![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
Aditi Prabhudeva; ‘ಅಲೆಕ್ಸಾ’ದಲ್ಲಿ ಖಡಕ್ ಪೊಲೀಸ್ ಆದ ಅದಿತಿ
Team Udayavani, Dec 3, 2023, 6:02 PM IST
![aditi prabhudeva](https://www.udayavani.com/wp-content/uploads/2023/12/aditi-620x342.jpg)
“ಚಿಕ್ಕ ವಯಸ್ಸಿನಲ್ಲಿ ನನಗೆ ಪೊಲೀಸ್ ಆಫೀಸರ್ ಆಗಬೇಕೆಂಬ ಕನಸಿತ್ತು. ನಿಜ ಜೀವನದಲ್ಲಿ ಅಂಥದ್ದೊಂದು ಕನಸು ನನಸಾಗಲಿಲ್ಲ. ಆದರೆ ಈಗ ಸಿನಿಮಾದಲ್ಲಿ ಆ ಕನಸು ನನಸಾಗಿದೆ’ ಇದು ನಟಿ ಅದಿತಿ ಪ್ರಭುದೇವ ಮಾತು.
ಅಂದಹಾಗೆ, ಮದುವೆಯ ಬಳಿಕ ಅದಿತಿ ಪ್ರಭುದೇವ ಅಭಿನಯಿಸಿರುವ ಮತ್ತೊಂದು ಸಿನಿಮಾ “ಅಲೆಕ್ಸಾ’ ಬಿಡುಗಡೆಗೆ ರೆಡಿಯಾಗಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿರುವ ಅದಿತಿ ಪ್ರಭುದೇವ, ಇದೇ ಮೊದಲ ಬಾರಿಗೆ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ “ಅಲೆಕ್ಸ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದಿತಿ ಪ್ರಭುದೇವ ತಮ್ಮ ಬಾಲ್ಯದ ಕನಸು ತೆರೆಮೇಲೆ ನನಸಾದ ಬಗ್ಗೆ ಮಾತನಾಡುವ ಅದಿತಿ, “ಚಿಕ್ಕ ವಯಸ್ಸಿನಲ್ಲಿ ಪೊಲೀಸ್ ಆಫೀಸರ್ ಆಗಬೇಕೆಂಬ ಕನಸು ನನಸಾಗಲಿಲ್ಲ. ಆಮೇಲೆ ಮಾಲಾಶ್ರೀ ಅವರ ಸಿನಿಮಾಗಳನ್ನು ನೋಡುತ್ತಿದ್ದಾಗ, ನನಗೂ ಈ ಫೈಟ್ಸ್, ಆ್ಯಕ್ಷನ್ಸ್ ಮಾಡಬೇಕು ಅಂಥ ಅನಿಸುತ್ತಿತ್ತು. ಈಗ ಅದೆಲ್ಲವೂ “ಅಲೆಕ್ಸ’ ಸಿನಿಮಾದಲ್ಲಿ ನನಸಾಗಿದೆ. ಈ ಸಿನಿಮಾದಲ್ಲಿ ನಾನು ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದೇನೆ. ಇದೊಂದು ಕ್ರೈಂ-ಥ್ರಿಲ್ಲರ್ ಶೈಲಿಯ ಸಿನಿಮಾ. ಇದರಲ್ಲಿ ನನಗೆ ಎರಡು-ಮೂರು ಭರ್ಜರಿ ಆ್ಯಕ್ಷನ್ಸ್, ಫೈಟ್ಸ್ ಸೀನ್ಸ್ ಇದೆ. ಮೊದಲ ಬಾರಿಗೆ ಈ ಥರದ ಪಾತ್ರದಲ್ಲಿ ಅಭಿನಯಿಸಿದ್ದು, ಶೂಟಿಂಗ್ ಮಾಡಿದ್ದು ಎಲ್ಲವೂ ಹೊಸಥರನಾಗಿತ್ತು’ ಎಂದಿದ್ದಾರೆ.
“ಸಿನಿಮಾದಲ್ಲಿ ನಾನು ಮಾಡಿರುವ ಆ್ಯಕ್ಷನ್ ದೃಶ್ಯಗಳನ್ನು ರವಿವರ್ಮ ಮತ್ತು ಮಾಸ್ ಮಾದ ಅವರು ಕಂಪೋಸ್ ಮಾಡಿದ್ದಾರೆ. ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣದಲ್ಲಿ ಸಣ್ಣ-ಪುಟ್ಟ ಗಾಯಗಳಾಯಿತು. ಆದರೂ ಮಾನಿಟರ್ನಲ್ಲಿ ನನ್ನ ಆ್ಯಕ್ಷನ್ಸ್ ಸೀನ್ಸ್ ನೋಡಿದಾಗ, ಇನ್ನೂ ಹೆಚ್ಚಾಗಿ ಆ್ಯಕ್ಷನ್ಸ್ ಮಾಡಬೇಕು ಅನಿಸುತ್ತಿತ್ತು. ಹೀರೋಗಳಿಗೆ ಮಾತ್ರ ಆ್ಯಕ್ಷನ್ಸ್, ಫೈಟ್ಸ್ ಇರುತ್ತದೆ. ನನಗೂ ಅಂಥದ್ದೇ ಆ್ಯಕ್ಷನ್ಸ್-ಫೈಟ್ಸ್ ಮಾಡಬೇಕು ಎಂಬ ಆಸೆ ಈ ಸಿನಿಮಾದಲ್ಲಿ ಈಡೇರಿದೆ’ ಎಂದಿದ್ದಾರೆ ಅದಿತಿ ಪ್ರಭುದೇವ.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.