![1-kanwar-msid](https://www.udayavani.com/wp-content/uploads/2024/07/1-kanwar-msid-415x233.jpg)
ಕಿರಿಕ್ ಕೀರ್ತಿ ಈಗ ಹೀರೋ
Team Udayavani, Feb 12, 2017, 10:36 AM IST
![5.jpg](https://www.udayavani.com/wp-content/uploads/2017/02/12/5.jpg)
“ಬಿಗ್ಬಾಸ್’ಗೆ ಹೋಗಿ ಬಂದವರಿಗೆ ಸಿನಿಮಾದಲ್ಲಿ ಅವಕಾಶ ಸಿಗುತ್ತಾ, ಬಣ್ಣದ ಲೋಕದಲ್ಲಿ ಅವರು ಮಿಂಚುತ್ತಾರಾ ಎಂಬ ಪ್ರಶ್ನೆ ಅನೇಕರಲ್ಲಿದೆ. ಈ ಪ್ರಶ್ನೆ “ಬಿಗ್ಬಾಸ್’ ವೀಕ್ಷಕರನ್ನು ಕಾಡುತ್ತಿರುವಾಗಲೇ “ಕಿರಿಕ್’ ಸುದ್ದಿಯೊಂದು ಬಂದಿದೆ! ಹೀಗೆಂದರೆ ನೀವು ಆಶ್ಚರ್ಯಪಡಬೇಡಿ. “ಬಿಗ್ಬಾಸ್ ಸೀಸನ್-4’ನಲ್ಲಿ ರನ್ನರ್ ಅಪ್ ಆದ ಕಿರಿಕ್ ಕೀರ್ತಿ ಈಗ ಸಿನಿಮಾವೊಂದರಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ಆ ಸಿನಿಮಾ ಕೂಡಾ ಅವರ ಹೆಸರಲ್ಲೇ ಸೆಟ್ಟೇರುತ್ತಿದೆ ಎಂಬುದು ವಿಶೇಷ. ಓಂ ಪ್ರಕಾಶ್ ರಾವ್ “ಕಿರಿಕ್ ಕೀರ್ತಿ’ ಎಂಬ ಸಿನಿಮಾ ಮಾಡಲು ಹೊರಟಿದ್ದು, ಕೀರ್ತಿ ಈ ಚಿತ್ರದ ನಾಯಕ.
ಚಿತ್ರವನ್ನು ರಮೇಶ್ ಯಾದವ್ ಹಾಗೂ ಬಿ.ಎಸ್.ಸುಧೀಂದ್ರ ಸೇರಿ ನಿರ್ಮಿಸುತ್ತಿದ್ದಾರೆ.”ಬಿಗ್ಬಾಸ್’ ಮನೆಯಲ್ಲಿ ಓಂ ಪ್ರಕಾಶ್ ರಾವ್ ಕೂಡಾ ಹೋಗಿ ಬಂದಿರೋದು ನಿಮಗೆ ಗೊತ್ತೇ ಇದೆ. ಈಗ ಕೀರ್ತಿಗೆ ಹೊಂದುವಂತಹ ಕಥೆಯನ್ನೇ ಓಂ ಪ್ರಕಾಶ್ ರೆಡಿಮಾಡಿದ್ದಾರಂತೆ. ಸದ್ಯದಲ್ಲೇ ಚಿತ್ರೀಕರಣ ಕೂಡಾ ಆರಂಭವಾಗಲಿದೆ. ಚಿತ್ರಕ್ಕೆ ಎಂ.ಎಸ್.ರಮೇಶ್ ಸಂಭಾಷಣೆ, ಚಂದನ್ ಶೆಟ್ಟಿ ಸಂಗೀತವಿದೆ.
ಟಾಪ್ ನ್ಯೂಸ್
![1-kanwar-msid](https://www.udayavani.com/wp-content/uploads/2024/07/1-kanwar-msid-415x233.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.