ವಿತರಣೆಯತ್ತ ಸತ್ಯ ಪ್ರಕಾಶ್..: ರಾಮಾ ರಾಮಾ ರೇ ನಿರ್ದೇಶಕನ ಹೊಸ ಸಾಹಸ
Team Udayavani, Jan 8, 2022, 1:42 PM IST
“ರಾಮಾ ರಾಮಾ ರೇ’, “ಒಂದಲ್ಲ ಎರಡಲ್ಲ’ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಡಿ. ಸತ್ಯ ಪ್ರಕಾಶ್ ಈಗ ಸಿನಿಮಾಗಳ ನಿರ್ಮಾಣ ಮತ್ತು ನಿರ್ದೇಶನದ ಜೊತೆಗೆ ವಿತರಣೆಗೂ ಮುಂದಾಗಿದ್ದಾರೆ. “ಸತ್ಯ ಸಿನಿ ಡಿಸ್ಟ್ರಿಬ್ಯೂಟರ್’ ಹೆಸರಿನಲ್ಲಿ ಸಮಾನ ಮನಸ್ಕರ ಜೊತೆ ಸೇರಿಕೊಂಡು ಸತ್ಯ ಪ್ರಕಾಶ್ ಸದಭಿರುಚಿ ಸಿನಿಮಾಗಳ ವಿತರಣೆಗೆ ಅಣಿಯಾಗಿದ್ದಾರೆ. ಇತ್ತೀಚೆಗೆ ಸತ್ಯ ಪ್ರಕಾಶ್ ಮತ್ತು ತಂಡ ತಮ್ಮ ಹೊಸ ವೆಂಚರ್ಗೆ ಚಾಲನೆ ನೀಡಿತು. ನಟ ಡಾಲಿ ಧನಂಜಯ್ “ಸತ್ಯ ಸಿನಿ ಡಿಸ್ಟ್ರಿಬ್ಯೂಟರ್’ ಸಂಸ್ಥೆಯ ಲಾಂಛನವನ್ನು ಬಿಡುಗಡೆಗೊಳಿಸಿ, ಸತ್ಯ ಪ್ರಕಾಶ್ ಮತ್ತು ತಂಡದವರ ಹೊಸ ಸಾಹಸಕ್ಕೆ ಶುಭ ಕೋರಿದರು.
ಇದೇ ವೇಳೆ ಮಾತನಾಡಿದ ಡಿ. ಸತ್ಯ ಪ್ರಕಾಶ್, “ಇಂದಿನ ದಿನಗಳಲ್ಲಿ ಒಳ್ಳೆಯ ಕಂಟೆಂಟ್ ಹುಡುಕಿ ಸಿನಿಮಾ ಮಾಡುವುದು ಒಂದು ಥರದ ಚಾಲೆಂಜ್ ಆದರೆ, ಅದನ್ನು ಸಿನಿಮಾ ಮಾಡಿದ ಮೇಲೆ ಥಿಯೇಟರ್ನಲ್ಲಿ ರಿಲೀಸ್ ಮಾಡುವುದು ಇನ್ನೊಂದು ದೊಡ್ಡ ಚಾಲೆಂಜ್. ನನ್ನ ಹಿಂದಿನ ಸಿನಿಮಾಗಳ ಬಿಡುಗಡೆಯ ಸಂದರ್ಭದಲ್ಲಿ ನಾನು ಅನುಭವಿಸಿದ ಸಂಕಷ್ಟಗಳನ್ನು ಅರಿತುಕೊಂಡ ಬಳಿಕ, ಅದಕ್ಕೆ ನಾವೇ ಏನಾದ್ರೂ ಪರಿಹಾರ ಕಂಡುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಸಿನಿಮಾ ವಿತರಣೆ ಮಾಡುವ ನಿರ್ಧಾರಕ್ಕೆ ಬರಬೇಕಾಯ್ತು. ನನ್ನ ಈ ಯೋಚನೆಗೆ ಸಮಾನ ಮನಸ್ಕ ಸ್ನೇಹಿತರು ಬೆಂಬಲವಾಗಿ ನಿಂತರು’ ಎಂದರು.
ಇದನ್ನೂ ಓದಿ:ಇಂದು ರಾಕಿಂಗ್ ಸ್ಟಾರ್ ಯಶ್ ಬರ್ತ್ಡೇ: ಮುಂದಿನ ಸಿನಿಮಾ ಬಗ್ಗೆ ಹೆಚ್ಚಿದ ಕುತೂಹಲ
ಇನ್ನು, ತಮ್ಮ ವಿತರಣಾ ಸಂಸ್ಥೆಯ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಅನೇಕ ನಿರ್ಮಾಪಕ, ನಿರ್ದೇಶಕರು ಭಾಗಿಯಾಗಿ, ಶುಭಕೋರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rachana inder: ಮರ್ಡರ್ ಮಿಸ್ಟರಿ 4 ಎನ್ 6
Sandalwood: ರಿಲಯನ್ಸ್ ತೆಕ್ಕೆಗೆ ʼಜಡ್ಜ್ ಮೆಂಟ್ʼ
Sandalwood: ಸ್ಪಂದನಾ ಇದ್ದಿದ್ದರೆ ಬಹಳ ಖುಷಿಪಡುತ್ತಿದ್ದಳು.. ವಿಜಯ ರಾಘವೇಂದ್ರ ಭಾವುಕ
ಕೊರಗಜ್ಜ, ಕಲ್ಲುರ್ಟಿ ದೈವಗಳಿಗೆ ‘ಫಸ್ಟ್ ಲುಕ್’ ತೋರಿಸಿ ಅನುಮತಿ ಪಡೆದ ‘ಕೊರಗಜ್ಜ’ ಚಿತ್ರತಂಡ
Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್ʼ