ರಾಯರ ಆಶೀರ್ವಾದ: ಮೇಘನಾ-ಚಿರು ಮಗು ಬಗ್ಗೆ ನವರಸ ನಾಯಕ ಜಗ್ಗೇಶ್ ಮೊದಲ ಮಾತು
Team Udayavani, Oct 23, 2020, 4:48 PM IST
ಬೆಂಗಳೂರು: ನಟಿ ಮೇಘನಾರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದ ಹಿನ್ನೆಲೆಯಲ್ಲಿ ನವರಸ ನಾಯಕ ಜಗ್ಗೇಶ್ ಅವರು ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಡಿಸಿದ್ದಾರೆ.
ಜಗ್ಗೇಶ್ ಟ್ವೀಟ್ ನಲ್ಲೇನಿದೆ:
“ಮೇಘನಾಗೆ ಗಂಡು ಮಗು ಆಯಿತು ಎಂದು ತಿಳಿದು ತುಂಬ ಖುಷಿಯಾಯಿತು. ನಿನ್ನೆ ಅರ್ಜುನ್ ಸರ್ಜಾ, ನಾನು ದೂರವಾಣಿಯಲ್ಲಿ ಮೇಘನ ಬಗ್ಗೆ ಮಾತನಾಡುತ್ತಿದ್ದೇವು ಪಾಪ ಚಿರು ನೆನೆದು ಬಹಳ ಸಂಕಟಪಟ್ಟರು ಅರ್ಜುನ್. ದೇವರು ಕರುಣಾಮಯ ಮತ್ತೆ ಚಿರು ಹುಟ್ಟಿಬಂದ ಅನ್ನಿಸಿತು.
ಮಗುವಿಗೆ ರಾಯರು ಆಯುಆರೋಗ್ಯ ಕರುಣಿಸಿ ಶ್ರೇಷ್ಠ ಸಾಧಕನಾಗಲಿ ಎಂದು ಪ್ರಾರ್ಥನೆ. Godblessಮೇಘನ” ಎಂದು ಟ್ವೀಟ್ ಮಾಡಿದ್ದಾರೆ.
ಕಳೆದ ಜೂನ್ ತಿಂಗಳಿನಲ್ಲಿ ಚಿರಂಜೀವಿ ಸರ್ಜಾ ನಿಧನರಾಗಿದ್ದ ವೇಳೆ ಪತ್ನಿ ಮೇಘನಾ ಗರ್ಭಿಣಿಯಾಗಿದ್ದಳು. ಅಲ್ಲದೇ ತನಗೆ ಗಂಡು ಮಗುವೇ ಜನಿಸುತ್ತದೆ ಎಂದು ಚಿರು ಹೇಳಿರುವುದಾಗಿ ಮೇಘನಾ ಟ್ವೀಟ್ ಮಾಡಿದ್ದರು. ನಿರೀಕ್ಷೆಯಂತೆ ಗುರುವಾರ(ಅಕ್ಟೋಬರ್ 22, 2020) ಮೇಘನಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಕುಟುಂಬ ಸದಸ್ಯರಲ್ಲಿ, ಚಿರು ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿತ್ತು.
ಮೇಘನ ಗೆ ಗಂಡು ಮಗು ಆಯಿತು ಎಂದು ತಿಳಿದು ತುಂಬ ಖುಷಿಯಾಯಿತು!ನಿನ್ನೆ ಅರ್ಜುನ ಸರ್ಜ ನಾನು ದೂರವಾಣಿಯಲ್ಲಿ ಮೇಘನ ಬಗ್ಗೆ ಮಾತಾಡುತ್ತಿದ್ದೆವು ಪಾಪ ಚಿರು ನೆನೆದು ಬಹಳ ಸಂಕಟಪಟ್ಟರು ಅರ್ಜುನ!
ದೇವರು ಕರುಣಾಮಯ ಮತ್ತೆ ಚಿರು ಹುಟ್ಟಿಬಂದ ಅನ್ನಿಸಿತು!
ಮಗುವಿಗೆ ರಾಯರು ಆಯುಆರೋಗ್ಯ ಕರುಣಿಸಿ ಶ್ರೇಷ್ಠ ಸಾಧಕನಾಗಲಿ ಎಂದು ಪ್ರಾರ್ಥನೆ!
Godblessಮೇಘನ.— ನವರಸನಾಯಕ ಜಗ್ಗೇಶ್ (@Jaggesh2) October 22, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ
OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!
ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್ ರೋಲ್ ನಲ್ಲಿ ಫಾಫಾ
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ