36 ವರ್ಷಗಳ ಬಳಿಕ ಈಡೇರಿತು ಕಿಚ್ಚನ ಆಸೆ: ಫೋಟೋ ಹಿಂದಿದೆ ಇಂಟರೆಸ್ಟಿಂಗ್ ಕಹಾನಿ!


Team Udayavani, Dec 20, 2021, 9:46 AM IST

36 ವರ್ಷಗಳ ಬಳಿಕ ಈಡೇರಿತು ಕಿಚ್ಚನ ಆಸೆ: ಫೋಟೋ ಹಿಂದಿದೆ ಇಂಟರೆಸ್ಟಿಂಗ್ ಕಹಾನಿ!

ಕೆಲವು ಆಸೆಗಳು ಈಡೇರಲು ವರ್ಷಾನುಗಟ್ಟಲೇ ಸಮಯ ಹಿಡಿಯುತ್ತದೆ. ಈಗ ಸುದೀಪ್‌ ಅವರ ಆಸೆಯೊಂದು ಬರೋಬ್ಬರಿ 36 ವರ್ಷಗಳ ನಂತರ ಈಡೇರಿದೆ. ಆ ಆಸೆ ಯಾವುದೆಂದರೆ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಕಪಿಲ್‌ ದೇವ್‌ ಜೊತೆ ಫೋಟೋ ತೆಗೆಸಿಕೊಳ್ಳೋದು. 36 ವರ್ಷಗಳ ಹಿಂದೆ ಕಪಿಲ್‌ ದೇವ್‌ ಜೊತೆ ಫೋಟೋ ತೆಗೆಸಿಕೊಳ್ಳಲು ಪ್ರಯತ್ನಿಸಿ ಸಾಧ್ಯವಾಗದ ಆಸೆ, ಈಗ ಸ್ವತಃ ಕಪಿಲ್‌ ದೇವ್‌ ಅವರೇ ಹೆಗಲ ಮೇಲೆ ಕೈ ಹಾಕಿ ಫೋಟೋಗೆ ಫೋಸ್‌ ಕೊಡುವ ಮೂಲಕ ಈಡೇರಿದೆ.

ಇತ್ತೀಚೆಗೆ ರಣವೀರ್‌ ಸಿಂಗ್‌ ನಾಯಕರಾಗಿರುವ “83′ ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ನಟ ಸುದೀಪ್‌, ಕಪಿಲ್‌ ದೇವ್‌ ಕೂಡಾ ಭಾಗವಹಿಸಿದ್ದರು. ಈ ವೇಳೆ ಸುದೀಪ್‌ ಅವರು, 36 ವರ್ಷಗಳ ಹಿಂದೆ ತಾನು ಕಪಿಲ್‌ ದೇವ್‌ ಅವರ ಜೊತೆ ಫೋಟೋ ತೆಗೆಸಿಕೊಳ್ಳಲು ಪ್ರಯತ್ನಿಸಿದ ಘಟನೆ ಯನ್ನು ವಿವರಿಸಿದರು.

ಇದನ್ನೂ ಓದಿ:ದೇಶೀಯ ಕೂಟ ಮುಂದೂಡಿದ ದ.ಆಫ್ರಿಕಾ: ಭಾರತ ವಿರುದ್ಧದ ಸರಣಿ ನಡೆಯುವುದೂ ಅನುಮಾನ!

“ನಾನಿನ್ನು ಆಗ ಚಿಕ್ಕವನು. ನನಗೆ ಕಪಿಲ್‌ ದೇವ್‌ ಅವರ ಜೊತೆ ಫೋಟೋ ತೆಗೆಸಿಕೊಳ್ಳಬೇಕೆಂಬ ಆಸೆ. ಆಗ ಭಾರತ ತಂಡ ಬೆಂಗಳೂರಿಗೆ ಬಂದು ಹೋಟೆಲ್‌ವೊಂದರಲ್ಲಿ ಉಳಿದುಕೊಂಡಿತ್ತು. ನಾನು ಕಪಿಲ್‌ ದೇವ್‌ ಅವರನ್ನು ನೋಡಿ, ಫೋಟೋ ತೆಗೆಸಿ ಕೊಳ್ಳಬೇಕೆಂದು ಹೋದೆ. ಆಗ ಕಪಿಲ್‌ ದೇವ್‌ ಒಬ್ಬರೇ ವಾಕ್‌ ಮಾಡುತ್ತಿದ್ದರು. ಕೂಡಲೇ ಅವರ ಬಳಿ ಫೋಟೋ ತೆಗೆಸಿಕೊಳ್ಳಲು ಹೋದೆ. ನನ್ನ ಅಕ್ಕನೂ ಜೊತೆಗಿದ್ದಳು. ಆದರೆ, ನನ್ನ ದುರಾದೃಷ್ಟಕ್ಕೆ ನನ್ನ ಕ್ಯಾಮರಾ ವರ್ಕ್‌ ಆಗಲಿಲ್ಲ. ಅದರಿಂದ ಬೇಸರಗೊಂಡ ನಾನು ಅಳ್ಳೋಕೆ ಶುರು ಮಾಡಿದೆ. ಆಗ ಕಪಿಲ್‌ ದೇವ್‌ ಅವರು ನನ್ನನ್ನು ಸಮಾಧಾನ ಮಾಡಿದರು. ಅವತ್ತು ಹುಟ್ಟಿದ ಆಸೆ ಇಂದು ಈಡೇರಿದೆ’ ಎಂದರು.

ಈ ಮಾತನ್ನು ಕೇಳಿಸಿಕೊಂಡು ಕಪಿಲ್‌ ದೇವ್‌, ಸುದೀಪ್‌ ಅವರ ಬಳಿ ಬಂದು, “ಬನ್ನಿ ನಿಮ್ಮ ಜೊತೆ ನಾನು ಫೋಟೋ ತೆಗೆಸಿಕೊಳ್ಳುತ್ತೇನೆ’ ಎಂದು ಸುದೀಪ್‌ ಅವರ ಹೆಗಲಿಗೆ ಕೈ ಹಾಕಿ ಫೋಟೋಗೆ ಫೋಸ್‌ ಕೊಟ್ಟರು. ಈ ಮೂಲಕ ಸುದೀಪ್‌ ಅವರ 36 ವರ್ಷಗಳ ಹಿಂದಿನ ಕನಸು ಈಡೇರಿದಂತಾಗಿದೆ.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.