ಬಡವ ರಾಸ್ಕಲ್‌ ಸಕ್ಸಸ್‌ ಖುಷಿಯಲ್ಲಿ ಅಮೃತಾ


Team Udayavani, Jan 12, 2022, 9:53 AM IST

ಬಡವ ರಾಸ್ಕಲ್‌ ಸಕ್ಸಸ್‌ ಖುಷಿಯಲ್ಲಿ ಅಮೃತಾ

“ಸಿನಿಮಾ ಇಂಡಸ್ಟ್ರಿಗೆ ಬಂದವರೆಲ್ಲರೂ ಒಂದಾದ್ರೂ ಬಿಗ್‌ ಸಕ್ಸಸ್‌ ಸಿಗಬೇಕು ಅಂಥ ಕಾಯ್ತಿರುತ್ತಾರೆ. ಆದ್ರೆ ಇಲ್ಲಿ ಕೆಲವರಿಗೆ ಬೇಗ ಸಕ್ಸಸ್‌ ಸಿಗುತ್ತೆ. ಇನ್ನು ಕೆಲವರಿಗೆ ಲೇಟ್‌ ಆಗಿ ಸಕ್ಸಸ್‌ ಸಿಗುತ್ತೆ. ಆದ್ರೆ ಸಿನಿಮಾ ಸಕ್ಸಸ್‌ ವಿಷಯದಲ್ಲಿ ನಾನಂತೂ ತುಂಬಾ ಅದೃಷ್ಟವಂತೆ ಎಂದೇ ಹೇಳ್ಬೇಕು. ನಾಲ್ಕೈದು ವರ್ಷದ ಹಿಂದೆ ಸಿನಿಮಾ ಇಂಡಸ್ಟ್ರಿಗೆ ಬಂದಾಗ ಏನು ಆಗ್ಬೇಕು ಅಂಥ ಕನಸು ಕಂಡಿದ್ದೆನೋ, ಅದು ಈಗ ನನಸಾಗಿದೆ. ಒಮ್ಮೆ ಹಿಂದಿರುಗಿ ನೋಡಿದ್ರೆ, ಇಲ್ಲಿಗೆ ಬಂದಿರುವುದಕ್ಕೂ ಖುಷಿಯಿದೆ…’ ಇದು ನಟಿ ಅಮೃತಾ ಅಯ್ಯಂಗಾರ್‌ ಮಾತು.

ಇತ್ತೀಚೆಗಷ್ಟೇ ಅಮೃತಾ ಅಯ್ಯಂಗಾರ್‌ ಅಭಿನಯದ “ಬಡವ ರಾಸ್ಕಲ್‌’ ಸಿನಿಮಾ ಬಿಡುಗಡೆಯಾಗಿದೆ. ಸಿನಿಮಾ ತೆರೆಕಂಡ ಎಲ್ಲ ಕೆಂದ್ರಗಳಲ್ಲೂ ಯಶಸ್ವಿ ಪ್ರದರ್ಶನ ಕಂಡಿದ್ದು, ಒಮಿಕ್ರಾನ್‌ ಆತಂಕ, ಲಾಕ್‌ಡೌನ್‌ ಭಯದ ನಡುವೆಯೂ “ಬಡವ ರಾಸ್ಕಲ್‌’ ಬಾಕ್ಸ್ ಆಫೀಸ್‌ನಲ್ಲೂ ಗೆಲುವಿನ ನಗೆ ಬೀರಿದೆ. ಇನ್ನು “ಬಡವ ರಾಸ್ಕಲ್‌’ ಸಿನಿಮಾದಲ್ಲಿ ಅಮೃತಾ ಅಯ್ಯಂಗಾರ್‌ ನಾಯಕಿಯಾಗಿ ಎರಡು ಶೇಡ್‌ನ‌ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಅಮೃತಾಅವರ ಅಭಿನಯಕ್ಕೂ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದೇ ಖುಷಿಯಲ್ಲಿ “ಉದಯವಾಣಿ’ ಜೊತೆ ಮಾತಿಗೆ ಸಿಕ್ಕ ಅಮೃತಾ ಅಯ್ಯಂಗಾರ್‌ ಒಂದಷ್ಟು ವಿಷಯಗಳನ್ನು ಹಂಚಿಕೊಂಡರು. “ಸುಮಾರು ಎರಡೂವರೆ ವರ್ಷದಿಂದ “ಬಡವ ರಾಸ್ಕಲ್‌’ ಸಿನಿಮಾಕ್ಕಾಗಿ ಇಡೀ ತಂಡ ಸಾಕಷ್ಟು ಪರಿಶ್ರಮವಹಿಸಿ ಕೆಲಸ ಮಾಡಿದೆ. ಕೋವಿಡ್‌ ಆತಂಕ, ಲಾಕ್‌ಡೌನ್‌ ಭಯದ ನಡುವೆಯೇ ಸಿನಿಮಾ ಮಾಡಿದ್ದೆವು. ಕೊನೆಗೆ ಇದೇ ಭಯದ ನಡುವೆಯೇ ಸಿನಿಮಾ ರಿಲೀಸ್‌ ಕೂಡ ಮಾಡಿದ್ದೆವು. ಕೊನೆಗೆ ನಮ್ಮ ನಿರೀಕ್ಷೆಯಂತೆ, ಸಿನಿಮಾ ಆಡಿಯನ್ಸ್‌ಗೆ ಇಷ್ಟವಾಯ್ತು. “ಬಡವ ರಾಸ್ಕಲ್‌’ ಸಕ್ಸಸ್‌ನಿಂದ ಇಡೀ ಟೀಮ್‌ ಖುಷಿಯಾಗಿದೆ. ಎಲ್ಲರೂ ಇಂಥದ್ದೊಂದು ಸಕ್ಸಸ್‌ ನಿರೀಕ್ಷೆಯಲ್ಲಿದ್ದರು. ಕೊನೆಗೂ ನಮ್ಮೆಲ್ಲರ ಕನಸು ನನಸಾಗಿದೆ. ನನ್ನ ಮಟ್ಟಿಗೆ ಹೇಳುವುದಾದ್ರೆ, ಇದೊಂದುಎಮೋಶನಲ್‌ ಸಕ್ಸಸ್‌ ಸಿನಿಮಾ’ ಅನ್ನೋದು ಅಮೃತಾ ಮಾತು.

“ಬಡವ ರಾಸ್ಕಲ್‌’ ಸಿನಿಮಾದಲ್ಲಿ ತಮ್ಮ ಪಾತ್ರಕ್ಕೆ ಸಿಗುತ್ತಿರುವ ಮೆಚ್ಚುಗೆಯ ಬಗ್ಗೆ ಮಾತನಾಡುವ ಅಮೃತಾ, “ನಾನು ಈ ಹಿಂದೆ ಅಭಿನಯಿಸಿದ್ದ “ಲವ್‌ ಮಾಕ್ಟೇಲ್‌’ ಮತ್ತು “ಪಾಪ್‌ ಕಾರ್ನ್ ಮಂಕಿ ಟೈಗರ್‌’ ಎರಡೂ ಸಿನಿಮಾಗಳೂ ಹಿಟ್‌ ಆಗಿದ್ದವು. ಆದ್ರೆ, ಈ ಎರಡೂ ಸಿನಿಮಾಗಳಲ್ಲೂ ಹೀರೋ ನನಗೆ ಕೈಕೊಟ್ಟು ಹೋಗುವಂಥ ಪಾತ್ರಗಳೇ ಸಿಕ್ಕಿದ್ದವು. ಆ ಎರಡೂ ಸಿನಿಮಾಗಳಲ್ಲಿ ನನ್ನ ಪಾತ್ರ ನೋಡಿದ ಅನೇಕರು, “ಛೇ… ಪಾಪ.., ನಿಮ್ಮ ಪಾತ್ರಕ್ಕೆ ಸಿನಿಮಾದಲ್ಲಿ ಹೀಗಾಗಬಾರದಿತ್ತು…’ ಅಂತಿದ್ರು.

ಆದ್ರೆ “ಬಡವರಾಸ್ಕಲ್‌’ ಸಿನಿಮಾದಲ್ಲಿ ಹಾಗಾಗಲಿಲ್ಲ. ಇಲ್ಲಿ ಒಂದೇ ಸಿನಿಮಾದಲ್ಲಿ ಎರಡು ಶೇಡ್‌ನ‌ ಪಾತ್ರ ನನಗೆ ಸಿಕ್ಕಿದೆ.ಫ‌ಸ್ಟ್‌ಹಾಫ್ ಒಂದು ಲುಕ್‌, ಸೆಕೆಂಡ್‌ ಹಾಫ್ ಇನ್ನೊಂದು ಲುಕ್‌. ಎರಡೂ ಲುಕ್‌ನಲ್ಲೂಅಭಿನಯಕ್ಕೆ ಸಾಕಷ್ಟು ಅವಕಾಶವಿತ್ತು. ನನಗೂ ಈ ಥರದ ಕ್ಯಾರೆಕ್ಟರ್‌ ತುಂಬಚಾಲೆಂಜಿಂಗ್‌ ಆಗಿತ್ತು. ನಾನು ನನ್ನಕೈಲಾದ ಮಟ್ಟಿಗೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದೆ. ಸಿನಿಮಾ ರಿಲೀಸ್‌ ಆದಮೇಲೆ ನನ್ನ ಪಾತ್ರ ನೋಡಿದಆಡಿಯನ್ಸ್‌ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ’ ಎಂದು ತಮ್ಮ ಖುಷಿ ಹಂಚಿಕೊಳ್ಳುತ್ತಾರೆ.

ಇನ್ನು ಕಳೆದ ಒಂದು ತಿಂಗಳಿನಿಂದ “ಬಡವ ರಾಸ್ಕಲ್‌’ ಸಿನಿಮಾದ ಪ್ರಮೋಶನ್ಸ್‌ಗಾಗಿ ಸಂಪೂರ್ಣ ಸಮಯ ತೆಗೆದಿರಿಸಿರುವ ಅಮೃತಾ ಅಯ್ಯಂಗಾರ್‌, ಚಿತ್ರತಂಡದ ಜೊತೆ ಅರ್ಧದಷ್ಟು ಕರ್ನಾಟಕ ಸುತ್ತಾಡಿ “ಬಡವ ರಾಸ್ಕಲ್‌’ ಪ್ರಚಾರ ಮಾಡಿ ಬಂದಿದ್ದಾರಂತೆ. ಹೋದ ಕಡೆಗಳಲ್ಲಿ ಜನ ಪ್ರೀತಿಯಿಂದ ಬಂದು ಅಮೃತಾ ಅವರ ಪಾತ್ರದ ಬಗ್ಗೆ ಅಭಿನಯದ ಬಗ್ಗೆ ಮಾತನಾಡುತ್ತಿದ್ದಾರಂತೆ.

ಟಾಪ್ ನ್ಯೂಸ್

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

aditya;s kangaroo movie

Aditya; ಟ್ರೇಲರ್ ನಲ್ಲಿ ‘ಕಾಂಗರೂ’ ದರ್ಶನ; ಮೇ.3ರಂದು ತೆರೆಗೆ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.