ಧನಂಜಯ್‌ 26ನೇ ಸಿನಿಮಾ ಅನೌನ್ಸ್‌


Team Udayavani, Sep 21, 2022, 5:01 PM IST

TDY-14

ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದ ಬಿಝಿ ನಟ ಪೈಕಿ ಡಾಲಿ ಧನಂಜಯ್‌  ಕೂಡ ಒಬ್ಬರು. ಒಂದಾದ ಮೇಲೊಂದು ಸಿನಿಮಾಗಳ ರಿಲೀಸ್‌ ಮೂಲಕ ಬೆಳ್ಳಿತೆರೆಯಲ್ಲಿ ರಾರಾಜಿಸುತ್ತಿರುವ ಧನಂಜಯ್‌, ಇದೀಗ ಮತ್ತೂಂದು ಸಿನಿಮಾದ ಅನೌನ್ಸ್‌ಗೆ ರೆಡಿಯಾಗಿದ್ದಾರೆ.

ಹೌದು, “ಪುಷ್ಪ’ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೂ ಪರಿಚಿತರಾಗಿರುವ ಡಾಲಿ ಧನಂಜಯ್‌ ಈಗ ಬಹುಭಾಷಾ ನಟ ಎನಿಸಿಕೊಂಡಿದ್ದಾರೆ. ಕನ್ನಡದ ಬಹುಬೇಡಿಕೆಯ ನಟ ಇದೀಗ ಕನ್ನಡ ಹಾಗೂ ತೆಲುಗು ಎರಡು ಭಾಷೆಗಳ ನೂತನ ಸಿನಿಮಾವೊಂದಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಇದು ಡಾಲಿ ಧನಂಜಯ್‌ ನಟಿಸಲಿರುವ 26ನೇ ಸಿನಿಮಾವಾಗಲಿದೆ ಎಂಬುದು ವಿಶೇಷ.

ಈ ಹಿಂದೆ ತೆಲುಗಿನಲ್ಲಿ “ಪೆಂಗ್ವಿನ್‌’ ಸಿನಿಮಾ ಮಾಡಿದ್ದ ಈಶ್ವರ್‌ ಕಾರ್ತಿಕ್‌ ಡಾಲಿ-ಸತ್ಯದೇವ್‌ ಬಣ್ಣ ಹಚ್ಚಲಿರುವ 26ನೇ ಸಿನಿಮಾಕ್ಕೆ ಆ್ಯಕ್ಷನ್‌-ಕಟ್‌ ಹೇಳಲಿದ್ದಾರೆ.

ಕ್ರೈಂ ಕಥೆಯನ್ನೊಳಗೊಂಡ ಈ ಸಿನಿಮಾವನ್ನು “ಓಲ್ಡ್ ಟೌನ್‌ ಪಿಕ್ಚರ್’ ಬ್ಯಾನರ್‌ನಡಿ ಬಾಲ ಸುಂದರಂ ಮತ್ತು ದಿನೇಶ್‌ ಸುಂದರಂ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಹೆಸರಿಡದ ಈ ಸಿನಿಮಾದಲ್ಲಿ ಧನಂಜಯ್‌ ಜೊತೆಗೆ ತೆಲುಗು ನಟ ಸತ್ಯದೇವ್‌ ಕೂಡ ಮುಖ್ಯಭೂಮಿಕೆಯಲ್ಲಿ ಅಭಿನಯಿಸಲಿದ್ದಾರೆ. ವಿಶೇಷ ಅಂದರೆ ಇದು ಸತ್ಯದೇವ್‌ ನಟಿಸುತ್ತಿರುವ 26ನೇ ಸಿನಿಮಾವಾಗಿದೆ.

ಈ ಸಿನಿಮಾದ ಹಾಡುಗಳಿಗೆ “ಟಗರು’ ಸಿನಿಮಾ ಖ್ಯಾತಿಯ ಚರಣ್‌ ರಾಜ್‌ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಮಣಿಕಂಠನ್‌ ಕೃಷ್ಣಮಾಚಾರಿ ಛಾಯಾಗ್ರಹಣ, ಅನಿಲ್‌ ಕ್ರಿಶ್‌ ಸಂಕಲನವಿದ್ದು, ಶೀಘ್ರದಲ್ಲೇ ಈ ಹೊಸ ಸಿನಿಮಾದ ಟೈಟಲ್‌ ರಿವೀಲ್‌ ಮಾಡಲು ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದೆ.

ಇತ್ತೀಚೆಗಷ್ಟೇ ಡಾಲಿ ನಟನೆಯ “ಮಾನ್ಸೂನ್‌ ರಾಗ’ ಸಿನಿಮಾ ರಿಲೀಸ್‌ ಆಗಿದ್ದು, ಸದ್ಯ ಧನಂಜಯ್‌ ಬತ್ತಳಿಕೆಯಲ್ಲಿ “ತೋತಾಪುರಿ’, “ಹೆಡ್‌ ಬುಷ್‌’, “ಒನ್ಸ್ ಅಪಾನ್‌ ಎ ಟೈಮ್‌ ಇನ್‌ ಜಮಾಲಿಗುಡ್ಡ’ ಹೀಗೆ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ. ಇದರ ಜೊತೆಗೆ ಧನಂಜಯ್‌ “ಹೊಯ್ಸಳ’ ಮತ್ತು ಪ್ಯಾನ್‌ ಇಂಡಿಯಾ “ಪುಷ್ಪ-2′ ಸಿನಿಮಾದಲ್ಲೂ ಅಭಿನಯಿಸುತ್ತಿದ್ದು, ಆ ಸಿನಿಮಾದ ಕೆಲಸಗಳು ಕೂಡ ಭರದಿಂದ ನಡೆಯುತ್ತಿದೆ.

ಟಾಪ್ ನ್ಯೂಸ್

Karnataka 2nd PUC Result 2024: ಪಿಯುಸಿ ಫಲಿತಾಂಶ ಪ್ರಕಟ:ಉಡುಪಿಗೆ ಎರಡನೇ ಸ್ಥಾನ

Karnataka 2nd PUC Result 2024: ಪಿಯುಸಿ ಫಲಿತಾಂಶ ಪ್ರಕಟ:ಉಡುಪಿಗೆ ಎರಡನೇ ಸ್ಥಾನ

rape

Bengaluru; ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ವಕೀಲೆಯನ್ನು ವಿವಸ್ತ್ರ ಗೊಳಿಸಿ ಬ್ಲಾಕ್ ಮೇಲ್!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Raj THakre

NDAಗೆ ಬೇಷರತ್ ಬೆಂಬಲ ಘೋಷಿಸಿದ MNS ರಾಜ್ ಠಾಕ್ರೆ

1-wewqwewq

Fixing; ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮಾಡಿದ್ದೇ ಜೋಶಿ: ದಿಂಗಾಲೇಶ್ವರ ಶ್ರೀ

Exam

Result; ನಾಳೆ ಬೆಳಗ್ಗೆ ಪಿಯುಸಿ ಫಲಿತಾಂಶ ಪ್ರಕಟ 

1-wewqeqw

Ugadi ಫಲ ಭವಿಷ್ಯ: ಬಲಿಷ್ಠ ರಾಜನೇ ಮರಳಿ ರಾಜನಾಗುತ್ತಾನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shreyas Talpade; ಕನ್ನಡದಲ್ಲೂ ತೆರೆಕಾಣಲಿದೆ ‘ಲವ್‌ ಯು ಶಂಕರ್‌’

Shreyas Talpade; ಕನ್ನಡದಲ್ಲೂ ತೆರೆಕಾಣಲಿದೆ ‘ಲವ್‌ ಯು ಶಂಕರ್‌’

zaid khan

Zaid khan; ಯುಗಾದಿಗೆ ಝೈದ್‌ ಹೊಸ ಚಿತ್ರದ ಟೈಟಲ್‌

ಅಪ್ಪು ಇಷ್ಟ ಪಟ್ಟು ಓಕೆ ಮಾಡಿದ ಕಥೆಯಿದು O2 ಬಗ್ಗೆ ಅಶ್ವಿ‌ನಿ ಮನದ ಮಾತು

O2 movie: ಅಪ್ಪು ಇಷ್ಟ ಪಟ್ಟು ಓಕೆ ಮಾಡಿದ ಕಥೆಯಿದು; ಅಶ್ವಿ‌ನಿ ಮನದ ಮಾತು

ಆಟೋ ಡ್ರೈವರ್‌ ಮಗನ ‘ತೂಫಾನ್‌’ ಕನಸು

Roshan; ಆಟೋ ಡ್ರೈವರ್‌ ಮಗನ ‘ತೂಫಾನ್‌’ ಕನಸು

Dinesh babu; ಬರಲಿದೆ ಧರ್ಮಭೀರು ನಾಡಪ್ರಭು ಕೆಂಪೇಗೌಡರ ಕುರಿತ ಸಿನಿಮಾ

Dinesh babu; ಬರಲಿದೆ ಧರ್ಮಭೀರು ನಾಡಪ್ರಭು ಕೆಂಪೇಗೌಡರ ಕುರಿತ ಸಿನಿಮಾ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Karnataka 2nd PUC Result 2024: ಪಿಯುಸಿ ಫಲಿತಾಂಶ ಪ್ರಕಟ:ಉಡುಪಿಗೆ ಎರಡನೇ ಸ್ಥಾನ

Karnataka 2nd PUC Result 2024: ಪಿಯುಸಿ ಫಲಿತಾಂಶ ಪ್ರಕಟ:ಉಡುಪಿಗೆ ಎರಡನೇ ಸ್ಥಾನ

rape

Bengaluru; ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ವಕೀಲೆಯನ್ನು ವಿವಸ್ತ್ರ ಗೊಳಿಸಿ ಬ್ಲಾಕ್ ಮೇಲ್!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Raj THakre

NDAಗೆ ಬೇಷರತ್ ಬೆಂಬಲ ಘೋಷಿಸಿದ MNS ರಾಜ್ ಠಾಕ್ರೆ

1-wewqwewq

Fixing; ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮಾಡಿದ್ದೇ ಜೋಶಿ: ದಿಂಗಾಲೇಶ್ವರ ಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.