ಗಣೇಶ್‌ ಹೊಸ ಚಿತ್ರ ಆರೆಂಜ್‌


Team Udayavani, Feb 12, 2017, 11:02 AM IST

9.jpg

ನಾಳೆ ಒಂದು ಸರ್‌ಪ್ರೈಸ್‌ ಕೊಡ್ತೀನಿ. ಏನದು ಎಂದು ಊಹೆ ಮಾಡಿ ನೋಡೋಣ …’
ಹಾಗಂತ ಶುಕ್ರವಾರ ಒಂದು ಮೆಸೇಜ್‌ ಹಾಕಿಕೊಂಡಿದ್ದರು ನಿರ್ದೇಶಕ ಪ್ರಶಾಂತ್‌ ರಾಜ್‌. ಜೊತೆಗೊಂದು ಫೋಟೋ ಇತ್ತು. ಫೋಟೋ ನೋಡಿದರೆ, ಅವರು ಏರ್‌ಪೋರ್ಟ್‌ನಲ್ಲಿ ನಿಂತಿರುವುದು ಸ್ಪಷ್ಟವಾಗುತಿತ್ತು. ಆದರೆ, ಅವರು ಎಲ್ಲಿಗೆ ಹೊರಟಿದ್ದಾರೆ, ಯಾವ ಸರಪ್ರೈಸ್‌ ಕೊಡುತ್ತಿದ್ದಾರೆ ಎಂಬ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಆ ಗುಟ್ಟು ಶನಿವಾರ ಬೆಳಿಗ್ಗೆ ಹೊರಬಿದ್ದಿದೆ.ಅದೇನೆಂದರೆ, ಪ್ರಶಾಂತ್‌ ರಾಜ್‌ ಸದ್ಯದಲ್ಲೇ ಗಣೇಶ್‌ ಜೊತೆಗೆ ಒಂದು ಸಿನಿಮಾ ಮಾಡುತ್ತಿದ್ದಾರೆ. ಆ ಸಿನಿಮಾದ ಟೈಟಲ್‌ “ಆರೆಂಜ್‌’. ಹೌದು, “ಜೂಮ್‌’ಯಶಸ್ಸಿನ ನಂತರವೇ ಗಣೇಶ್‌ ಅಭಿನಯದಲ್ಲಿ ಇನ್ನೊಂದು ಚಿತ್ರವನ್ನು ನಿರ್ದೇಶಿಸುವುದಾಗಿ ಪ್ರಶಾಂತ್‌ ಹೇಳಿದ್ದರು. ಆದರೆ,ಗಣೇಶ್‌ ಬೇರೆ ಬೇರೆ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ಈಗ ಹಳೆಯ ಎಲ್ಲಾ ಕೆಲಸಗಳು ಮುಗಿದಿವೆ. “ಚಮಕ್‌’ ಮುಂದಿನ ತಿಂಗಳು ಶುರುವಾಗಲಿದೆ.

“ಚಮಕ್‌’ ನಂತರ ಪ್ರಶಾಂತ್‌ ರಾಜ್‌ಗೆ  ಡೇಟ್ಸ್‌ ಕೊಟ್ಟಿದ್ದಾರೆ ಗಣೇಶ್‌. ಚಿತ್ರ ಶುರುವಾಗುವುದೇನಿದ್ದರೂ ಅವರ ಹುಟ್ಟುಹಬ್ಬಕ್ಕೇ. ಆದರೆ, ಶನಿವಾರ ಚಿತ್ರದ ಟೈಟಲ್‌ ಲಾಂಚ್‌ ಆಗಿದೆ. ಇಷ್ಟು ಬೇಗ ಆಗುವುದಕ್ಕೂ ಒಂದು ಕಾರಣವೇನಿದೆ. ಅದೇನೆಂದರೆ, ಶನಿವಾರ ಗಣೇಶ್‌ ಮತ್ತು ಶಿಲ್ಪಾ ಗಣೇಶ್‌ ಅವರ ಮದುವೆ ವಾರ್ಷಿಕೋತ್ಸವ. ಈ ಸಂಭ್ರಮದಲ್ಲಿ ಚಿತ್ರದ ಹೆಸರನ್ನು ಬಿಡುಗಡೆ ಮಾಡಲಾಗಿದೆ.

“ಆರೆಂಜ್‌’ ಚಿತ್ರವೂ”ಜೂಮ್‌’ಗಿಂಥ ಕಲರ್‌ ಫ‌ುಲ್‌ ಆಗಿರುವುದಷ್ಟೇ ಅಲ್ಲ, ಮನರಂಜನೆಯೂ ಹೆಚ್ಚಿರುತ್ತದಂತೆ. “ತೆಲುಗಿನಲ್ಲೂ ಇಂಥದ್ದೇ ಒಂದು ಹೆಸರಿನ ಚಿತ್ರ ಬಂದಿದೆ. ಆದರೆ, ರಾಮ್‌ ಚರಣ್‌ ತೇಜ ಚಿತ್ರಕ್ಕೂ, ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇದೊಂದು ಅಪ್ಪಟ ಕನ್ನಡ ಚಿತ್ರ. ಸಖತ್‌ ಟ್ರೆಂಡಿಯಾಗಿರುತ್ತದೆ. ಶ್ರೀಮಂತ್ರ ಆಸೆಗಳು ಏನೇನಿರುತ್ತದೆ ಎಂದು ಈ ಚಿತ್ರದಲ್ಲಿ ಹೇಳುವುದಕ್ಕೆ ಹೊರಟಿದ್ದೇನೆ. ಚಿತ್ರದಲ್ಲಿ ಬಹುತೇಕ “ಜೂಮ್‌’ ತಂಡವೇ ಇರುತ್ತದೆ. ನಾಯಕಿಯ ಹುಡುಕಾಟ ಸದ್ಯಕ್ಕೆ ನಡೆಯುತ್ತಿದೆ’ ಎಂದು ಚಿತ್ರದ ಬಗ್ಗೆ ವಿವರ ಕೊಡುತ್ತಾರೆ ಪ್ರಶಾಂತ್‌ ರಾಜ್‌.

ಅಂದಹಾಗೆ, ಚಿತ್ರದ ಟೈಟಲ್‌ ಬಿಡುಗಡೆಯಾಗಿದ್ದು ಶಿರಡಿಯ ಸಾಯಿಬಾಬ ದೇವಸ್ಥಾನದಲ್ಲಿ. ಇಲ್ಲಿ ಇದುವರೆಗೂ ಯಾವುದೇ ಕನ್ನಡದ ಚಿತ್ರದ ಟೈಟಲ್‌ ಬಿಡುಗಡೆಯಾಗಿರಲಿಲ್ಲವಂತೆ. ಈ ಸಂದರ್ಭದಲ್ಲಿ ಗಣೇಶ್‌, ಶಿಲ್ಪ ಗಣೇಶ್‌,ಪ್ರಶಾಂತ್‌ ರಾಜ್‌, ನಿರ್ಮಾಪಕ ನವೀನ್‌ ಜೊತೆಗೆ “ಮುಗುಳು ನಗೆ’ ನಿರ್ಮಾಪಕ ಸಯ್ಯದ್‌ ಸಲಾಂ ಸೇರಿದಂತೆ ಹಲವರು ಜೊತೆಗಿದ್ದಾರೆ.

ಟಾಪ್ ನ್ಯೂಸ್

5-fir

Bengaluru: ಠಾಣೆಯಲ್ಲೇ ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ, ಪೊಲೀಸರ ಮೇಲೆ ಹಲ್ಲೆ

Tragedy: ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆಗೆ ಮುಂದಾದ ವೈದ್ಯರು.. ತಾಯಿ, ಮಗು ಮೃತ್ಯು

Tragedy: ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆಗೆ ಮುಂದಾದ ವೈದ್ಯರು.. ತಾಯಿ, ಮಗು ಮೃತ್ಯು

Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ

Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ

4-sampaje

Aranthodu: ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ ಗೆ ಢಿಕ್ಕಿ ಹೊಡೆದ ಕಾರು

3-vijayapura

Vijayapura: ಸೀಟಿಗಾಗಿ ಮಹಿಳೆಯರ ಕಿತ್ತಾಟ: ರಸ್ತೆಯಲ್ಲೇ ನಿಂತ ಬಸ್

Lok Sabha Election: ರಾಯ್​ಬರೇಲಿಯಿಂದ ರಾಹುಲ್,​ ಅಮೇಥಿಯಿಂದ ಕೆ.ಎಲ್​. ಶರ್ಮ ಕಣಕ್ಕೆ

Lok Sabha Election: ರಾಯ್​ಬರೇಲಿಯಿಂದ ರಾಹುಲ್,​ ಅಮೇಥಿಯಿಂದ ಕೆ.ಎಲ್​. ಶರ್ಮ ಕಣಕ್ಕೆ

2-blr-crime

Bengaluru: ರಸ್ತೆಯಲ್ಲೇ 10 ಬಾರಿ ಇರಿದು ಪತ್ನಿಯ ಕೊಂದ ಪತಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rangasthala kannada movie

Kannada Cinema; ರಂಗಮಂಟಪ ಸುತ್ತ ‘ರಂಗಸ್ಥಳ’; ಹೊಸ ಚಿತ್ರದ ಟೈಟಲ್‌ ಲಾಂಚ್‌

jasti preethi kannada movie

Jasti Preethi; ಫೇಸ್ ಬುಕ್ ಪೋಸ್ಟ್ ಸಿನಿಮಾವಾಯಿತು..

Sandalwood: ಪ್ರೇಕ್ಷಕಳಾಗಿ ಕಾಂಗರೂ ನನಗೆ ಇಷ್ಟವಾಯಿತು..

Sandalwood: ಪ್ರೇಕ್ಷಕಳಾಗಿ ಕಾಂಗರೂ ನನಗೆ ಇಷ್ಟವಾಯಿತು..

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

5-fir

Bengaluru: ಠಾಣೆಯಲ್ಲೇ ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ, ಪೊಲೀಸರ ಮೇಲೆ ಹಲ್ಲೆ

Lok Sabha Polls: ದಾವಣಗೆರೆ ಮಾದರಿ ಕ್ಷೇತ್ರವನ್ನಾಗಿಸುವ ಕನಸಿದೆ: ಗಾಯತ್ರಿ ಸಿದ್ದೇಶ್ವರ

Lok Sabha Polls: ದಾವಣಗೆರೆ ಮಾದರಿ ಕ್ಷೇತ್ರವನ್ನಾಗಿಸುವ ಕನಸಿದೆ: ಗಾಯತ್ರಿ ಸಿದ್ದೇಶ್ವರ

Tragedy: ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆಗೆ ಮುಂದಾದ ವೈದ್ಯರು.. ತಾಯಿ, ಮಗು ಮೃತ್ಯು

Tragedy: ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆಗೆ ಮುಂದಾದ ವೈದ್ಯರು.. ತಾಯಿ, ಮಗು ಮೃತ್ಯು

Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ

Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ

4-sampaje

Aranthodu: ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ ಗೆ ಢಿಕ್ಕಿ ಹೊಡೆದ ಕಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.