ಅಕ್ಷಿ ತಂಡದ ಮೊಗದಲ್ಲಿ ನಗು
Team Udayavani, Mar 28, 2021, 4:23 PM IST
ಹೊಸಬರೇ ಸೇರಿ ಮಾಡಿರುವ “ಅಕ್ಷಿ’ ಚಿತ್ರ ತಂಡ ಖುಷಿಯಾಗಿದೆ. ಅದಕ್ಕೆ ಕಾರಣ ಎಲ್ಲರಿಗೂ ಗೊತ್ತೇ ಇದೆ. ಇತ್ತೀಚೆಗೆ ಪ್ರಾದೇಶಿಕ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ “ಅಕ್ಷಿ’ ಆ ಖುಷಿಯನ್ನು ಹಂಚಿಕೊಳ್ಳಲು ಇತ್ತೀಚೆಗೆ ಮಾಧ್ಯಮದ ಮುಂದೆ ಬಂದಿತ್ತು.
ಚಿತ್ರದ ನಿರ್ಮಾಪಕ ಕಲಾದೇಗುಲ ಶ್ರೀನಿವಾಸ್ ಮಾತನಾಡಿ, “ಈ ಸಿನಿಮಾ ಮಾಡಲು ನಿಜವಾದ ಪ್ರೇರಣೆ ಡಾ.ರಾಜ್ ಕುಮಾರ್. ರಾಜ್ಕುಮಾರ್ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಆ ವಿಚಾರ ನನಗೆ ಕುತೂಹಲ ಹುಟ್ಟಿಸಿ, ಅದೇ ಅಂಶವನ್ನಿಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ನಮಗೆ ಒಳ್ಳೆಯ ಸಿನಿಮಾ ಮಾಡಬೇಕೆಂಬ ಉದ್ದೇಶವಷ್ಟೇ ಇತ್ತು. ಈಗ ನಮ್ಮ ಪ್ರಯತ್ನವನ್ನು ಗುರುತಿಸಿ ಪ್ರಶಸ್ತಿ ನೀಡಿದ್ದಾರೆ’ ಎಂದರು.
ಮನೋಜ್ ಕುಮಾರ್ ಈ ಚಿತ್ರದ ನಿರ್ದೇಶಕರು. “ಒಂದೊ ಳ್ಳೆಯ ಸಿನಿಮಾ ಮಾಡಬೇಕೆಂಬ ಉದ್ದೇ ಶ ದಿಂದ ಈ ಸಿನಿಮಾವನ್ನು ಆರಂಭಿಸಿದೆವು. ಈಗ ನಮ್ಮ ಶ್ರಮ ವನ್ನು ಗುರುತಿಸಿದ್ದಾ ರೆ’ ಎಂದು ಸಂತಸ ಹಂಚಿ ಕೊಂಡ ರು. ಚಿತ್ರ ದಲ್ಲಿ ಗೋವಿಂದೇ ಗೌಡ, ಇಳಾ ವಿಟ್ಲ, ಬಾಲ ಕಲಾವಿದರಾದ ಮಿಥುನ್, ನಾಗರಾಜ್, ಕಸ್ತೂರಿ ಸೇರಿ ದಂತೆ ಅನೇ ಕರು ನಟಿಸಿದ್ದಾ ರೆ.