ನಿಮಗೆ ಹ್ಯಾಟ್ಸ್ ಆಫ್..; ಕಾಂತಾರ ಚಿತ್ರಕ್ಕೆ ರಜನಿ ಕಾಂತ್ ಮೆಚ್ಚುಗೆ
ಸೂಪರ್ ಸ್ಟಾರ್ ಹೊಗಳಿಕೆಗೆ ರಿಷಬ್ , ಸಪ್ತಮಿ ಗೌಡ ಪ್ರತಿಕ್ರಿಯೆ....
Team Udayavani, Oct 26, 2022, 4:49 PM IST
ಚೆನ್ನೈ : ದಿನದಿಂದ ದಿನಕ್ಕೆ ದಿಗ್ಗಜರಿಂದ ಪ್ರಶಂಸೆ ಪಡಿಯುತ್ತಿರುವ ‘ಕಾಂತಾರ’ ಚಿತ್ರಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ಮೆಚ್ಚುಗೆಯ ಮಾತುಗಳನ್ನು ಟ್ವೀಟ್ ಮೂಲಕ ಪ್ರಕಟ ಪಡಿಸಿದ್ದಾರೆ.
“ತಿಳಿದಿರುವುದಕ್ಕಿಂತ ಅಜ್ಞಾತವು ಹೆಚ್ಚು. ಇದನ್ನು ಸಿನಿಮಾದಲ್ಲಿ ಹೊಂಬಾಳೆ ಫಿಲ್ಮ್ಸ್ ಗಿಂತ ಉತ್ತಮವಾಗಿ ಬೇರೆ ಯಾರೂ ಹೇಳಲು ಸಾಧ್ಯವಿಲ್ಲ. ನೀವು ಕಾಂತಾರ ಚಿತ್ರದ ಮೂಲಕ ನನಗೆ ಗೂಸ್ ಬಂಪ್ಸ್ ಕೊಟ್ಟಿದ್ದೀರಿ. ಒಬ್ಬ ಬರಹಗಾರ, ನಿರ್ದೇಶಕ ಮತ್ತು ನಟನಾಗಿ ರಿಷಬ್ ಶೆಟ್ಟಿ ನಿಮಗೆ ಹ್ಯಾಟ್ಸ್ ಆಫ್” ಎಂದು ಪ್ರಶಂಸಿದ್ದಾರೆ.
ರಜನಿ ಕಾಂತ್ ಅವರ ಹೊಗಳಿಕೆಯ ಟ್ವೀಟ್ ಗೆ ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ಮರು ಟ್ವೀಟ್ ಮಾಡಿ ಧನ್ಯವಾದ ಸಲ್ಲಿಸಿದ್ದಾರೆ.
”ಪ್ರೀತಿಯ ರಜನಿಕಾಂತ್ ಸರ್, ನೀವು ಭಾರತದ ದೊಡ್ಡ ಸೂಪರ್ಸ್ಟಾರ್ ಮತ್ತು ನಾನು ಬಾಲ್ಯದಿಂದಲೂ ನಿಮ್ಮ ಅಭಿಮಾನಿ. ನಿಮ್ಮ ಮೆಚ್ಚುಗೆಯೇ ನನ್ನ ಕನಸು ನನಸು ಮಾಡಿದೆ. ನೀವು ಹೆಚ್ಚು ಸ್ಥಳೀಯ ಕಥೆಗಳನ್ನು ಮಾಡಲು ಮತ್ತು ಎಲ್ಲೆಡೆ ನಮ್ಮ ಪ್ರೇಕ್ಷಕರನ್ನು ಪ್ರೇರೇಪಿಸಲು ನನ್ನನ್ನು ಪ್ರೇರೇಪಿಸುತ್ತೀರಿ. ಧನ್ಯವಾದಗಳು ಸರ್ ‘ಎಂದು ರಿಷಬ್ ಟ್ವೀಟ್ ಮಾಡಿದ್ದಾರೆ.
”ದೇಶದ ದೊಡ್ಡ ಸೂಪರ್ಸ್ಟಾರ್ ನಮ್ಮ ಕಾಂತಾರ ಚಿತ್ರದ ಬಗ್ಗೆ ಮಾತನಾಡುವಾಗ ಅದು ಇಡೀ ತಂಡಕ್ಕೆ ದೊಡ್ಡ ಶಕ್ತಿ ಬೂಸ್ಟ್ ನೀಡುತ್ತದೆ.ನಾನು ಮಾತನಾಡಲು ತುಂಬಾ ಚಿಕ್ಕವಳು ಎಂದು ನಾನು ಹೇಳಬಲ್ಲೆ ರಜನಿಕಾಂತ್ ಸರ್ ಧನ್ಯವಾದ’ ಎಂದು ಸಪ್ತಮಿ ಗೌಡ ಟ್ವೀಟ್ ಮಾಡಿದ್ದಾರೆ.
When the biggest superstar of the country talks about our movie #kantara it gives the entire team a bigger energy boost.
I am too small to even talk about @rajinikanth sir all I can say is thank youuu ?????????? https://t.co/rBycr0fe0c— Sapthami Gowda (@gowda_sapthami) October 26, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ