ದಮಯಂತಿ ಫಸ್ಟ್ಲುಕ್; ಅಕ್ಟೋಬರ್ನಲ್ಲಿ ಚಿತ್ರಕ್ಕೆ ಚಾಲನೆ
Team Udayavani, Aug 23, 2018, 4:07 PM IST
ರಾಧಿಕಾ ಕುಮಾರಸ್ವಾಮಿ “ದಮಯಂತಿ’ ಎಂಬ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೇ ಹರಿದಾಡಿತ್ತು. ಆ ಚಿತ್ರದ ಬಗ್ಗೆ ಆಗ ಅಷ್ಟು ಪಕ್ವತೆ ಇರಲಿಲ್ಲ. ಈಗ ಆ ಚಿತ್ರಕ್ಕೊಂದು ಸ್ಪಷ್ಟತೆ ಸಿಕ್ಕಿದೆ. “ದಮಯಂತಿ’ ಚಿತ್ರ ಅಕ್ಟೋಬರ್ನಲ್ಲಿ ಸೆಟ್ಟೇರಲಿದೆ. ಈ ಚಿತ್ರಕ್ಕೆ ನವರಸನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮತ್ತು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಶೀರ್ಷಿಕೆ ಹೇಳುವಂತೆ, ಇದೊಂದು ಎಪ್ಪತ್ತರ ದಶಕದ ಕಥೆ. ಈಗಿನ ವಾಸ್ತವ ಚಿತ್ರಣವನ್ನೂ ಬೆರೆಸಿ ಮಾಡುತ್ತಿರುವ ಚಿತ್ರ ಎಂಬುದು ನಿರ್ದೇಶಕರ ಮಾತು.
“ಅರುಂಧತಿ’, “ಭಾಗಮತಿ’ ಚಿತ್ರಗಳ ರೀತಿಯೇ “ದಮಯಂತಿ’ ಕೂಡ ಇರಲಿದ್ದು, ಕನ್ನಡದ ಮಟ್ಟಿಗೆ ಮಹಿಳಾ ಪ್ರಧಾನವಾಗಿರುವ “ದಮಯಂತಿ’ ಹೈ ಬಜೆಟ್ ಚಿತ್ರವಾಗಲಿದೆ ಎಂದು ವಿವರ ಕೊಡುವ ನವರಸನ್, ಚಿತ್ರದಲ್ಲಿ ತಬಲಾ ನಾಣಿ, ವಿಜಯ್ ಚೆಂಡೂರ್, ಕೆಂಪೇಗೌಡ, ಗಿರಿ, ಕಾರ್ತಿಕ್, “ಮಜಾ ಟಾಕೀಸ್’ ಪವನ್, ಸಾಧುಕೋಕಿಲ ಇತರೆ ಕಲಾವಿದರು ನಟಿಸಲಿದ್ದಾರೆ.
ಬಹುತೇಕ ದೊಡ್ಡ ಸೆಟ್ನಲ್ಲೇ ಚಿತ್ರೀಕರಣ ನಡೆಯಲಿದ್ದು, ಮೈಸೂರು, ಮಂಡ್ಯ ಸುತ್ತಮುತ್ತ ಸ್ವಲ್ಪ ದಿನಗಳ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ಸುಮಾರು 30 ನಿಮಿಷಗಳ ಗ್ರಾಫಿಕ್ಸ್ ಇರಲಿದ್ದು, ‘ಬಾಹುಬಲಿ’ ಚಿತ್ರಕ್ಕೆ ಗ್ರಾಫಿಕ್ಸ್ ಕೆಲಸ ಮಾಡಿದ ತಂಡ, “ದಮಯಂತಿ’ ಚಿತ್ರಕ್ಕೂ ಮಾಡಲಿದೆ. ಪಿಕೆಎಚ್ ದಾಸ್ ಛಾಯಾಗ್ರಾಹಕರು. ಗಣೇಶ್ ನಾರಾಯಣ್ ಸಂಗೀತ ನೀಡುತ್ತಿದ್ದು, ಮಾಸ್ತಿ ಅವರ ಸಂಭಾಷಣೆ ಚಿತ್ರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ