Refresh

This website www.udayavani.com/cinema/balcony-sandalwood-news/darbar-kannada-movie-v-manohar is currently offline. Cloudflare's Always Online™ shows a snapshot of this web page from the Internet Archive's Wayback Machine. To check for the live version, click Refresh.

ಜೂ.09ಕ್ಕೆ ವಿ.ಮನೋಹರ್‌ ನಿರ್ದೇಶನದ ‘ದರ್ಬಾರ್‌’ ತೆರೆಗೆ


Team Udayavani, May 30, 2023, 3:25 PM IST

darbar

ಸಂಗೀತ ನಿರ್ದೇಶಕ ವಿ.ಮನೋಹರ್‌ ನಿರ್ದೇಶಿಸಿರುವ “ದರ್ಬಾರ್‌’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಜೂನ್‌ 09ರಂದು ತೆರೆಕಾಣುತ್ತಿದ್ದು, ಸಿನಿಮಾ ಮೇಲೆ ಚಿತ್ರತಂಡ ನಿರೀಕ್ಷೆ ಇಟ್ಟಿದೆ.

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ವಿ.ಮನೋಹರ್‌, “ಸುಮಾರು 23 ವರ್ಷಗಳ ನಂತರ ನಾನು ನಿರ್ದೇಶನಕ್ಕೆ ಕೈ ಹಾಕಿದ್ದೇನೆ. ಅದಕ್ಕೆ ಸತೀಶ್‌ ಅವರೇ ಕಾರಣ. ನಾನು “ಓ ಮಲ್ಲಿಗೆ’ ಚಿತ್ರ ನಿರ್ದೇಶನ ಮಾಡಿದಾಗ ಎಲ್ಲರೂ ನನ್ನನ್ನು ಹೀಯಾಳಿಸಿದ್ದರು. ನನ್ನಮೇಲೆ ಸಂಶಯಪಟ್ಟವರಿಗೆ ಈ ಚಿತ್ರವೇ ಉತ್ತರ. ನಾವು ಎಲ್ಲೇ ಹೋದರೂ ಇದು ಪರಿಶುದ್ದ ಹಾಸ್ಯಚಿತ್ರನಾ ಎಂದೇ ಕೇಳುತ್ತಾರೆ. ಈಗ ಹಾಸ್ಯ ಅಂದ್ರೆ ಡಬಲ್‌ ಮೀನಿಂಗ್‌ ಅನ್ನುವಂತಾಗಿದೆ. ಮೊದಲ ಪ್ರದರ್ಶನಕ್ಕೆ ಬಂದವರು ಮೆಚ್ಚುವ ಎಲ್ಲ ಅಂಶಗಳು ಚಿತ್ರದಲ್ಲಿವೆ. ಹೀರೋ ಕೆಟ್ಟದ್ದನ್ನು, ಸೋಮಾರಿಗಳನ್ನು ಕಂಡರೆ ಸಹಿಸಲ್ಲ, ಉದಾಹರಣೆಗೆ ಜೂಜಾಡುವುದು, ಅರಳಿಕಟ್ಟೆಯಲ್ಲಿ ಕೂತು ಹರಟೆ ಹೊಡೆಯುವುದು, ಈತನ ಈ ಗುಣ ಕೆಲವರಿಗೆ ಇಷ್ಟ ಆಗಲ್ಲ, ಇವನನ್ನು ಪಂಚಾಯ್ತಿ ಎಲೆಕ್ಷನ್‌ ನಲ್ಲಿ ಸೋಲಿಸಬೇಕು ಎಂದು ಪ್ರಯತ್ನಿಸುತ್ತಾರೆ. ಗಿಚ್ಚಿ ಗಿಲಿಗಿಲಿ ಕಾರ್ತೀಕ್‌ ಬೇರೆ ಥರದ ರೋಲ್‌ ಮಾಡಿದ್ದಾರೆ. ಸಂತು ಹೀರೋ ಜೊತೆನೇ ಇದ್ದು ಆಗಾಗ ಕಾಲೆಳೆಯುವ ಪಾತ್ರ ಮಾಡಿದ್ದಾರೆ. ಸಾಧು ಕೋಕಿಲ, ನವೀನ್‌ ಪಡೀಲ್‌ ಜೋಡಿ ನೋಡುಗರನ್ನು ರಂಜಿಸುತ್ತದೆ’ ಎಂದು ಚಿತ್ರದ ಬಗ್ಗೆ ವಿವರ ನೀಡಿದರು.

ನಂತರ ಚಿತ್ರದ ನಾಯಕ, ನಿರ್ಮಾಪಕ, ಸತೀಶ್‌ ಮಾತನಾಡುತ್ತಾ, “ಆರಂಭದಲ್ಲಿ ಏನೋ ಒಂದು ಬಜೆಟ್‌ ಅಂದುಕೊಂಡಿದ್ದೆವು. ಕ್ವಾಲಿಟಿ ನೋಡುತ್ತ ಹೋದಂತೆ ಜಾಸ್ತೀನೇ ಅಯ್ತು. ಮೊನ್ನೆ ಚಿತ್ರದ ಪ್ರೀವ್ಯೂ ನೋಡಿದೆವು. ಒಂದೊಳ್ಳೆ ಸಿನಿಮಾ ಮಾಡಿದ್ದೇವೆಂಬ ನಂಬಿಕೆಯಿದೆ. ಒಬ್ಬರು ಬಂದು ಸಿನಿಮಾ ನೋಡಿದರೆ ಖಂಡಿತ 10 ಜನಕ್ಕೆ ಹೇಳುತ್ತಾರೆ ಎಂಬ ನಂಬಿಕೆ ಇದೆ’ ಎಂದು ಹೇಳಿದರು.

ನಾಯಕಿ ಜಾಹ್ನವಿ ಮಾತನಾಡಿ, “ಇದು ನನ್ನ ಮೊದಲ ಚಿತ್ರ. ತುಂಬಾ ಚೆನ್ನಾಗಿ ಬಂದಿದೆ. ಈ ಚಿತ್ರದಲ್ಲಿ ನಾನು ಸೈಕಾಲಜಿ ಸ್ಟೂಡೆಂಟ್‌. ರಜೆಗೆಂದು ಊರಿಗೆ ಬಂದಾಗ ನಾಯಕನ ಪರಿಚಯವಾಗುತ್ತದೆ. ನಂತರ ಆತನಿಗೆ ಸಪೋರ್ಟ್‌ ಮಾಡುತ್ತೇನೆ. ಒಂದು ಹಳ್ಳಿಯಲ್ಲಿ ನಾವೇ ಇರುವಂತೆ, ನಮ್ಮ ಸುತ್ತಲೂ ಘಟನೆಗಳು ನಡೆಯುತ್ತಿರುವಂತೆ ನಮಗನಿಸುತ್ತದೆ’ ಎಂದು ಹೇಳಿದರು.

ಸತೀಶ್‌ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದು, ಬಿ.ಎನ್‌. ಶಿಲ್ಪ ಅವರು ನಿರ್ಮಾಣ ಮಾಡಿದ್ದಾರೆ. ಮಾಸ್‌ ಮಾದ, ವಿನೋದ್‌ ಮೂರು ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಹಿರಿಯ ಕಲಾವಿದರಾದ ಎಂ.ಎನ್‌. ಲಕ್ಷ್ಮೀದೇವಿ, ಅಶೋಕ್‌ ಹೀಗೆ ಸಾಕಷ್ಟು ಜನ ಅಭಿನಯಿಸಿದ್ದಾರೆ. ಮೂರು ಹಾಡುಗಳು ಚಿತ್ರದಲ್ಲಿದ್ದು, ಟೈಟಲ್‌ ಸಾಂಗನ್ನು ಚಂದನ್‌ ಶೆಟ್ಟಿ ಹಾಡಿದ್ದಾರೆ, ರಾಜಕೀಯ ವಿಡಂಬನೆಯ ಹಾಡನ್ನು ಉಪೇಂದ್ರ ಹಾಡಿದ್ದಾರೆ, ಇನ್ನು ಡ್ಯುಯೆಟ್‌ ಹಾಡಿಗೆ ಜಯಂತ್‌ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ.

ಟಾಪ್ ನ್ಯೂಸ್

1-24-wednesday

Daily Horoscope: ಉದ್ಯೋಗದಲ್ಲಿ ಕೆಲವರಿಗೆ ವೇತನ ಏರಿಕೆ, ಸಹೋದ್ಯೋಗಿಗಳಿಂದ ಸಹಕಾರ

uUdupi Paryaya ; ಸುಗುಣೇಂದ್ರತೀರ್ಥರ ಚತುರ್ಥ ಪರ್ಯಾಯಕ್ಕೆ ಉಡುಪಿ ಸನ್ನದ್ಧ

Udupi Paryaya ; ಸುಗುಣೇಂದ್ರತೀರ್ಥರ ಚತುರ್ಥ ಪರ್ಯಾಯಕ್ಕೆ ಉಡುಪಿ ಸನ್ನದ್ಧ

Dakshina Kannada ಜಿಲ್ಲೆಯಲ್ಲಿ ಕೆಪ್ಪಟ್ರಾಯ ಬಾಧೆ

Dakshina Kannada ಜಿಲ್ಲೆಯಲ್ಲಿ ಕೆಪ್ಪಟ್ರಾಯ ಬಾಧೆ

Udupi Paryaya; ಪಂಚಸೂತ್ರಗಳನ್ನು ಪಾಲಿಸಿ, ಮಕ್ಕಳಿಗೆ ಸಂಸ್ಕಾರ ಕೊಡಿ

Udupi Paryaya; ಪಂಚಸೂತ್ರಗಳನ್ನು ಪಾಲಿಸಿ, ಮಕ್ಕಳಿಗೆ ಸಂಸ್ಕಾರ ಕೊಡಿ

D.K,Udupi; ಎಪಿಎಲ್‌ ಅಕ್ಕಿಗೆ ಬೇಡಿಕೆ; ಸರಕಾರ ಮೌನ!

D.K,Udupi; ಎಪಿಎಲ್‌ ಅಕ್ಕಿಗೆ ಬೇಡಿಕೆ; ಸರಕಾರ ಮೌನ!

cmFeb.16ಕ್ಕೆ ರಾಜ್ಯ ಬಜೆಟ್‌; ಸಿದ್ಧತೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ

Feb.16ಕ್ಕೆ ರಾಜ್ಯ ಬಜೆಟ್‌; ಸಿದ್ಧತೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ

Mangaluru ಮಾದಕ ವಸ್ತು ಸೇವನೆ: ಯುವಕನ ಸೆರೆ

Mangaluru ಮಾದಕ ವಸ್ತು ಸೇವನೆ: ಯುವಕನ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

EMAIL First Look

EMAIL First Look : ರಿಲೀಸ್ ಆಯ್ತು ರಾಗಿಣಿ ನಟನೆಯ ‘ಇ-ಮೇಲ್’ ಫಸ್ಟ್ ಲುಕ್

sonal monteiro

Kannada Cinema; ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾಗೆ ಸೋನಲ್ ನಾಯಕಿ

Kadal

Kannada Cinema: ರವಿ ಬಸ್ರೂರು ನಿರ್ದೇಶನದ ‘ಕಡಲ್’ ಸಿನಿಮಾ ಜ.19ಕ್ಕೆ ಬಿಡುಗಡೆ

The trailer of Chikkanna starrer ‘Upadhyaksha’

Upadhyaksha; ಸದ್ದು ಮಾಡುತ್ತಿದೆ ಚಿಕ್ಕಣ್ಣ ಅಭಿನಯದ ‘ಉಪಾಧ್ಯಕ್ಷ’ ಟ್ರೇಲರ್

ಶೃತಿ ಹರಿಹರನ್‌

Kannada Cinema: ‘ಸಾರಾಂಶ’ ಹೇಳುತ್ತಾ ಬಂದ ಶೃತಿ ಹರಿಹರನ್‌

MUST WATCH

udayavani youtube

ರಂಗೋಲಿಯಲ್ಲಿ 3D ರಾಮಮಂದಿರ ಚಿತ್ರಿಸಿದ ಕಲಾವಿದ

udayavani youtube

ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನಕ್ಕೆ ಪುತ್ತಿಗೆ ಶ್ರೀ ಭೇಟಿ, ತುಲಾಭಾರ ಸೇವೆ

udayavani youtube

ದೇವಸ್ಥಾನದಲ್ಲಿ ಸ್ವಚ್ಛತೆ ಕಾರ್ಯದಲ್ಲಿ ಪಾಲ್ಗೊಂಡ ಸಿ.ಟಿ.ರವಿ

udayavani youtube

ಮಧುಮೇಹ ಪಾದದ ಆರೈಕೆಯ ಕ್ರಮಗಳು ಮತ್ತು ಚಿಕಿತ್ಸಾ ವಿಧಾನ

udayavani youtube

ಪರ್ಯಾಯಕ್ಕೆ ಶುಭಕೋರಿದ ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ

ಹೊಸ ಸೇರ್ಪಡೆ

1-24-wednesday

Daily Horoscope: ಉದ್ಯೋಗದಲ್ಲಿ ಕೆಲವರಿಗೆ ವೇತನ ಏರಿಕೆ, ಸಹೋದ್ಯೋಗಿಗಳಿಂದ ಸಹಕಾರ

uUdupi Paryaya ; ಸುಗುಣೇಂದ್ರತೀರ್ಥರ ಚತುರ್ಥ ಪರ್ಯಾಯಕ್ಕೆ ಉಡುಪಿ ಸನ್ನದ್ಧ

Udupi Paryaya ; ಸುಗುಣೇಂದ್ರತೀರ್ಥರ ಚತುರ್ಥ ಪರ್ಯಾಯಕ್ಕೆ ಉಡುಪಿ ಸನ್ನದ್ಧ

Dakshina Kannada ಜಿಲ್ಲೆಯಲ್ಲಿ ಕೆಪ್ಪಟ್ರಾಯ ಬಾಧೆ

Dakshina Kannada ಜಿಲ್ಲೆಯಲ್ಲಿ ಕೆಪ್ಪಟ್ರಾಯ ಬಾಧೆ

Udupi Paryaya; ಪಂಚಸೂತ್ರಗಳನ್ನು ಪಾಲಿಸಿ, ಮಕ್ಕಳಿಗೆ ಸಂಸ್ಕಾರ ಕೊಡಿ

Udupi Paryaya; ಪಂಚಸೂತ್ರಗಳನ್ನು ಪಾಲಿಸಿ, ಮಕ್ಕಳಿಗೆ ಸಂಸ್ಕಾರ ಕೊಡಿ

D.K,Udupi; ಎಪಿಎಲ್‌ ಅಕ್ಕಿಗೆ ಬೇಡಿಕೆ; ಸರಕಾರ ಮೌನ!

D.K,Udupi; ಎಪಿಎಲ್‌ ಅಕ್ಕಿಗೆ ಬೇಡಿಕೆ; ಸರಕಾರ ಮೌನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.