ಮಾಸ್‌ ಡೈಲಾಗ್ಸ್‌ನಲ್ಲಿ ಸ್ಟಾರ್‌ ಸಿನಿಮಾಗಳ ಅಬ್ಬರ


Team Udayavani, Feb 19, 2021, 8:34 AM IST

ಮಾಸ್‌ ಡೈಲಾಗ್ಸ್‌ನಲ್ಲಿ ಸ್ಟಾರ್‌ ಸಿನಿಮಾಗಳ ಅಬ್ಬರ

ಕನ್ನಡ ಚಿತ್ರರಂಗದಲ್ಲಿ ಇವತ್ತಿಗೂ ದೊಡ್ಡ ಮಾರುಕಟ್ಟೆ ಇರೋದು ಮಾಸ್‌ ಸಿನಿಮಾಗಳಿಗೆ ಎಂಬ ಮಾತಿದೆ. ಅದು ಸತ್ಯ ಕೂಡಾ. ಸಿನಿಮಾ ಪ್ರಿಯರನ್ನು ಮಾಸ್‌ ಸಿನಿಮಾಗಳು, ಅದರ ಡೈಲಾಗ್‌ಗಳು ಸೆಳೆಯುವಷ್ಟು ಬೇಗನೇ ಇತರ ಜಾನರ್‌ ಸಿನಿಮಾಗಳು ಸೆಳೆಯುವುದಿಲ್ಲ. ಅದರಲ್ಲೂ ಸ್ಟಾರ್‌ ನಟರಿಂದ ಬರುವ ಮಾಸ್‌ ಸಿನಿಮಾಗಳಲ್ಲಿನ ಮಾಸ್‌ ಡೈಲಾಗ್ಸ್‌ ಅವರ ಅಭಿಮಾನಿಗಳಲ್ಲಿ ಇನ್ನಿಲ್ಲದಂತೆ ಕ್ರೇಜ್‌ ಹುಟ್ಟಿಸುತ್ತದೆ.

ಅದೇ ಕಾರಣದಿಂದ ಸಿನಿಮಾಗಳ ನಿರ್ದೇಶಕರುಗಳು ಕೂಡಾ ಮೊದಲು ಮಾಸ್‌ ಆಡಿಯನ್ಸ್‌ನ ತೃಪ್ತಿಪಡಿಸುತ್ತಾರೆ. ಏಕೆಂದರೆ ಸಿನಿಮಾವನ್ನು ಮೊದಲು ಕೈ ಹಿಡಿಯೋರು ಅವರೇ. ಸಿನಿಮಾ ರಿಲೀಸ್‌ಗೆ ಕಾದು ಫ‌ಸ್ಟ್‌ ಡೇ ಫ‌ಸ್ಟ್‌ ಶೋ ನೋಡೋರು, ಹೀರೋಗೆ ಜೈಕಾರ ಹಾಕೋರು, ಕಟೌಟ್‌ಗೆ ಹಾಲಿನಾಭಿಷೇಕ ಮಾಡುವ ಮನಸ್ಸು ಮಾಸ್‌ ಸಿನಿಮಾ ಪ್ರಿಯರದ್ದು. ಹಾಗಾಗಿ, ಸಿನಿಮಾಗಳ ಟ್ರೇಲರ್‌, ಟೀಸರ್‌ನಲ್ಲಿ ಮಾಸ್‌ ಡೈಲಾಗ್‌ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ನಾಲ್ಕು ಸಿನಿಮಾಗಳು ತಮ್ಮ ಮಾಸ್‌ ಡೈಲಾಗ್‌ ಮೂಲಕ ಮಾಸ್‌ ಆಡಿಯನ್ಸ್‌ಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದೆ.

ಇಂದು ತೆರೆಕಾಣುತ್ತಿರುವ “ಪೊಗರು’, “ರಾಬರ್ಟ್‌’, “ಯುವರತ್ನ’ ಹಾಗೂ “ಸಲಗ’ ಚಿತ್ರಗಳ ಟೀಸರ್‌, ಟ್ರೇಲರ್‌ಗಳಲ್ಲಿರುವ ಮಾಸ್‌ ಡೈಲಾಗ್‌ಗಳು ಈಗ ಸಖತ್‌ ಹಿಟ್‌ ಆಗಿವೆ. ಈ ಮೂಲಕ 2021 ಮಾಸ್‌ ಆಡಿಯನ್ಸ್‌ಗೆ ಖುಷಿ ಕೊಡಲಿದೆ. ಇದು ಕೇವಲ ನಾಲ್ಕು ಸಿನಿಮಾಗಳಿಗೆ ಸೀಮಿತವಾಗಿಲ್ಲ. ಮುಂದೆ ಸರತಿಯಲ್ಲಿರುವ “ಕೆಜಿಎಫ್-2′, “ಭಜರಂಗಿ-2′, “ಕಬ್ಬ’, “ಕೋಟಿಗೊಬ್ಬ-3′, “ಜೇಮ್ಸ್‌’, “ಮದಗಜ’ … ಹೀಗೆ ಇನ್ನೂ ಅನೇಕ ಸಿನಿಮಾಗಳಲ್ಲಿ ಈ ತರಹದ ಮಾಸ್‌ ಡೈಲಾಗ್‌ಗಳಿವೆ. ಅವುಗಳು ಟೀಸರ್‌, ಟ್ರೇಲರ್‌ ಬಂದ ನಂತರವಷ್ಟೇ ಗೊತ್ತಾಗಲಿದೆ.

ಇದನ್ನೂ ಓದಿ: ಯಕ್ಷರಂಗದ ಸಿಡಿಲಮರಿ ಖ್ಯಾತಿಯ ಡಾ. ಶ್ರೀಧರ ಭಂಡಾರಿ ಪುತ್ತೂರು ಇನ್ನಿಲ್ಲ!

ಸದ್ಯ ಟೀಸರ್‌, ಟ್ರೇಲರ್‌ಗಳಲ್ಲಿ ಸದ್ದು ಮಾಡುತ್ತಿರುವ ಚಿತ್ರಗಳ ಪ್ರಮುಖ ಮಾಸ್‌ ಡೈಲಾಗ್‌ಗಳನ್ನು ಇಲ್ಲಿ ನೀಡಲಾಗಿದೆ.

ಪೊಗರು

*ಅಡ್ರೆಸ್‌ ತಿಳ್ಕೊಂಡು ಸರ್ವಿಸ್‌ ಮಾಡೋಕೆ ಕೊರಿಯರ್‌ ಹುಡುಗ ಅಂದ್ಕೊಂಡೇನೋ…. ಫೈಟರ್‌… ಹೊಡೆದ್ರೆ ಯಾವನೂ ಅಡ್ರೆಸ್‌ಗೆ ಇರಲ್ಲ.. ಹೋಗಿ ಅವನಿಗೆ ನನ್ನ ಅಡ್ರೆಸ್‌ ಹೇಳು, ಅವನು ಮಾಡ್ತಿರೋದನ್ನೆಲ್ಲಾ ನೋಡಿ ಸುಮ್ನೆ ಕೂರೋದಕ್ಕೆ ಆ ಶಿವನ ಮುಂದೆ ಕೂತಿರೋ ನಂದಿ ಅಲ್ಲ… ಆ ದುರ್ಗಿನಾ ಹೊತ್ಕೊಂಡು ತಿರುಗಾಡೋ ಸಿಂಹ ನಾನು ಅಂತ ಹೇಳು… ಅವನಿಗಿರೋ ಪವರ್‌ನೆಲ್ಲಾ ಯೂಸ್‌ ಮಾಡ್ಲಿ, ಅವನಿಗಿರೋ ಜನರನ್ನೆಲ್ಲಾ ಯೂಸ್‌ ಮಾಡ್ಲಿ, ಅವನಿಗೇನಾದ್ರು ಧಮ್‌ ಅನ್ನೋದು ಇದ್ರೆ ಅದನ್ನೂ ಯೂಸ್‌ ಮಾಡಿದ್ರು ಸರಿ… ಐಯಾಮ್‌ ರೆಡಿ ಟು ಫೇಸ್‌

* ಒಬ್ನೇ ಬರ್ತೀನಿ..ಏನಾಯ್ತು ಅಂತ ನೋಡಿ ತಲೆಗೆ ಹತ್ತೋಷ್ಟರಲ್ಲಿ ಎಲ್ಲಾ ಮುಗಿಸಿ ಹೋಗ್ತಾ ಇರ್ತೀನಿ… ಮಕ್ಳ, ಸಿಂಪಲ್ಲಾಗಿ ಮೂರ್‌ ಹೊಡೆದಿದ್ದಕ್ಕೇನೇ ಸೀರಿಯಸ್‌ ಆಗಿದ್ದೀರಾ.. ಇನ್ನು ಸೀರಿಯಸ್‌ ಆಗಿ ಹೊಡೆದ್ರೆ ಸೀದಾ ಸುಡುಗಾಡೇ

* ತೋಳ್‌ ತುಂಬಾ ತಾಕತ್‌ ಇದ್ರು ತಕರಾರು ಮಾಡಲ್ಲ.. ಎದೆ ತುಂಬಾ ನಿಯತ್ತು ಇದ್ರು ಗುಲಾಮ ಆಗಿರಲ್ಲ.. ಗೂಳಿ ಸೈಲೆಂಟ್‌ ಆಗಿದೆ ಅಂತ ಗಾಂಚಾಲಿ ಮಾಡೋಕೆ ಬಂದ್ರೆ ಗುಧ್ದೋ ಏಟಿಗೆ ಗೂಗಲ್‌ನಲ್ಲಿ ಹುಡುಕಿದ್ರು ಟ್ರೀಟ್‌ಮೆಂಟ್‌ ಸಿಗಲ್ಲ… ಐಯಾಮ್‌ ನಟೋರಿಯಸ್‌

ರಾಬರ್ಟ್‌

*ನನ್ನನ್ನು ಸಂಹಾರ ಮಾಡ್ತೀನಿ ಅಂತ ಬರೋನು ನನಿಗಿಂತ ದೊಡ್ಡ ಕ್ರಿಮಿನಲ್‌ ಆಗಿರ್ಬೇಕು, ನನಿಗಿಂತ ಟೆರರ್‌ ಆಗಿರ್ಬೇಕು, ನನಿಗಿಂತ ವೈಲೆಂಟ್‌ ಆಗಿರ್ಬೇಕು…ಆ ತರಹದೋನು ಈ ಭೂಮಿ ಮೇಲೆ ಇದ್ದಾನಾ

* ­ನಾವು ನೋಡೋಕ್‌ ಮಾತ್ರ ಕ್ಲಾಸು.. ವಾರ್‌ಗೆ ಇಳಿದ್ರೆ ಫ‌ುಲ್‌ ಮಾಸ್‌,

*ಏ ತುಕಾಲಿ, ನೀನು ಮಾಸ್‌ ಆದ್ರೆ ನಾನು ಆ ಮಾಸ್‌ಗೆ ಬಾಸ್‌..

* ಸಾಮಾನ್ಯವಾಗಿ ಮನುಷ್ಯ ನಡುಗೋದು 2 ಬಾರಿ ಮಾತ್ರ… ಒಂದು ಅತಿಯಾದ ಚಳಿ ಆದಾಗ, ಇನ್ನೊಂದು ಅತಿಯಾದ ಭಯ ಆದಾಗ

*  ಈ ಕೈಗೆ ಶಬರಿ ಮುಂದೆ ಸೋಲೋದೂ ಗೊತ್ತು, ರಾವಣನ ಮುಂದೆ ಗೆಲ್ಲೋದು ಗೊತ್ತು..!

ಇದನ್ನೂ ಓದಿ: ಯಾರಿಗುಂಟು ಯಾರಿಗಿಲ್ಲ…ಕೋವಿಡ್ ಫಾಸಿಟಿವ್ ಬಂದವರಿಗೆ ಈ ರೆಸಾರ್ಟ್ ಲ್ಲಿ ಉಚಿತ ರೂಂ

ಯುವರತ್ನ

*­ಈ ದುನಿಯಾದಲ್ಲಿ ಮೂರು ತರಹ ಗಂಡಸ್ರು ಇರ್ತಾರೆ. ರೂಲ್‌ನ ಫಾಲೋ ಮಾಡೋರು, ರೂಲ್‌ನ ಬ್ರೇಕ್‌ ಮಾಡೋರು, ಮೂರನೇಯವರು ನನ್ನ ತರಹ… ರೂಲ್‌ ಮಾಡೋರು

­*ಗಂಡಸ್ತನ, ಛರ್ಬಿ, ಮೀಟರ್‌, ಮಾರ್ಕೇಟ್‌ ಇವೆಲ್ಲ ಇರೋನೊಬ್ಬ ಬೇಕು? ಸಿಗ್ತಾನಾ

* ಸೀಟ್ಗಾಗಿ ಹೊಡೆದಾಡೋನು ಡಾನ್‌, ಅದರ ಮೇಲೆ ಕುಳಿತುಕೊಳ್ಳೋನು..

* ಬ್ಯಾಟು-ಬಾಲ್‌ ಇದೆ ಅಂಥ ಫೀಲ್ಡಿಗೆ ಇಳಿದೋನಲ್ಲ ನಾನು, ಹೊಡಿತೀವಿ ಅಂತ ಕಾನ್ಫಿಡೆನ್ಸ್ ಇರೋದ್ರಿಂದಲೇ ಫೀಲ್ಡಿಗೆ ಇಳಿತಿರೋದು…

ಸಲಗ

* ವರ್ಲ್ಡ್ ಯಾವುದೇ ಕಲರ್‌ನಲ್ಲಿದ್ರೂ ಈ ಅಂಡರ್‌ವರ್ಲ್ಡ್ ಮಾತ್ರ ಕೆಂಪು ಕಲರ್‌ನಲ್ಲೇ ಇರಬೇಕು..

* ನಾನು ಹೊಡಿಬೇಕು ಅಂತ ಡಿಸೈಡ್‌ ಮಾಡಿದ್ರೆ ಸೈನ್ಯ ಎಷ್ಟೇ ದೊಡ್ಡದಾಗಿರ್ಲಿ ನುಗ್ಗಿ ಒಬ್ನೇ ಹೊಡಿತೀನಿ…

 

ರವಿ ಪ್ರಕಾಶ್ ರೈ

ಟಾಪ್ ನ್ಯೂಸ್

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.