![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
ಮತ್ತೊಂದು ಚಿತ್ರಕ್ಕೆ ಒಂದಾದ್ರು ಗಣೇಶ-ಸುನಿ
ಚಮಕ್ ಜೋಡಿಯ ಫನ್ ಥ್ರಿಲ್ಲರ್
Team Udayavani, Jan 13, 2020, 7:05 AM IST
![gani-suni](https://www.udayavani.com/wp-content/uploads/2020/01/gani-suni-620x413.jpg)
ನಟ ಗೋಲ್ಡನ್ ಸ್ಟಾರ್ ಗಣೇಶ್ ಸದ್ಯ “ಗಾಳಿಪಟ-2′ ಚಿತ್ರದಲ್ಲಿ ಬಿಝಿ. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರದಲ್ಲಿ ಗಣೇಶ್ ನಟಿ ಸುತ್ತಿದ್ದಾರೆ. ಈಗಾಗಲೇ ಕುದುರೆಮುಖ ಸೇರಿದಂತೆ ಮಲೆ ನಾಡು ಸುತ್ತಮುತ್ತ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ. ಈಗ ಗಣೇಶ್ ಅವರ ಹೊಸ ಸಿನಿಮಾ ಕುರಿತಾದ ಸುದ್ದಿಯೊಂದು ಹೊರ ಬಿದ್ದಿದೆ. ಅದು ಗಣೇಶ್ ಹಾಗೂ ಸಿಂಪಲ್ ಸುನಿ ಕಾಂಬಿನೇಶನ್ ಸಿನಿಮಾ. ಹೌದು, ಸುನಿ ಹಾಗೂ ಗಣೇಶ್ ಅವರ ಕಾಂಬಿನೇಶನ್ನಲ್ಲಿ ಹೊಸ ಸಿನಿಮಾವೊಂದು ಬರಲಿದೆ.
ಈಗಾಗಲೇ ಮಾತುಕತೆಯಾಗಿದ್ದು, ಶೀಘ್ರದಲ್ಲೇ ಸೆಟ್ಟೇರಲಿದೆ. ಈಗಾಗಲೇ ಗಣೇಶ್ ಹಾಗೂ ಸುನಿ ಕಾಂಬಿನೇಶನ್ನಲ್ಲಿ “ಚಮಕ್’ ಸಿನಿಮಾ ಬಂದಿ ರೋದು ನಿಮಗೆ ಗೊತ್ತೇ ಇದೆ. ಆ ಸಿನಿಮಾ ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರ ಕೂಡಾ ಹಿಟ್ಲಿಸ್ಟ್ ಸೇರಿತ್ತು. ಈಗ ಈ ಜೋಡಿ ಮತ್ತೆ ಒಂದಾಗುತ್ತಿದೆ. ಈ ಹೊಸ ಚಿತ್ರವನ್ನು ನಿರ್ಮಿಸುತ್ತಿರೋದು ಸುಪ್ರಿತ್. ಯಾವ ಸುಪ್ರಿತ್ ಎಂದರೆ “ಭರಾಟೆ’ ಸಿನಿಮಾ ತೋರಿಸಬೇಕು.
ಮುರಳಿ ನಾಯಕರಾಗಿದ್ದ “ಭರಾಟೆ’ ಚಿತ್ರ ನಿರ್ಮಿಸಿದ್ದ ಸುಪ್ರಿತ್ ಈಗ ಗಣೇಶ್ ಸಿನಿಮಾ ಮಾಡಲು ಮುಂದಾಗಿದ್ದಾರೆ. ಸದ್ಯ ಸುಪ್ರಿತ್ ಧನ್ವೀರ್ ನಾಯಕರಾಗಿರುವ “ಬಂಪರ್’ ಚಿತ್ರವನ್ನು ನಿರ್ಮಿಸಲು ಮುಂದಾ ಗಿದ್ದು, ಜನವರಿ 15ರಂದು ಚಿತ್ರದ ಮುಹೂರ್ತ ನಡೆಯಲಿದೆ. ಎಲ್ಲಾ ಓಕೆ, ಸುನಿ ಹಾಗೂ ಗಣೇಶ್ ಕಾಂಬಿನೇಶನ್ ಸಿನಿಮಾ ಯಾವಾಗ ಸೆಟ್ಟೇರುತ್ತದೆ ಎಂದರೆ ಅದಕ್ಕೆ ಸದ್ಯ ಉತ್ತರವಿಲ್ಲ.
ಏಕೆಂದರೆ ಇತ್ತ ಕಡೆ ಗಣೇಶ್ ಕೂಡಾ ತಮ್ಮ ಸಿನಿಮಾ ಕಮಿಟ್ಮೆಂಟ್ಗಳಲ್ಲಿ ಬಿಝಿಯಾಗಿದ್ದಾರೆ. ಸುನಿ ಕೂಡಾ ತಮ್ಮ “ಅವತಾರ್ ಪುರುಷ’ ಸಿನಿಮಾದಲ್ಲಿ ಬಿಝಿ. ಆ ಚಿತ್ರದ ಹಾಡುಗಳ ಚಿತ್ರೀಕರಣ ಇನ್ನಷ್ಟೇ ಬಾಕಿ ಇದೆ. ಈ ನಡುವೆಯೇ ಪುಷ್ಕರ್ ಜೊತೆ ಮತ್ತೊಂದು ಸಿನಿಮಾ ಕಮಿಟ್ ಆಗಿದ್ದಾರೆ. ಹಾಗಾಗಿ, ಈ ಎಲ್ಲಾ ಕಮಿಟ್ಮೆಂಟ್ಗಳು ಮುಗಿದ ಬಳಿಕ ಹೊಸ ಸಿನಿಮಾ ಸೆಟ್ಟೇರಬಹುದು. ಇದೊಂದು ಫನ್ ಥ್ರಿಲ್ಲರ್ ಜಾನರ್ನೊಂದಿಗೆ ಸಾಗುವ ಸಿನಿಮಾ ಎನ್ನಲಾಗಿದೆ.
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.