ಕನ್ನಡದಲ್ಲೂ ಅಮೆಜಾನ್‌, ನೆಟ್‌ ಫ್ಲಿಕ್ಸ್‌ ಮಾದರಿ ಓಟಿಟಿ?

ಹೊಸಬರಿಗೊಂದು ವೇದಿಕೆ, ಸದ್ದಿಲ್ಲದೆ ನಡೆದಿರುವ ಪ್ರಯತ್ನ

Team Udayavani, Apr 21, 2020, 10:09 AM IST

ಕನ್ನಡದಲ್ಲೂ ಅಮೆಜಾನ್‌, ನೆಟ್‌ ಫ್ಲಿಕ್ಸ್‌ ಮಾದರಿ ಓಟಿಟಿ?

ಲಾಕ್‌ಡೌನ್‌ನಿಂದ ಎಲ್ಲಾ ಕ್ಷೇತ್ರಕ್ಕೂ ಪೆಟ್ಟು ಬಿದ್ದಿದೆ. ಇದಕ್ಕೆ ಸಿನಿಮಾರಂಗ ಹೊರತಲ್ಲ. ಚಿತ್ರಮಂದಿರಗಳೀಗ ಬಿಕೋ ಎನ್ನುತ್ತಿವೆ. ಪ್ರತಿಯೊಬ್ಬರೂ ಈಗ ಅಮೆಜಾನ್‌,ನೆಟ್‌ ಫ್ಲಿಕ್ಸ್‌ ಇನ್ನಿತರೆ ಡಿಜಿಟಲ್‌ ಫ್ಲಾಟ್‌ಫಾರ್ಮ್ ಮೊರೆ ಹೋಗಿ, ತಮ್ಮಿಷ್ಟದ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು ಮನರಂಜನೆ ಪಡೆಯುತ್ತಿದ್ದಾರೆ. ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುವ ಮಂದಿ ಈಗಾಗಲೇ ಇವುಗಳ ಮೂಲಕವೇ ಹೊಸಬಗೆಯ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು ಚಿತ್ರ ನೋಡುತ್ತಿದ್ದಾರೆ. ಆ ಮೂಲಕ ತಮ್ಮ ಸಮಯವನ್ನೂ ಕಳೆಯುತ್ತಿದ್ದಾರೆ. ಹಾಗಾಗಿ, ಈ ಡಿಜಿಟಲ್‌ ಫ್ಲಾಟ್‌ಫಾರ್ಮ್ ಗೆ ಬೇಡಿಕೆ ಹೆಚ್ಚಿದೆ.

ಇಷ್ಟೆಲ್ಲಾ ಆಗಿದ್ದರೂ, ಈ ಓಟಿಟಿಗಳಲ್ಲಿ ಕನ್ನಡದ ಸಿನಿಮಾಗಳಾಗಲಿ, ಧಾರಾವಾಹಿಗಳಾಗಲಿ, ವೆಬ್‌ಸೀರಿಸ್‌ಗಳಾಗಲಿ ಹೆಚ್ಚಾಗಿ ಕಾಣಸಿಗಲ್ಲ. ಬೆರಳೆಣಿಕೆಯಷ್ಟು ಮಾತ್ರ ನೋಡಬಹುದಾಗಿದೆ. ಉಳಿದಂತೆ ಪರಭಾಷೆಯ ಚಿತ್ರಗಳು, ವೆಬ್‌ಸೀರಿಸ್‌ಗಳ ಅಬ್ಬರವೇ ಜಾಸ್ತಿ. ಈ ನಿಟ್ಟಿನಲ್ಲೀಗ ಕನ್ನಡದ ಎಲ್ಲಾ ಸಿನಿಮಾಗಳು, ಧಾರಾವಾಹಿಗಳು, ವೆಬ್‌ ಸೀರಿಸ್‌ಗಳು ಒಂದೇ ಓಟಿಟಿ ಅಡಿಯಲ್ಲಿ ಸಿಕ್ಕರೆ ಹೇಗೆ?

ಹೌದು, ಇಂಥದ್ದೊಂದು ಒಳ್ಳೆಯ ಯೋಚನೆಗೆ ಈಗಾಗಲೇ ಪ್ರಯತ್ನ ಶುರುವಾಗಿದೆ. ಇಷ್ಟರಲ್ಲೇ ಅಮೆಜಾನ್‌, ನೆಟ್‌ ಫ್ಲಿಕ್ಸ್‌ ಮಾದರಿಯಲ್ಲೇ ಪ್ರತ್ಯೇಕ ಓಟಿಟಿ ಶುರು ಮಾಡಿ, ಕನ್ನಡಕ್ಕೆ ಆದ್ಯತೆ ಕೊಡಬಾರದೇಕೆ ಎಂಬ ಚಿಂತನೆ ನಡೆದಿದ್ದು, ಸಾಕಷ್ಟು ಚರ್ಚೆಗಳು ಶುರುವಾಗಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಕೆಲವೇ ತಿಂಗಳಲ್ಲಿ ಈ ಶುಭ ಕಾರ್ಯಕ್ಕೆ ಚಾಲನೆ ಸಿಗಬಹುದು. ಅಂದಹಾಗೆ, ಈ ಕುರಿತಂತೆ ಈಗಾಗಲೇ ಆನ್‌ಲೈನ್‌ ಸಮೀಕ್ಷೆ ಕೂಡ ನಡೆದಿದೆ. ಇದಕ್ಕೆ ಚಾಲನೆ ನೀಡಬೇಕು ಎಂಬ ನಿಟ್ಟಿನಲ್ಲಿ ನಿರ್ದೇಶಕ ಲೂಸಿಯಾ ಖ್ಯಾತಿಯ ಪವನ್‌ ಕುಮಾರ್‌ ಅವರು, ಕನ್ನಡಕ್ಕೆ ಪ್ರತ್ಯೇಕ ಓಟಿಟಿಯ ಅಗತ್ಯತೆ ಬಗ್ಗೆ ತಮ್ಮ ಸಾಮಾಜಿಕ ತಾಣದಲ್ಲಿ ಬರೆದುಕೊಳ್ಳುವ ಮೂಲಕ ವಿಡಿಯೋದಲ್ಲಿ ಅದರ ಕುರಿತು ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ. ಕನ್ನಡ ಸಿನಿಮಾ ಹಾಗು ಧಾರಾವಾಹಿಗಳ ಕುರಿತಂತೆ ಆನ್‌ಲೈನ್‌ ಸಮೀಕ್ಷೆ ನಡೆಸಿರುವ ಅವರು, ಕ್ರೈಂ, ಆ್ಯಕ್ಷನ್‌, ಥ್ರಿಲ್ಲರ್‌ ಕಂಟೆಂಟ್‌ ಇರುವ ಸಿನಿಮಾ ಹಾಗು ವೆಬ್‌ಸೀರಿಸ್‌ ಮಾಡಿಕೊಡುವಂತೆ ಅಮೆಜಾನ್‌, ನೆಟ್‌ ಫ್ಲಿಕ್ಸ್‌ ಬೇಡಿಕೆ ಇಟ್ಟಿವೆ.

ಹೀಗಾಗಿ, ಕನ್ನಡದ ಕಂಟೆಂಟ್‌ ರೆಡಿ ಮಾಡಿ ಅವರಿಗೆ ಕೊಟ್ಟರೆ, ಅಲ್ಲಿ ಕನ್ನಡಕ್ಕೆ ಹೆಚ್ಚು ಪ್ರಾಧಾನ್ಯತೆ ಸಿಗಲ್ಲ. ಅದರ ಬದಲು, ಕನ್ನಡಕ್ಕೆ ಆದರದ್ದೇ ಆದ ಪ್ರತ್ಯೇಕ ಓಟಿಟಿ ಇದ್ದರೆ, ಇಲ್ಲಿನ ಹೊಸ ಸಿನಿಮಾಗಳಿಗೆ, ಹೊಸ ನಿರ್ದೇಶಕರಿಗೊಂದು ವೇದಿಕೆ ಕಲ್ಪಿಸಿದಂತಾಗುತ್ತದೆ ಎಂಬ ಅಭಿಪ್ರಾಯ ಅವರದು. ಅವರೀಗ ಇದಕ್ಕೊಂದು ಹೊಸ ಯೋಚನೆ ಮಾಡಿದ್ದಾರೆ. ರಾಜ್ಯದ ಒಟ್ಟಾರೆ ಜನಸಂಖ್ಯೆಯ 0.2% ರಷ್ಟು ಜನರು ವರ್ಷಕ್ಕೆ 1 ಸಾವಿರ ರುಪಾಯಿ ನೀಡಿದರೆ, 12 ಸಿನಿಮಾ ತಯಾರಿಸಿ, ಉಚಿತವಾಗಿಯೇ ಜನರಿಗೆ ನೋಡಲು ಅವಕಾಶ ಕಲ್ಪಿಸಿಕೊಡಬಹುದು. ಇದರಿಂದ ಹಣ ಗಳಿಸಲೂಬಹುದು ಎಂದ ಯೋಚನೆ ಮಾಡಿದ್ದಾರೆ. ಇದರಿಂದ ಹೊಸ ಕಥೆಗಳಿಗೆ ಆವಕಾಶ ಸಿಗುತ್ತದೆ, ಹೊಸಬರಿಗೂ ಒಂದು ವೇದಿಕೆ ಸಿಗುತ್ತದೆ ಎಂಬ ಉದ್ದೇಶ ಅವರದು.

ಅವರ ಈ ಯೋಚನೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಬೆಂಬಲಿಸಿದ್ದಾರೆ. ಅದೇನೆ ಇರಲಿ, ಈ ಯೋಚನೆಯೇನೋ ಸರಿಯಾಗಿದೆ. ಆದಷ್ಟು ಬೇಗ ಅದು ಕಾರ್ಯಗತವಾದರೆ, ಕನ್ನಡ ಚಿತ್ರರಂಗದ ಮಾರ್ಕೆಟ್‌ ಇನ್ನಷ್ಟು ವಿಸ್ತಾರವಾಗುವುದರಲ್ಲಿ ಅನುಮಾನವಿಲ್ಲ. ಇದು ಹೊಸಬರಿಗೂ ಒಂದೊಳ್ಳೆಯ ಅವಕಾಶವೂ ಹೌದು.

ಟಾಪ್ ನ್ಯೂಸ್

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

ʼToxicʼನಲ್ಲಿ ಯಶ್‌ ಜೊತೆ ಕರೀನಾ ನಟಿಸೋದು ಪಕ್ಕಾ ಆದರೆ ನಾಯಕಿಯಾಗಿ ಅಲ್ಲ,ಮತ್ಯಾವ ಪಾತ್ರ?

ʼToxicʼನಲ್ಲಿ ಯಶ್‌ ಜೊತೆ ಕರೀನಾ ನಟಿಸೋದು ಪಕ್ಕಾ ಆದರೆ ನಾಯಕಿಯಾಗಿ ಅಲ್ಲ,ಮತ್ಯಾವ ಪಾತ್ರ?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.