ಸ್ಟಾರ್ ನಟರಿಂದ ಗುರು ನಮನ
Team Udayavani, Mar 9, 2021, 4:37 PM IST
ಕೆಲವು ದಿನಗಳ ಹಿಂದಷ್ಟೇ ಪುನೀತ್ ರಾಜ್ಕುಮಾರ್ ಅವರ “ಯುವರತ್ನ’ ಚಿತ್ರದ ಗುರುವಿನ ಕುರಿತಾದ ಪಾಠಶಾಲಾ ಹಾಡು ಬಿಡುಗಡೆಯಾಗಿತ್ತು. ಈಗ ಚಿತ್ರತಂಡ ಮೈಗುರು ಎಂಬ ಅಭಿಯಾನ ಶುರು ಮಾಡಿ, ಒಬ್ಬೊಬ್ಬರಿಗೆ ಟ್ಯಾಗ್ ಮಾಡುತ್ತಿದೆ. ಇಲ್ಲಿ ತಮ್ಮ ಗುರು ಯಾರೆಂದು ಹೇಳಬೇಕು.
ಈಗಾಗಲೇ ಪುನೀತ್ರಾಜ್ಕುಮಾರ್, ಧ್ರುವ, ನಿರ್ದೇಶಕ ಪವನ್ ಒಡೆಯರ್ ತಮ್ಮ ಗುರುವಿನ ಫೋಟೋ ಜೊತೆಗೆ ಬರೆದುಕೊಂಡಿದ್ದಾರೆ. ನಟ ಪುನೀತ್ ರಾಜ್ಕುಮಾರ್ ಜೀವನದ ಮೌಲ್ಯ ಕಲಿಸಿದ ವಿಜಯಲಕ್ಷ್ಮೀ ಟೀಚರ್ ನನ್ನ ಗುರು ಎಂದು ಅವರ ಜೊತೆಗಿನ ಫೋಟೋಶೇರ್ ಮಾಡಿದ್ದಾರೆ.
ನಟ ಧ್ರುವ ಸರ್ಜಾ ಅವರಿಗೆ ಅವರ ಸಹೋದರ ಚಿರಂಜೀವಿ ಸರ್ಜಾ ಅವರೇ ಗುರುವಂತೆ. ಚಿರು ಜೊತೆಗಿನ ಫೋಟೋ ಜೊತೆಗೆ, “ಬಾಳೆಂಬ ಮೊಳಕೆ ಚಿಗುರೊಡೆಯಲು ಮಳೆಯಾದೆ, ಹೂವಾಗಿ ಅರಳಲು ಸ್ಫೂರ್ತಿಯ ಸೂರ್ಯನಾದೆ ವೃಕ್ಷವಾಗಿ ಬೆಳೆಯಲು ಆಸರೆಯ ಭೂಮಿಯಾದ ನನ್ನ ಅಣ್ಣ ನನ್ನ ಗುರು’ ಎಂದಿದ್ದಾರೆ.
ನಿರ್ದೇಶಕ ಪವನ್ ಒಡೆಯರ್ ಅವರಿಗೆ ಅವರ ಲೆಕ್ಕ ಕಲಿಸಿದ ಸತೀಶ್ ಮೇಷ್ಟ್ರು ಗುರುವಂತೆ. ಹೀಗೆ ಕನ್ನಡ ಚಿತ್ರರಂದಲ್ಲಿ ಸದ್ಯ ಗುರು ನಮನ ನಡೆಯುತ್ತಿದೆ. ಮುಂದೆ ಮತ್ತೂಂದಿಷ್ಟು ಮಂದಿ ತಮ್ಮ ಗುರುಗಳನ್ನು ನೆನೆಸಿಕೊಳ್ಳಲಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ