ಲಾಂಗ್ ಹಿಡಿದು ರಗಡ್ ಲುಕ್ ನಲ್ಲಿ ಎಂಟ್ರಿ ಕೊಟ್ಟ ‘ತಲೈವಾ’ : ಅಣ್ಣಾತೆ ಮೋಷನ್ ಪೋಸ್ಟರ್ ಔಟ್
Team Udayavani, Sep 11, 2021, 10:52 AM IST
ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಅಣ್ಣಾತೆ’ ಸಿನಿಮಾ ಭಾರೀ ಸದ್ದು ಮಾಡುತ್ತಿದೆ. ಗಣೇಶ ಚತುರ್ಥಿ ಅಂಗವಾಗಿ ರಜನಿ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಅನ್ನು ಚಿತ್ರತಂಡ ರಿಲೀಸ್ ಮಾಡಿದೆ.
ಫಸ್ಟ್ ಲುಕ್ ನಲ್ಲಿ ವೈಟ್ ಅಂಡ್ ವೈಟ್ ಬಟ್ಟೆ ಧರಿಸಿ ‘ತಲೈವಾ’ ಟ್ರಡಿಷನಲ್ ಆಗಿ ಕಾಣಿಸಿದ್ದಾರೆ. ಇನ್ನು ಯೂಟ್ಯೂಬ್ ನಲ್ಲಿ ರಿಲೀಸ್ ಆಗಿರುವ ಮೋಷನ್ ಪೋಸ್ಟರ್ ನಲ್ಲಿ ರಗಡ್ ಲುಕ್ ನಲ್ಲಿ ಮಿಂಚಿದ್ದು, ಬೈಕ್ ಏರಿ.. ಲಾಂಗ್ ಹಿಡಿದಿದ್ದಾರೆ. ಇನ್ನು ಹಿನ್ನೆಲೆ ಸಂಗೀತ ಕೂಡ ಅದ್ದೂರಿಯಾಗಿದ್ದು ಅಭಿಮಾನಿಗಳಿಗೆ ಸಿನಿಮಾ ಮನರಂಜನೆಯ ಹಬ್ಬದೂಟವನ್ನು ಉಣಬಡಿಸುವುದರಲ್ಲಿ ಡೌಟ್ ಇಲ್ಲ ಎನ್ನುವಂತಿದೆ.
The first look we’ve all been waiting for has finally arrived and I can’t keep calm! ?❤️
Here’s to an adventurous journey ahead ? @rajinikanth @directorsiva #Nayanthara @immancomposer @khushsundar #Meena @sooriofficial @AntonyLRuben @dhilipaction @vetrivisuals @sunpictures pic.twitter.com/EyioJUQVzg
— Keerthy Suresh (@KeerthyOfficial) September 10, 2021
ದರ್ಬಾರ್ ಸಿನಿಮಾ ನಂತ್ರ ತೆರೆ ಕಾಣುತ್ತಿರುವ ರಜನಿ ಸಿನಿಮಾ ಇದಾಗಿದೆ. ಇನ್ನು ಅಣ್ಣಾತೆ ಸಿನಿಮಾ ಲಾಕ್ ಡೌನ್ ನಲ್ಲಿ ಮೂರ ಬಾರಿ ಚಿತ್ರೀಕರಣವನ್ನು ಮುಂದೂಡಿತ್ತು. ಅಲ್ಲದೆ ರಜನಿಕಾಂತ್ ಕೂಡ ಕೋವಿಡ್ ಸೋಂಕಿಗೆ ತುತ್ತಾಗಿದ್ದ ಕಾರಣ ಶೂಟಿಂಗ್ ಕೊಂಚಮಟ್ಟಿಗೆ ತಡವಾಗಿತ್ತು.
ಸದ್ಯ ಎಲ್ಲಾ ಶೂಟಿಂಗ್ ಮುಗಿಸಿರುವ ಚಿತ್ರತಂಡ ರಿಲೀಸ್ ಗೆ ರೆಡಿಯಾಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಇದೇ ನವೆಂಬರ್ 4ಕ್ಕೆ ಅಣ್ಣಾತೆ ತೆರೆ ಕಾಣಲಿದೆ. ಇನ್ನು ಚಿತ್ರಕ್ಕೆ ಶಿವ ನಿರ್ದೇಶನ ಮಾಡುತ್ತಿದ್ದು, ಕಲಾನಿದಿ ಮರನ್ ಬಂಡವಾಳ ಹೂಡಿದ್ದಾರೆ. ಸಿನಿಮಾದಲ್ಲಿ ರಜನಿಕಾಂತ್ ಜೊತೆಯಲ್ಲಿ ಕೀರ್ತಿ ಸುರೇಶ್, ನಯನತಾರಾ, ಗೋಪಿ ಚಂದ್, ಜಾಕಿಶ್ರಾಫ್, ಮೀನಾ, ಪ್ರಕಾಶ್ ರಾಜ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ
MUST WATCH
ಹೊಸ ಸೇರ್ಪಡೆ
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು