ಜಗ್ಗೇಶ್ ಅವರ ಇವತ್ತಿನ ಅಗೌರಕ್ಕೆ ಹೊಣೆ ಯಾರು ?: ನಟ ಪ್ರಥಮ್
Team Udayavani, Feb 23, 2021, 2:07 PM IST
ಬೆಂಗಳೂರು : ನಿನ್ನೆ (ಫೆ.22) ಮೈಸೂರಿನಲ್ಲಿ ನವರಸ ನಾಯಕ ಜಗ್ಗೇಶ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ನಡೆದ ಗಲಾಟೆ ಕುರಿತು ಕನ್ನಡದ ನಟ ಹಾಗೂ ನಿರ್ದೇಶಕ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಅಸಮಾಧಾನ ಹೊರಹಾಕಿದ್ದಾರೆ.
ಘಟನೆ ಕುರಿತು ಪ್ರಸ್ತಾಪಿಸಿರುವ ಪ್ರಥಮ್, ‘ಜಗ್ಗೇಶ್ ಸರ್ ಅಷ್ಟು ವಿನಮ್ರವಾಗಿ ನಾನು ಹೇಳಿಲ್ಲ ಅಂತ ಕೇಳಿಕೊಳ್ಳುತ್ತಿದ್ದರೂ ಕನಿಷ್ಟ ಅವರ ಹಿರಿತನಕ್ಕಾದರೂ ಗೌರವ ಕೊಡಬೇಕಿತ್ತು’ ಎಂದಿದ್ದಾರೆ.
ಜಗ್ಗೇಶ್ ಮಾತಾಡಿದ್ದಾರೆ ಎನ್ನಲಾದ ವಿವಾದಿತ ಆಡಿಯೋ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಪ್ರಥಮ್, ಈಗಿನ ಕುಲಗೆಟ್ಟ ಮುಂದುವರೆದ ತಂತ್ರಜ್ಞಾನದಲ್ಲಿ ಆಡಿಯೋ ಎಡಿಟ್ ಮಾಡಿ ತಿರುಚೋದು ದೊಡ್ಡ ವಿಚಾರನಾ? ಒಂದು ವೇಳೆ ಆಕಸ್ಮಾತ ಜಗ್ಗೇಶ್ ಅವರು ಏನಾದ್ರೂ ಹಾಗೆ ಹೇಳಿಲ್ಲದಿದ್ರೆ ಇವತ್ತಿನ ಅಗೌರಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದ್ದಾರೆ.
ಕಳಕಳಿ!@Jaggesh2 sirಅಷ್ಟು ವಿನಮ್ರವಾಗಿ ನಾನು ಹೇಳಿಲ್ಲ ಅಂತ ಕೇಳಿಕೊಳ್ಳುತ್ತಿದ್ದರೂ ಕನಿಷ್ಟ ಅವ್ರ ಹಿರಿತನಕ್ಕಾದರೂ ಗೌರವ ಕೊಡಬೇಕಿತ್ತು!ಈಗಿನ ಕುಲಗೆಟ್ಟadvancedತಂತ್ರಜ್ಞಾನaudio editಮಾಡಿ ತಿರುಚೋದು ದೊಡ್ಡ ವಿಚಾರನಾ?ನಿಮ್ಮ ಮಾತಿಗೆ ಬರೋದಾದ್ರೆ,ಅಕಸ್ಮಾತ್@Jaggesh2ಏನಾದ್ರೂ ಹಾಗೆಹೇಳಿಲ್ಲದಿದ್ರೆ ಇವತ್ತಿನ ಅಗೌರವಕ್ಕೆ ಹೊಣೆ ಯಾರು?
— Olle Hudga Pratham (@OPratham) February 22, 2021