ಎರಡು ದೇಶದಲ್ಲಿ ಕುಣಿದಾಡಿದ ಕಮರ್ಷಿಯಲ್‌ ವಾಸು


Team Udayavani, Jul 9, 2018, 11:22 AM IST

dangerous.jpg

ಒಂದೇ ಹಾಡು, ಎರಡು ದೇಶದಲ್ಲಿ ಚಿತ್ರೀಕರಣ…! ಇದು ಅನೀಶ್‌ ತೇಜೇಶ್ವರ್‌ ಅಭಿನಯದ “ವಾಸು- ನಾನು ಪಕ್ಕಾ ಕಮರ್ಷಿಯಲ್‌’ ಚಿತ್ರದ ಲೇಟೆಸ್ಟ್‌ ಸುದ್ದಿ. ಇಷ್ಟೇ ಆಗಿದ್ದರೆ, ಈ “ವಾಸು’ ಬಗ್ಗೆ ಹೇಳುವ ಅಗತ್ಯವಿರಲಿಲ್ಲ. ಸ್ವೀಡನ್‌ ಮತ್ತು ನಾರ್ವೆ ದೇಶಗಳಲ್ಲಿ ಚಿತ್ರೀಕರಿಸಿರುವ “ರಂಗೇರಿದೆ..’ ಎಂಬ ಹಾಡಿಗೆ ಪುನೀತ್‌ರಾಜಕುಮಾರ್‌ ಧ್ವನಿಯಾಗಿದ್ದು ಒಂದು ಸುದ್ದಿಯಾದರೆ, ಆ ರೊಮ್ಯಾಂಟಿಕ್‌ ಸಾಂಗ್‌ ಅನ್ನು ಇದೇ ಮೊದಲ ಬಾರಿಗೆ ಸ್ವೀಡನ್‌ ದೇಶದ “ಕಾರ್‌ ಗ್ರೇವ್‌ಯಾರ್ಡ್‌’ ಎಂಬ ಡೇಂಜರಸ್‌ ಜಾಗದಲ್ಲಿ ಚಿತ್ರೀಕರಿಸಿರುವುದು ಇನ್ನೊಂದು ವಿಶೇಷ.

ಹೌದು, ವರ್ಲ್ಡ್ವಾರ್‌ ನಡೆದ ಜಾಗದಲ್ಲಿ ಆ ಹಾಡನ್ನು ಚಿತ್ರೀಕರಿಸಿದ್ದು, ಆ ಸ್ಥಳದಲ್ಲಿ ಡಾಕ್ಯುಮೆಂಟರಿ ಹೊರತುಪಡಿಸಿದರೆ, ಇದುವರೆಗೆ ಅಲ್ಲಿ ಯಾವುದೇ ಸಿನಿಮಾಗಳ ಚಿತ್ರೀಕರಣವಾಗಿಲ್ಲ. ಮೊದಲ ಸಲ ಅದರಲ್ಲೂ ಕನ್ನಡದ “ವಾಸು- ನಾನು ಪಕ್ಕಾ ಕಮರ್ಷಿಯಲ್‌’ ಚಿತ್ರದ ಹಾಡನ್ನು ಅಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ವಿಶೇಷ. ಆ “ಕಾರ್‌ ಗ್ರೇವ್‌ಯಾರ್ಡ್‌’ ವಿಶೇಷತೆ ಅಂದರೆ, ವರ್ಲ್ಡ್ ವಾರ್‌ ನಡೆದ ಸಮಯದಲ್ಲಿ ಲಕ್ಷಾಂತರ ಕಾರುಗಳು ಅಲ್ಲೇ ಕೆಟ್ಟು ನಿಂತು ಹಾಳಾಗಿವೆ. ಆ ಕಾರುಗಳಲ್ಲೇ ಲಕ್ಷಾಂತರ ಜನರು ಪ್ರಾಣ ಬಿಟ್ಟಿದ್ದಾರೆ.

ಒಂದು ರೀತಿಯ ದೆವ್ವಗಳೇ ಓಡಾಡುವ, ಕಿರುಚಾಡುವ ಜಾಗ ಎಂದೇ ಹೇಳಲಾಗುತ್ತದೆ. ಅಂತಹ ಸ್ಥಳದಲ್ಲಿ ರೊಮ್ಯಾಂಟಿಕ್‌ ಸಾಂಗ್‌ ಚಿತ್ರೀಕರಿಸಿರುವುದು ವಿಶೇಷ ಎಂಬುದು ನಟ ಅನೀಶ್‌ ತೇಜೇಶ್ವರ್‌ ಮಾತು. ಸ್ವೀಡನ್‌ನ ಆ “ಕಾರ್‌ ಗ್ರೇವ್‌ಯಾರ್ಡ್‌’ ಜಾಗದಲ್ಲಿ ಚಿತ್ರೀಕರಣ ಮಾಡಲೇಬೇಕು ಅಂತ ಚಿತ್ರತಂಡ ಹೊರಟಾಗ, ಅಲ್ಲಿನ ಸರ್ಕಾರ ಆ ಜಾಗದಲ್ಲೊಂದು ಎಚ್ಚರಿಕೆಯ ಬೋರ್ಡ್‌ ಹಾಕಿತ್ತಂತೆ. ಆ ಬೋರ್ಡ್‌ನಲ್ಲಿ “ಈ ಜಾಗ ಅಪಾಯ. ಇಲ್ಲಿ ಏನೇ ಆದರೂ ನೀವೇ ಜವಾಬ್ದಾರರು’ ಎಂದು ಬೋರ್ಡ್‌ನಲ್ಲಿ ಬರೆಯಲಾಗಿತ್ತಂತೆ.

ಅಲ್ಲಿದ್ದ ಕೆಲವರು, “ನೀವು ಆ ಜಾಗದಲ್ಲಿ ಹೋಗಿ ಸಮಸ್ಯೆಗೆ ಸಿಲುಕಿ, ಕೂಗಿದರೂ ಯಾರೊಬ್ಬರೂ ಸಹಾಯಕ್ಕೆ ಬರಲ್ಲ’ ಅಂತ ಹೇಳಿದರೂ, ಆ ಅಪರೂಪದ ಜಾಗದಲ್ಲೇ ರೊಮ್ಯಾಂಟಿಕ್‌ ಸಾಂಗ್‌ ಚಿತ್ರೀಕರಿಸಬೇಕು ಅಂತ ನಿರ್ಧರಿಸಿ, ಇಡೀ ಚಿತ್ರತಂಡ ಆ ಹಾಡನ್ನು ಒಂದು ದಿನ ಚಿತ್ರೀಕರಿಸಿಕೊಂಡಿದೆ. ಆ ಜಾಗದಲ್ಲಿ ತುಂಬಾ ಹೊತ್ತು ಚಿತ್ರೀಕರಿಸಲು ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿ ಅವಕಾಶ ಕೊಡದಿದ್ದರಿಂದ, ಸಿಕ್ಕ ಕಡೆಯಲ್ಲೆಲ್ಲಾ ಚಿತ್ರೀಕರಿಸಿರುವುದಾಗಿ ಹೇಳುತ್ತಾರೆ ಅನೀಶ್‌. 

ಇದು ಸ್ವೀಡನ್‌ನ ಅಪರೂಪ ಜಾಗದ ಚಿತ್ರೀಕರಣದ ಕಥೆಯಾದರೆ, ನಾರ್ವೆಯಲ್ಲೂ ಅದೇ ಹಾಡನ್ನು ಚಿತ್ರೀಕರಿಸಲಾಗಿದೆ. “ಟ್ರೋಲ್‌ಟುಂಗ’ ಎಂಬ ಅತೀ ಎತ್ತರದ ಪ್ರವಾಸಿ ತಾಣದಲ್ಲೂ ಚಿತ್ರೀಕರಣ ಮಾಡಿದ್ದು, ಜಗತ್ತಿನ ಅತೀ ಅದ್ಭುತ ತಾಣಗಳ ಪಟ್ಟಿಯಲ್ಲಿ “ಟ್ರೋಲ್‌ಟುಂಗ’ ಸ್ಥಳವೂ ಒಂದು. ಎತ್ತರದಲ್ಲಿರುವ ಕಲ್ಲು ಬಂಡೆ ಮೇಲೆ ಆ ಚಿತ್ರೀಕರಿಸಿದ್ದು ವಿಶೇಷ. ಅದೂ ಸಹ ಡೇಂಜರಸ್‌ ಜಾಗ ಎನ್ನುವ ಅನೀಶ್‌, ಈ ಹಾಡಿಗೆ ವಿದ್ಯಾಸಾಗರ್‌ ನೃತ್ಯ ಸಂಯೋಜಿಸಿದ್ದು, ಹಾಡನ್ನು ಕಿರಣ್‌ ಕಾವೇರಪ್ಪ ಬರೆದಿದ್ದಾರೆ.

ಅಜನೀಶ್‌ ಲೋಕನಾಥ್‌ ಸಂಗೀತ ನೀಡಿದ್ದಾರೆ. ದಿಲೀಪ್‌ ಚಕ್ರವರ್ತಿ ಛಾಯಾಗ್ರಹಣ ಮಾಡಿದ್ದಾರೆ ಎಂದು ವಿವರ ಕೊಡುತ್ತಾರೆ. ಚಿತ್ರದಲ್ಲಿ ನಿಶ್ವಿ‌ಕಾ ನಾಯ್ಡು, ಅವಿನಾಶ್‌, ಗಿರೀಶ್‌, ಮಂಜುನಾಥ್‌ ಹೆಗಡೆ, ಅರುಣ ಬಾಲರಾಜ್‌, ದೀಪಕ್‌ ಶೆಟ್ಟಿ ಇತರರು ನಟಿಸಿದ್ದಾರೆ. ಅಜಿತ್‌ ಉಗ್ಗಿನ್‌ ವಾಸನ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅಜನೀಶ್‌ ನಟನೆ ಜೊತೆಗೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜುಲೈನಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದೆ ಚಿತ್ರತಂಡ.

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Cinema; ರಾಜ್ಯಾದ್ಯಂತ “ಸಾಂಕೇತ್‌’ ಸಿನೆಮಾ ತೆರೆಗೆ

Kannada Cinema; ರಾಜ್ಯಾದ್ಯಂತ “ಸಾಂಕೇತ್‌’ ಸಿನೆಮಾ ತೆರೆಗೆ

Sandalwood; ಶೀಘ್ರದಲ್ಲಿ ತೆರೆಗೆ ಬರುತ್ತಿದೆ ‘ಕಬಂಧ’

Sandalwood; ಶೀಘ್ರದಲ್ಲಿ ತೆರೆಗೆ ಬರುತ್ತಿದೆ ‘ಕಬಂಧ’

bheema

Duniya Vijay; ‘ಭೀಮ’ನಿಗಾಗಿ ತೆರೆಯಲಿದೆ ಮುಚ್ಚಿದ 18 ಚಿತ್ರಮಂದಿರ

Kannada Movies: ಹಿಟ್‌ ರೇಟ್‌ ಮೇಲೆ; ಸ್ಯಾಟಲೈಟ್‌, ಓಟಿಟಿಯ ಹೊಸ ಧೋರಣೆ

Kannada Movies: ಹಿಟ್‌ ಮೇಲೆ ರೇಟ್‌; ಸ್ಯಾಟಲೈಟ್‌, ಓಟಿಟಿಯ ಹೊಸ ಧೋರಣೆ

Sandalwood; ಕನ್ನಡದಲ್ಲಿ ಇಂದು ತೆರೆಗೆ ಬರುತ್ತಿದೆ ನಾಲ್ಕು ಚಿತ್ರಗಳು

Sandalwood; ಕನ್ನಡದಲ್ಲಿ ಇಂದು ತೆರೆಗೆ ಬರುತ್ತಿದೆ ನಾಲ್ಕು ಚಿತ್ರಗಳು

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.