‘ಅವನನ್ನೇ ಇಲ್ಲಿ ಬಂದು ನಿಲ್ಲೋಕೆ ಹೇಳಿ ಸರ್..’: ಆಪ್ತ ಮಿತ್ರರ ನಡುವೆ ಅಂದು ನಡೆದಿದ್ದೇನು?


Team Udayavani, Jul 3, 2020, 7:45 PM IST

‘ಅವನನ್ನೇ ಇಲ್ಲಿ ಬಂದು ನಿಲ್ಲೋಕೆ ಹೇಳಿ ಸರ್..’: ಆಪ್ತ ಮಿತ್ರರ ನಡುವೆ ಅಂದು ನಡೆದಿದ್ದೇನು?

ಜೋಗದ ಕಡಿದಾದ ಬಂಡೆಯ ಮೇಲೆ ಭಟ್ರು – ಗಣಿ ಉಭಯ ಕುಶಲೋಪರಿ.

ಬೆಂಗಳೂರು: 2006ರಲ್ಲಿ ತೆರೆಕಂಡು ಚಿತ್ರರಂಗದಲ್ಲಿ ದಾಖಲೆಗಳ ಸರಮಾಲೆಯನ್ನೇ ಬರೆದಿದ್ದ ‘ಮುಂಗಾರು ಮಳೆ’ ಚಿತ್ರದ ಕುರಿತು ಯಾರಿಗೆ ಗೊತ್ತಿಲ್ಲ ಹೇಳಿ.

ಈ ಚಿತ್ರದ ಮೂಲಕ ಯೋಗರಾಜ್ ಭಟ್ ಎಂಬ ವಿಭಿನ್ನ ನಿರ್ದೇಶಕ, ಚಿತ್ರ ಸಾಹಿತಿ ಹಾಗೂ ಕ್ರಿಯೇಟರ್ ಸ್ಯಾಂಡಲ್ ವುಡ್ ಗೆ ದಕ್ಕಿದರೆ, ಕಿರುತೆರೆಯಲ್ಲಿ ಕಾಮಿಡಿ ಟೈಮ್ ಕಾರ್ಯಕ್ರಮದ ಮೂಲಕ ಮನೆ ಮಾತಾಗಿದ್ದ ಗಣೇಶ್ ಎಂಬ ಚಿಗುರು ಮೀಸೆಯ ಹುಡುಗ ರಾತ್ರೋ ರಾತ್ರಿ ಹುಡುಗಿಯರ ಕಣ್ಮಣಿಯಾಗಿಬಿಟ್ಟಿದ್ದ ಮಾತ್ರವಲ್ಲದೇ ಮುಂಗಾರು ಮಳೆ ಗಣೇಶ್ ಅವರನ್ನು ‘ಗೋಲ್ಡನ್ ಸ್ಟಾರ್’ ಪಟ್ಟಕ್ಕೆ ಏರಿಸಿತ್ತು.

ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಲ್ಲಿ ಗಣೇಶ್ ಅವರನ್ನು ಸೂಪರ್ ಸ್ಟಾರ್ ಪಟ್ಟಕ್ಕೇರಿಸಿದ್ದ ‘ಮುಂಗಾರು ಮಳೆ’ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ನಡೆದಿದ್ದ ಸನ್ನಿವೇಶ ಒಂದನ್ನು ಇಲ್ಲಿ ನೆನಪಿಸಿಕೊಳ್ಳುವುದು ಉಚಿತವಾಗಬಹುದೇನೋ?

ಮುಂಗಾರು ಮಳೆ ಚಿತ್ರದ ಹೈಲೈಟ್ ಅಂದ್ರೆ ಜೋಗ ಜಲಪಾತ. ನಿರ್ದೇಶಕ ಭಟ್ರು ವಿಶ್ವ ವಿಖ್ಯಾತ ಜೋಗ ಜಲಪಾತವನ್ನು ಕರುನಾಡಿಗೆ ಇನ್ನೊಂದು ಆ್ಯಂಗಲ್ ನಲ್ಲಿ ತೋರಿಸುವ ಸಾಹಸವನ್ನು ತಮ್ಮ ಈ ಚಿತ್ರದಲ್ಲಿ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನು ಈ ಚಿತ್ರದ ಸಿನೆಮಟೋಗ್ರಾಫರ್ ಕೃಷ್ಣ ಅವರಂತೂ ಜೋಗದ ರುದ್ರ ಭೀಕರ ಸೌಂದರ್ಯವನ್ನು ತಮ್ಮ ಕೆಮರಾ ಕೈಚಳಕದಲ್ಲಿ ತೋರಿಸಿದ್ದ ರೀತಿಗಂತೂ ಚಿತ್ರ ರಸಿಕರು ಬೆರಗಾಗಿ ಹೋಗಿದ್ದರು.

ಈ ಸನ್ನಿವೇಶದ ಶೂಟಿಂಗ್ ಸಂದರ್ಭದಲ್ಲಿ ನಡೆದ ಘಟನೆಯೊಂದನ್ನು ಮುಂಗಾರು ಮಳೆ ಕೃಷ್ಣ ಅವರು ತಮ್ಮ ಸಂದರ್ಶನ ಒಂದರಲ್ಲಿ ರಸವತ್ತಾಗಿ ವರ್ಣಿಸಿದ್ದಾರೆ.

ಜೋಗ ಜಲಪಾತವನ್ನು ಈ ಹಿಂದಿನ ಎಲ್ಲಾ ಚಿತ್ರಗಳಲ್ಲಿ ಅದರ ಎದುರು ಭಾಗದಿಂದಲೇ ತೋರಿಸಲಾಗಿತ್ತು. ಮತ್ತು ಅದು ಸಾಮಾನ್ಯವಾಗಿ ನಾವೆಲ್ಲರೂ ನೋಡುವ ಜೋಗ ಜಲಪಾತವೇ ಪರದೆಯ ಮೇಲೂ ಕಾಣಿಸುತ್ತಿತ್ತು.


ಆದರೆ ಈ ಚಿತ್ರದಲ್ಲಿ ಭಟ್ರು ಜೋಗದ ಇನ್ನೊಂದು ಭಾಗವನ್ನು ನಮಗೆಲ್ಲಾ ತೋರಿಸುವ ಪ್ರಯತ್ನದಲ್ಲಿ ಗೆದ್ದಿದ್ದರು. ಇದು ಜೋಗ ಜಲಪಾತದ ನಾಲ್ಕು ಕವಲುಗಳು ಎತ್ತರದಿಂದ ಧುಮುಕುವ ಬಹಳ ಅಪಾಯಕಾರಿ ಜಾಗವಾಗಿತ್ತು. ಇಲ್ಲಿಂದ ಜೋಗ ಜಲಪಾತವನ್ನು ಬರ್ಡ್ಸ್ ಪಾಯಿಂಟ್ ಆಫ್ ವ್ಯೂನಲ್ಲಿ ಚಿತ್ರೀಕರಿಸಿ ಪ್ರೇಕ್ಷಕರಿಗೆ ತೋರಿಸುವಲ್ಲಿ ಚಿತ್ರತಂಡ ಯಶಸ್ವಿಯಾಗಿತ್ತು.

ಇಲ್ಲಿ ಶೂಟಿಂಗ್ ಮಾಡುವುದು ಸುಲಭದ ಮಾತೇನಾಗಿರಲಿಲ್ಲ, ಶರಾವತಿ ನದಿ ಬಂಡೆಗಳ ಮೇಲೆ ಹರಿದು ಬಂಡೆಯ ತುದಿಯಿಂದ ಜಲಪಾತವಾಗಿ ಧುಮ್ಮಿಕ್ಕುವ ಜಾಗದಲ್ಲೇ ನಾಯಕ ಹಾಗೂ ನಾಯಕಿ ನಿಲ್ಲುವ ದೃಶ್ಯದ ಚಿತ್ರೀಕರಣದ ಸಂದರ್ಭದಲ್ಲಿ ಈ ತಮಾಷೆಯ ಘಟನೆ ನಡೆದಿತ್ತು ಎಂಬುದನ್ನು ಕೃಷ್ಣ ಅವರು ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದರು.

ಈ ದೃಶ್ಯದ ಚಿತ್ರೀಕರಣ ಸಂದರ್ಭದಲ್ಲಿ ಪ್ರೀತಂ ಗುಬ್ಬಿ ಹಾಗೂ ನಾಯಕ ನಟ ಗಣೇಶ್ ನಡುವೆ ಸಣ್ಣದೊಂದು ಕಿತ್ತಾಟ ನಡೆದಿತ್ತು. ಬಂಡೆಯೊಂದರ ತುದಿಯಲ್ಲಿ ಗಣೇಶ್ ನಿಂತಿದ್ದಾರೆ, ಒಂದಷ್ಟು ದೂರದಲ್ಲಿ ನಿರ್ದೇಶಕರು, ಪ್ರೀತಂ ಸಹಿತ ಚಿತ್ರತಂಡ ಚಿತ್ರೀಕರಣಕ್ಕೆ ಸಿದ್ಧವಾಗಿ ನಿಂತಿತ್ತು.

ಈ ಸಂದರ್ಭದಲ್ಲಿ ಬಂಡೆಯ ತುದಿಯಲ್ಲಿ ಉಸಿರು ಬಿಗಿಹಿಡಿದು ನಿಂತಿದ್ದ ಗಣೇಶ್ ಅವರನ್ನು ನೋಡಿದ ಪ್ರೀತಂ ‘ಸರ್ ಎಮೋಷನ್ ಇಲ್ಲ ಅಂತ ಹೇಳಿ..’ ಎಂದು ಗಟ್ಟಿಯಾಗಿ ಗಣೇಶ್ ಗೆ ಕೇಳುವಂತೆ ಪಕ್ಕದಲ್ಲೇ ಕುಳಿತಿದ್ದ ಭಟ್ರಿಗೆ ಹೇಳುತ್ತಾರೆ!

ಇದಕ್ಕೆ ಕೌಂಟರ್ ಆಗಿ ಆ ತುದಿಯಲ್ಲಿದ್ದ ಗಣೇಶ್ ಅವರು ‘ಇಲ್ಲಿ ಬಂದು ನಿಂತ್ಕೊಳೋಕೆ ಹೇಳಿ ಸರ್ ಅವ್ನಿಗೆ, ಎಮೋಷನ್ ಅಲ್ಲ, ಏನೂ ಬರಲ್ಲ ಅಂತ ಹೇಳಿ..!’ ಅಂತ ಕಿರುಚುತ್ತಾರೆ.

ಈ ಇಬ್ಬರು ಕುಚುಕು ಗೆಳೆಯರ ಗಲಾಟೆಯನ್ನು ಭಟ್ರು, ಕೃಷ್ಣ ಅವರ ಸಹಿತ ಅಲ್ಲಿದ್ದವರಲ್ಲಾ ಎಂಜಾಯ್ ಮಾಡಿದ್ದರಂತೆ. ಆ ಅಪಾಯಕಾರಿ ಬಂಡೆಯ ತುದಿಯಲ್ಲಿ ಗಣೇಶ್ – ಪೂಜಾ ಗಾಂಧಿ ಸುಮಾರು ಎರಡು ಗಂಟೆಗಳ ಕಾಲ ನಿಂತಿದ್ದರು ಮತ್ತು ನಾವು ನಮಗೆ ಬೇಕಾದ ಶಾಟ್ಸ್ ಎಲ್ಲಾ ನೀಟಾಗಿ ಶೂಟ್ ಮಾಡಿಕೊಂಡೆವು ಎಂಬುದನ್ನು ಕೆಮರಾಮ್ಯಾನ್ ಕೃಷ್ಣ ಅವರು ನೆನಪಿಸಿಕೊಂಡಿದ್ದಾರೆ.

ಹೀಗೆ ಈ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಇಂತಹ ಹಲವು ರಸವತ್ತಾದ ಘಟನೆಗಳು ನಡೆದಿರುವುದನ್ನು ಚಿತ್ರತಂಡದವರು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಇಂದು ಗೋಲ್ಡನ್ ಸ್ಟಾರ್ ಹುಟ್ಟುಹಬ್ಬವಾದ ಕಾರಣ ಈ ಒಂದು ಫನ್ನಿ ಘಟನೆ ಮತ್ತೆ ನೆನಪಾಗುತ್ತಿದೆ.

ಟಾಪ್ ನ್ಯೂಸ್

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

nalkane ayama kannada movie

Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್‌ ಕನಸು: ಇಂದು ತೆರೆಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.