರ್‌ ಲಾಕಿಂಗ್‌ ಪದ್ಧತಿಯ ಮೂಲಕ ಅಳವಡಿಸಿರುವುದು ವಿಶೇಷವಾಗಿದೆ.

ಮಂದಿರ ನಿರ್ಮಾಣ ಕಾರ್ಯದಲ್ಲಿ ಸೇವೆ ಮಾಡುವ ಅದೃಷ್ಟ ದೊರೆತಿದ್ದು ನಮ್ಮ ಸೌಭಾಗ್ಯ. ದೇವಾಲಯ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಂಡಿದ್ದ ಕೂಲಿ ಕಾರ್ಮಿಕರಿಂದ ಹಿಡಿದು ಅತ್ಯುನ್ನತ ಹುದ್ದೆಯ ಅಧಿ ಕಾರಿಯವರೆಗೆ ಯಾರೊಬ್ಬರೂ ಧೂಮಪಾನ, ಮದ್ಯಪಾನ ಮಾಡಿಲ್ಲ. ಕೆಟ್ಟ ಪದ ಮಾತನಾಡದೇ ಶಿಸ್ತು, ಸಂಯಮ, ಶ್ರದ್ಧೆ, ಭಕ್ತಿಯಿಂದ ಮಂದಿರ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಂಡಿದ್ದರು.
ಡಾ| ರಾಜನ್‌ಬಾಬು ಎ., ವಿಜ್ಞಾನಿ, ಎನ್‌ಐಆರ್‌ಎಂ, ಕೆಜಿಎಫ್‌

ಚಾಕ್‌ ಪೆನ್ಸಿಲ್‌ನಲ್ಲಿ ಅರಳಿದ ರಾಮಮಂದಿರ

ಮುದಗಲ್ಲ: ಮೈಕ್ರೋ ಆರ್ಟಿಸ್ಟ್‌ನಲ್ಲಿ ವಿಶ್ವ ದಾಖಲೆ ಮಾಡಿರುವ ರಾಯಚೂರು ಜಿಲ್ಲೆ ಮುದಗಲ್ಲ ಪಟ್ಟಣದ ನಿವಾಸಿ ನಳಿನಾ ನವೀನ್‌ಕುಮಾರ್‌ ತಾವರಗೇರಿ ಚಾಕ್‌ ಪೆನ್ಸಿಲ್‌ ಬಳಸಿ ಅಯೋಧ್ಯೆ ರಾಮಮಂದಿರದ ಕಲಾಕೃತಿ ರಚಿಸಿ ಗಮನ ಸೆಳೆದಿದ್ದಾರೆ. ಸುಮಾರು ಎಂಟು ತಾಸುಗಳಲ್ಲಿ ಇದನ್ನು ರಚಿಸಿದ್ದು, ಅವರ 100ನೇ ಕಲಾಕೃತಿ ಇದಾಗಿದೆ. ಎತ್ತರ 4.5 ಸೆಂ.ಮೀ, ಉದ್ದ 4.5 ಸೆಂ.ಮೀ ಹಾಗೂ ಅಗಲ 5 ಸೆಂ.ಮೀ ಇದೆ ಎಂದು ನಳಿನಾ ತಿಳಿಸಿದ್ದಾರೆ.

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

ram mandir imp

Ayodhya: ವ್ಯಾಟಿಕನ್‌, ಮೆಕ್ಕಾ ಮೀರಿಸಲಿದೆ- ವರ್ಷಕ್ಕೆ ಐದು ಕೋಟಿ ಭಕ್ತರು ಭೇಟಿ ನಿರೀಕ್ಷೆ

ram mandir 2

Ayodhya: ಅಯೋಧ್ಯೆಯಲ್ಲಿ ಕರ್ನಾಟಕ ಸರಕಾರದಿಂದ ಅತಿಥಿಗೃಹ ?

yogi ram mandir

Ayodhya: ಭೇಟಿ ಬಗ್ಗೆ ಹತ್ತು ದಿನ ಮೊದಲೇ ತಿಳಿಸಿ: ವಿವಿಐಪಿಗಳಿಗೆ ಯೋಗಿ ಸರಕಾರದ ಕೋರಿಕೆ

ram mandir 2

Ram Mandir: ಭಕ್ತ ಪ್ರವಾಹ- ರಾಮನ ದರ್ಶನ ಸಮಯ ವಿಸ್ತರಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.