45ನೇ ಸಿನಿಮಾ; ಅಂಧೆಯಾದ ಭಾಮ


Team Udayavani, Apr 16, 2017, 3:06 PM IST

99.jpg

ನಟಿ ಭಾಮ ಖುಷಿಯಾಗಿದ್ದಾರೆ. ಆ ಖುಷಿಗೆ ಕಾರಣ, “ರಾಗ’. ಸದ್ಯದಲ್ಲೇ ತೆರೆಗೆ ಬರುತ್ತಿರುವ ಚಿತ್ರದ ಮೇಲೆ ಭಾಮಗೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಅದಕ್ಕೆ ಇನ್ನೊಂದು ಕಾರಣವೂ ಇದೆ. ಅವರೇ ಹೇಳುವಂತೆ, “ಅವರ ವೃತ್ತಿ ಬದುಕಿನಲ್ಲಿ “ರಾಗ’ ಅತ್ಯಂತ ಅಪರೂಪ ಮತ್ತು ಅದ್ಭುತ ಸಿನಿಮಾ’ ಎಂಬುದು ಭಾಮ ಮಾತು.

ಆರಂಭದಿಂದಲೂ “ರಾಗ’ ಒಂದಷ್ಟು ನಿರೀಕ್ಷೆ ಹುಟ್ಟಿಸಿಕೊಂಡೇ ಬಂದಿದೆ. ಇದೇ ಮೊದಲ ಸಲ ಭಾಮ “ರಾಗ’ದಲ್ಲಿ ಅಂಧೆಯಾಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಆ ಪಾತ್ರದಲ್ಲೇ ಜೀವಿಸಿದಷ್ಟು ಸಂತಸದಲ್ಲಿದ್ದಾರೆ. ನಿರ್ದೇಶಕ ಪಿ.ಸಿ.ಶೇಖರ್‌ ಜತೆ “ಅರ್ಜುನ’ ಸಿನಿಮಾ ಮಾಡಿದ್ದ ಭಾಮಗೆ “ರಾಗ’ ಎರಡನೇ ಸಿನಿಮಾ. ಈ ಚಿತ್ರ ಮಾಡೋಕೆ ಮುಖ್ಯ ಕಾರಣ, ಕಥೆ ಮತ್ತು ಪಾತ್ರವಂತೆ.ಅದರೊಂದಿಗೆ ನಿರ್ದೇಶಕರು ಮತ್ತು ಚಿತ್ರತಂಡ ಎಂಬುದನ್ನು ಮರೆಯೋದಿಲ್ಲ ಭಾಮ. “ಮೊದಲು ಶೇಖರ್‌ ಸರ್‌ ಕಥೆ ಹೇಳ್ಳೋಕೆ ಬಂದಾಗ, ನಾರ್ಮಲ್‌ ಆಗಿರುತ್ತೇನೋ ಅಂದುಕೊಂಡಿದ್ದೆ, ಕಥೆ,ಪಾತ್ರ ಬಗ್ಗೆ ತಿಳಿದ ಮೇಲೆ ಮಿಸ್‌ ಮಾಡಿಕೊಳ್ಳಬಾರದು ಅಂತ ಒಪ್ಪಿದೆ. ನಿರ್ದೇಶಕ ಶೇಖರ್‌ ಬಗ್ಗೆ ಹೇಳ್ಳೋದಾದರೆ, ಅವರಿಗೆ ಏನು ಬೇಕು, ಬೇಡ ಎಂಬುದರ ಬಗ್ಗೆ ಸ್ಪಷ್ಟತೆ ಇದೆ. ಎಲ್ಲಾ ಭಾಷೆಯಿಂದಲೂ ಸೇರಿ ನನಗೆ ಇದು 45ನೇ ಸಿನಿಮಾ. ಹಾಗಾಗಿ, ನನಗೂ ಆ ಪಾತ್ರದ ಬಗ್ಗೆ ಕುತೂಹಲವಿತ್ತು. ಅಂಥದ್ದೊಂದು ಪಾತ್ರ ಮಾಡಲೇಬೇಕು ಅಂತ ಚಾಲೆಂಜ್‌ ತೆಗೆದುಕೊಂಡು ಮಾಡಿದ್ದೇನೆ’ ಎನ್ನುತ್ತಲೇ ಪಾತ್ರದ ಬಗ್ಗೆ ವಾಲುತ್ತಾರೆ ಭಾಮ.

ಕಥೆ, ಪಾತ್ರ ಮುಖ್ಯವೇ ಹೊರತು ಹೀರೋ ಅಲ್ಲ: “ನನಗೆ ಕಥೆ ಮತ್ತು ಪಾತ್ರ ಇಷ್ಟವಾಗಿದ್ದೇ ತಡ, ಯಾರು ಹೀರೋ, ಅಂತ ನೋಡಲಿಲ್ಲ. ಯಾಕೆಂದರೆ, ಒಬ್ಬ ನಟಿಗೆ ಕಥೆ, ಪಾತ್ರ ಮುಖ್ಯವೇ ಹೊರತು, ಹೀರೋ ಯಾರೆಂಬುದನ್ನು ನೋಡಲ್ಲ. ಅದರಲ್ಲೂ ನನಗೆ ಕಥೆಯೇ ಎಲ್ಲಾ ಆಗಿದ್ದರಿಂದ, ಒಪ್ಪಿಕೊಂಡೆ. ನನಗೂ ಹೊಸದೇನನ್ನೋ ಮಾಡಬೇಕು ಎನಿಸಿತ್ತು. ಅದೊಂದು ಅಂಧೆ ಪಾತ್ರವಾಗಿದ್ದರಿಂದ, ಚಾಲೆಂಜಿಂಗ್‌ ಎನಿಸಿತು.

ನಿಭಾಯಿಸುತ್ತೇನಾ ಎಂಬ ಭಯವಿತ್ತು. ಒಳ್ಳೇ ತಂಡ ಸಿಕ್ಕಿದ್ದರಿಂದ ಆ ಪಾತ್ರವನ್ನು ಯಶಸ್ವಿಯಾಗಿ ಪೂರೈಸಿದ್ದೇನೆ ಎಂಬ ನಂಬಿಕೆ ಇದೆ. ಇನ್ನು, ಅಂಧೆ ಪಾತ್ರ ಅಂದಾಕ್ಷಣ, ಸುಮ್ಮನೆ ಕಣ್ಣುಮುಚ್ಚಿಕೊಂಡರೆ ಆಗೋದಿಲ್ಲ ಎಂಬುದು ಗೊತ್ತಿತ್ತು. ಒಬ್ಬ ಶ್ರೀಮಂತ ಹುಡುಗಿ ಅವಳು. ಆದರೆ, ಎರಡೂ ಕಣ್ಣುಗಳಿಲ್ಲ. ಎಮೋಷನಲ್‌ ಕ್ಯಾರಿ ಮಾಡಬೇಕಿತ್ತು. ಬಾಡಿಲಾಂಗ್ವೇಜ್‌ ಕೂಡ ಮುಖ್ಯವಾಗಿತ್ತು. ಅಂಧರಿಗೂ, ನಗು, ನೋವು, ನಲಿವು, ಕೋಪ, ಭಯ ಎಲ್ಲವೂ ಇರುತ್ತೆ. ಅದನ್ನೆಲ್ಲಾ ಅವರು ಹೇಗೆ ವ್ಯಕ್ತಪಡಿಸುತ್ತಾರೆ ಎಂಬ ಕುತೂಹಲವೂ ಇತ್ತು. ಅಂಧರ ವಾಕಿಂಗ್‌ ಸ್ಟೈಲು, ಅವರ ಹಾವಭಾವ ಎಲ್ಲವೂ ಹಾಗೆಯೇ ಇರಬೇಕು, ಎಲ್ಲೂ ಅದು ನಾಟಕೀಯ ಎನಿಸಬಾರದು ಎಂಬ ಚಾಲೆಂಜ್‌ ಕೂಡ ಇತ್ತು. ಅದಕ್ಕಾಗಿ ಎರಡು ಅಂಧರ ಶಾಲೆಯ ಬಳಿ ಹೋಗಿ, ಸ್ವಲ್ಪ ದೂರದಲ್ಲೇ ಇದ್ದು, ಕೆಲ ಅಂಧರ ಚಟುವಟಿಕೆಗಳನ್ನೆಲ್ಲಾ ಗಮನಿಸಿದ್ದೆ. ಒಂದು ಐಡಿಯಾ ಬಂತು. ಅದನ್ನೇ ಫಾಲೋ ಮಾಡಿದೆ, ವಕೌìಟ್‌ ಆಯ್ತು’ ಎಂದು ಪಾತ್ರದ ತಯಾರಿ ಕುರಿತು ಹೇಳುತ್ತಾರೆ ಭಾಮ. ಪೇನ್‌ಫ‌ುಲ್‌ ಬಟ್‌ ಸ್ವೀಟ್‌ ಜರ್ನಿ: ಇನ್ನು, ಮಿತ್ರ ಅವರೊಂದಿಗೆ ಕೆಲಸ ಮಾಡಿದ್ದು, ಒಂದು ಮರೆಯದ ಅನುಭವ ಎನ್ನುತ್ತಾರೆ ಭಾಮ. “ನಾನು ಇದುವರೆಗೆ ಮಾಡಿದ ಎಲ್ಲಾ ಚಿತ್ರಗಳ ಕೋ ಆರ್ಟಿಸ್ಟ್‌ ಥರಾನೇ ಮಿತ್ರ ಅವರೂ ಕಂಡರು. ಇನ್ನೊಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ, ನನ್ನ ಬೆಸ್ಟ್‌ ಕೋ-ಆರ್ಟಿಸ್ಟ್‌ ಎನ್ನಬಹುದು. ಇಬ್ಬರ ಕೆಮಿಸ್ಟ್ರಿ ಚೆನ್ನಾಗಿತ್ತು. ಸಿನಿಮಾ ಮುಗಿಯೋವರೆಗೆ, ಕಥೆ, ಪಾತ್ರ, ದೃಶ್ಯಗಳ ಹೊರತಾಗಿ ಬೇರೇನೂ ಚರ್ಚೆ ಮಾಡುತ್ತಿರಲಿಲ್ಲ. ಹಾಗಾಗಿ, ಅವರೊಂದಿಗಿನ ಕೆಲಸ ನನ್ನ ಮರೆಯದ ಚಿತ್ರವನ್ನಾಗಿಸಿತು.

“ರಾಗ’ ಬಗ್ಗೆ ಹೇಳುವುದಾದರೆ, ಅದೊಂದು ಆಪ್ತವೆನಿಸುವ ಸಿನಿಮಾ. ನನ್ನ ಸಿನಿಲೈಫ‌ಲ್ಲಿ ಹೊಸ ಜರ್ನಿ ಅದು. ಕ್ಯಾಮೆರಾಮೆನ್‌ ವೈದಿ, ನಿರ್ದೇಶಕ ಶೇಖರ್‌, ಮಿತ್ರ, ಇತರೆ ತಂತ್ರಜ್ಞರು, ಕಲಾವಿದರ ಸಹಕಾರ, ಪ್ರೋತ್ಸಾಹದಿಂದ “ರಾಗ’ದಲ್ಲಿ ಚೆನ್ನಾಗಿ ಕೆಲಸ ಮಾಡಲು ಸಾಧ್ಯವಾಗಿದೆ. ಇನ್ನು ಇಲ್ಲಿ ಕಷ್ಟ ಎನಿಸಿದ್ದು ಅಂದರೆ, ಎರಡೂ ಕಣ್ಣುಗುಡ್ಡೆಗಳನ್ನು ಮಧ್ಯೆಕ್ಕೆ ತಂದು, ಕ್ಯಾಮೆರಾ ಮುಂದೆ ನಿಲ್ಲಬೇಕು. ಒಂದು ಶಾಟ್‌ಗೆ ಹತ್ತು ಟೇಕ್‌ ಆದರೂ ಆಗುತ್ತಿತ್ತು. 46 ಶಾಟ್‌ಗಳಲ್ಲಿ ಹಾಗೆ ಇರಬೇಕು, ಒಂದೊಂದು ಶಾಟ್‌ 10 ಸಲ ಟೇಕ್‌ ಆಗಿ, 460 ಸಲ ಟೇಕ್‌ ತೆಗೆದುಕೊಂಡು ಕೆಲಸ ಮಾಡಬೇಕಿತ್ತು. ದಿನಕ್ಕೆ ಎರಡು ತಾಸು ನನಗೆ ತಲೆನೋವು ಬರುತ್ತಿತ್ತು. ಮಾತ್ರೆ ತಗೊಂಡು ಕೆಲಸ ಮಾಡಿದೆ. ಅದು ಪಾತ್ರದ ಮೇಲಿನ ಪ್ರೀತಿಗೆ. ಪೈನ್‌ಫ‌ುಲ್‌ ಬಟ್‌, ವೇರಿ ಸ್ವೀಟ್‌ ಜರ್ನಿ’ ಎಂದು ಮಾತು ಮುಗಿಸುತ್ತಾರೆ ಭಾಮ.

ಟಾಪ್ ನ್ಯೂಸ್

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.