KGF 2 ದಾಖಲೆ; 5 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗುತ್ತಿದೆ ಯಶ್ ಸಿನಿಮಾ


Team Udayavani, Apr 11, 2022, 12:00 PM IST

KGF 2 ದಾಖಲೆ; 5 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗುತ್ತಿದೆ ಯಶ್ ಸಿನಿಮಾ

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ಚಿತ್ರ “ಕೆಜಿಎಫ್-2′ ಸಿನಿಮಾದ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಇದೇ ಗುರುವಾರ (ಏ.14ಕ್ಕೆ) ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು, ಮಲೆಯಾಳಂ ಭಾಷೆಗಳಲ್ಲೂ “ಕೆಜಿಎಫ್-2′ ಬಿಡುಗಡೆ ಆಗಲಿದ್ದು, ಯಶ್‌ ಅಭಿನಯದ ಪ್ಯಾನ್‌ ಇಂಡಿಯಾ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ. ಇದೇ ವೇಳೆ ಮಾತಿಗೆ ಸಿಕ್ಕ ನಟ ಯಶ್‌, ನಿರ್ದೇಶಕ ಪ್ರಶಾಂತ್‌ ನೀಲ್‌, ನಿರ್ಮಾಪಕ ವಿಜಯ್‌ ಕಿರಗಂದೂರು ಮತ್ತು ಚಿತ್ರತಂಡ “ಕೆಜಿಎಫ್-2′ ಬಿಡುಗಡೆಯ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿತು.

5 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್‌

“ಕೆಜಿಎಫ್-2′ ಭಾರತದಲ್ಲಿ ದಾಖಲೆಯ ಸ್ಕ್ರೀನ್‌ಗಳಲ್ಲಿ ತೆರೆ ಕಾಣಲಿದೆ ಎಂದು ಮೊದಲಿನಿಂದಲೂ ಹೇಳಲಾಗುತ್ತಿತ್ತು. ಆದರೆ ಅಧಿಕೃತವಾಗಿ ಆ ಸಂಖ್ಯೆ ಎಷ್ಟು ಎಂಬ ಪ್ರಶ್ನೆಗೆ ಈಗ ಚಿತ್ರತಂಡದಿಂದ ಬಂದಿರುವ ಉತ್ತರ 5 ಸಾವಿರ. ಹೌದು, “ಕೆಜಿಎಫ್-2′ ಸಿನಿಮಾ ಭಾರತದಲ್ಲೇ ದಾಖಲೆಯ ಐದು ಸಾವಿರಕ್ಕೂ ಹೆಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಈ ಕುರಿತು ಮಾಹಿತಿ ನೀಡಿರುವ “ಕೆಜಿಎಫ್-2′ ನಿರ್ಮಾಪಕ ವಿಜಯ್‌ ಕಿರಗಂದೂರು, “ಭಾರತದಲ್ಲಿ ಸರಿಸುಮಾರು 9500 ಚಿತ್ರಮಂದಿರಗಳಿದ್ದು, ಈ ಪೈಕಿ ಐದು ಸಾವಿರಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ “ಕೆಜಿಎಫ್-2′ ರಿಲೀಸ್‌ಗೆ ಪ್ಲಾನ್‌ ಮಾಡಿಕೊಳ್ಳಲಾಗಿದೆ. ಇನ್ನು ಕರ್ನಾಟಕದಲ್ಲೇ 500ಕ್ಕೂ ಹೆಚ್ಚು ಸ್ಕ್ರೀನ್‌ ಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ’ ಎನ್ನುತ್ತಾರೆ.

ವಿದೇಶಗಳಲ್ಲೂ ಭರ್ಜರಿ ಡಿಮ್ಯಾಂಡ್‌, ಭಾರೀ ರೆಸ್ಪಾನ್ಸ್‌

ಇನ್ನು “ಕೆಜಿಎಫ್-2′ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಏಕಕಾಲಕ್ಕೆ ತೆರೆ ಕಾಣುತ್ತಿದೆ. “ಅಮೆರಿಕಾದಲ್ಲಿ ಕೂಡ ಈಗಾಗಲೇ ಟಿಕೆಟ್‌ ಬುಕ್ಕಿಂಗ್‌ ಶುರುವಾಗಿದ್ದು, ದೊಡ್ಡ ಸಂಖ್ಯೆಯಲ್ಲಿ ಟಿಕೆಟ ಬುಕ್ಕಿಂಗ್‌ ಆಗುತ್ತಿದೆ. ಅಲ್ಲಿ ತೆಲುಗು ಮಾತನಾಡುವವರ ಜನಸಂಖ್ಯೆ ಜಾಸ್ತಿ ಇರುವುದರಿಂದ, ತೆಲುಗು ವರ್ಶನ್‌ಗೆ ಡಿಮ್ಯಾಂಡ್‌ ಹೆಚ್ಚಿದೆ. ಈಗಾಗಲೇ ತಮಿಳು, ಹಿಂದಿ ಭಾಷೆಗಳಲ್ಲಿ ಬೇರೆ ಸಿನಿಮಾಗಳಿಂದ ಕಾಂಪಿಟೇಶನ್‌ ಇರುವುದರಿಂದ, ಅಡ್ವಾನ್ಸ್‌ ಬುಕಿಂಗ್‌ ಶುರು ಮಾಡಲಾಗಿದೆ. ವಿದೇಶಗಳಲ್ಲೂ “ಕೆಜಿಎಫ್-2’ಗೆ ಭರ್ಜರಿ ರೆಸ್ಪಾನ್ಸ್‌ ಸಿಗುತ್ತಿದೆ’ ಎನ್ನುತ್ತಾರೆ ವಿಜಯ್‌ ಕಿರಗಂದೂರು.

ಸದ್ಯಕ್ಕಂತೂ ಲಾಭ ಬಂದಿಲ್ಲ; ಬಜೆಟ್‌ ಗುಟ್ಟು ಬಿಟ್ಟುಕೊಡುವುದಿಲ್ಲ…

“ಕೆಜಿಎಫ್-2′ ಸಿನಿಮಾಕ್ಕೆ ಡಿಮ್ಯಾಂಡ್‌ ಹೆಚ್ಚಾಗಿರುವುದರಿಂದ, ಬಿಝಿನೆಸ್‌ ಚೆನ್ನಾಗಿ ಆಗಿರಬಹುದು, ಚಿತ್ರತಂಡ ಲಾಭದಲ್ಲಿರಬಹುದು. “ಕೆಜಿಎಫ್-2′ ಬಿಗ್‌ ಬಜೆಟ್‌ ಸಿನಿಮಾ ಎಂದು ಹೇಳಲಾಗು ತ್ತಿರುವುದರಿಂದ ಅದರ ಬಜೆಟ್ ಎಷ್ಟಿರಬಹುದು ಎಂಬುದು ಸಹಜವಾಗಿಯೇ ಸಿನಿಪ್ರಿಯರ ಕುತೂಹಲ. ಇದೇ ಪ್ರಶ್ನೆಯನ್ನು ನಿರ್ಮಾಪಕ ವಿಜಯ್‌ ಕಿರಗಂದೂರು ಅವರ ಮುಂದಿಟ್ಟರೆ ಅವರಿಂದ ಬರುವ ಉತ್ತರ ಹೀಗಿದೆ. “ಸಿನಿಮಾ ಬಿಗ್‌ ಬಜೆಟ್‌ನಲ್ಲಿ ನಿರ್ಮಿಸಿರುವುದೇನೋ ನಿಜ. ಸಿನಿಮಾದ ಸಬೆjಕ್ಟ್ ಏನು ಡಿಮ್ಯಾಂಡ್‌ ಮಾಡಿತ್ತೋ, ಅದೆಲ್ಲವನ್ನು ಕೊಟ್ಟು ಸಿನಿಮಾ ಮಾಡಿದ್ದೇವೆ. ಇದುವರೆಗೂ ನಮ್ಮ ಯಾವುದೇ ಸಿನಿಮಾಗಳ ಬಜೆಟ್‌ ಬಹಿರಂಗಪಡಿಸಿಲ್ಲ. ಹಾಗಾಗಿ ಬಜೆಟ್‌ ಹೇಳುವುದಕ್ಕೆ ಇಷ್ಟವಿಲ್ಲ. ಇನ್ನು ರಿಲೀಸ್‌ಗೂ ಮುಂಚೆಯೇ ಸಿನಿಮಾ ಲಾಭ ಮಾಡಿಕೊಟ್ಟಿದೆ ಎಂದು ಈಗಲೇ ಹೇಳುವಂತಿಲ್ಲ. ಸಿನಿಮಾವನ್ನು ನಾವು ಮಾರಾಟ ಮಾಡಿಲ್ಲ. ಹೀಗಾಗಿ ಲಾಭದ ಬಗ್ಗೆ ಈಗಲೇ ಏನೂ ಹೇಳುವಂತಿಲ್ಲ’ ಎನ್ನುವುದು ವಿಜಯ್‌ ಕಿರಗಂದೂರು ಮಾತು

ಪೈರಸಿ ತಡೆಯುವುದು ಜನರ ಕೈಯಲ್ಲಿದೆ

ಈಗಾಗಲೇ ಬಿಡುಗಡೆಯಾಗಿರುವ ಬಿಗ್‌ಸ್ಟಾರ್‌ ಸಿನಿಮಾಗಳಿಗೆ ಎದುರಾಗಿದ್ದ ಪೈರಸಿ ಕಾಟ “ಕೆಜಿಎಫ್-2’ಗೂ ಇದೆ. ಯಾವುದೇ ದೊಡ್ಡ ಸಿನಿಮಾಕ್ಕಾದರೂ ಪೈರಸಿ ದೊಡ್ಡ ಶತ್ರು. ಅಂತೆಯೇ “ಕೆಜಿಎಫ್-2′ ಸಹ ಈ ಸಮಸ್ಯೆಯಿಂದ ಹೊರತಲ್ಲ. ಪೈರಸಿ ತಡೆಯಲು ಏನೆಲ್ಲ ಕ್ರಮ ಕೈಗೊಳ್ಳಲಾಗಿದೆ ಎಂಬ ಪ್ರಶ್ನೆಗೆ ಯಶ್‌ ಉತ್ತರ ಹೀಗಿದೆ. “ನಾವು ಚಾಪೆ ಕೆಳಗೆ ತೂರಿದರೆ, ಅವರು ರಂಗೋಲಿ ಕೆಳಗೆ ತೂರುತ್ತಾರೆ. ಹಾಗಾಗಿ, ಜನ ತೀರ್ಮಾನಿಸಬೇಕು. ಚರ್ಮ ಖರೀದಿಸುವುದನ್ನು ನಿಲ್ಲಿಸಿದರೆ, ಪ್ರಾಣಿಗಳನ್ನು ಕೊಲ್ಲುವುದು ಸಹ ತಪ್ಪುತ್ತದೆ. ಹಾಗೆಯೇ, ಪೈರಸಿ ನೋಡಬಾರದು ಎಂದು ಜನ ತೀರ್ಮಾನಿಸಿದರೆ, ಪೈರಸಿ ಸಹ ನಿಲ್ಲುತ್ತದೆ. ಜನ ಪೈರಸಿ ಸಿನಿಮಾವನ್ನೇ ನೋಡಬೇಕು ಎಂದು ತೀರ್ಮಾನಿಸಿದರೆ, ಅದು ಅವರ ನಷ್ಟ. ಥಿಯೇಟರ್‌ಗಳಲ್ಲಿ ಸಿನಿಮಾ ಚೆನ್ನಾಗಿ ಕಾಣಿಸಬೇಕು, ಕೇಳಿಸಬೇಕು ಎಂದು ಬಹಳ ಕೆಲಸ ಮಾಡಿರುತ್ತೀವಿ. ಹಾಗಾಗಿ, ಜನ ಯಾವುದು ಒಳ್ಳೆಯದು ಅನ್ನೋದನ್ನ ತೀರ್ಮಾನಿಸಬೇಕು’ ಎನ್ನುತ್ತಾರೆ.

“ಕೆಜಿಎಫ್’ ಸರಣಿ ಮತ್ತೆ ಮುಂದುವರೆಯುತ್ತಾ?

ಇನ್ನು “ಕೆಜಿಎಫ್’ ಅನ್ನೋ ಹೆಸರಿಗೆ ತನ್ನದೇ ಆದ ಬ್ರ್ಯಾಂಡ್‌ ವ್ಯಾಲ್ಯೂ ಇರೋದ್ರಿಂದ್ರ, “ಕೆಜಿಎಫ್-2′ ಬಳಿಕ ಮತ್ತೆ ಸರಣಿ ಮುಂದುವರೆಯಲಿದೆಯಾ ಎಂಬ ಪ್ರಶ್ನೆ ಅನೇಕರಲ್ಲಿದೆ. ಈ ಬಗ್ಗೆ ಮಾತನಾಡುವ ನಿರ್ದೇಶಕ ಪ್ರಶಾಂತ್‌ ನೀಲ್‌, “”ಅವೆಂಜರ್’ ತರಹವೇ “ಕೆಜಿಎಫ್’ ಸರಣಿಗೂ ತನ್ನದೇ ಆದ ಬ್ರ್ಯಾಂಡ್‌ ವ್ಯಾಲ್ಯೂ ಇದೆ ಅನ್ನೋದೇನೋ ನಿಜ. ಆದರೆ, “ಕೆಜಿಎಫ್-2′ ನಂತರ “ಕೆಜಿಎಫ್-3′ ಮಾಡುವ ಯೋಚನೆ ಏನಾದರೂ ಇದೆಯಾ ಅನ್ನೋದನ್ನ ಏ. 14ರ ನಂತರ ನೋಡೋಣ’ ಎನ್ನುತ್ತಾರೆ ನಿರ್ದೇಶಕ ಪ್ರಶಾಂತ್‌ ನೀಲ…. “ಕೆಜಿಎಫ್’ ಸಿನಿಮಾವನ್ನು ಮುಂದುವರೆಸುವುದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳುವುದು ಕಷ್ಟ. ಆದರೆ, ಸದ್ಯಕ್ಕೆ ಚಿತ್ರವನ್ನು ಮುಂದುವರೆಸುವ ಯೋಚನೆ ಇಲ್ಲ. “ಕೆಜಿಎಫ್-2′ ಯಶಸ್ವಿಯಾದರೆ ಮುಂದೆ ನೋಡೋಣ’ ಎನ್ನುವುದು ಪ್ರಶಾಂತ್‌ ನೀಲ್‌ ಮಾತು

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.