Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Team Udayavani, Mar 29, 2024, 5:12 PM IST
“ಪಾರ್ಟ್ನರ್’- ಹೀಗೊಂದು ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದ್ದು, ಇತ್ತೀಚೆಗೆ ಚಿತ್ರದ ಟ್ರೇಲರ್ ಹಾಗೂ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಿತು. ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಅವರು ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು.
ಟಿ.ಆರ್.ಗೌತಮ್ ಗೌಡ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಚಿತ್ರವನ್ನು ನವಿಲು ವಾಯುಪುತ್ರ ಕಂಬೈನ್ಸ್ ಬ್ಯಾನರ್ನಡಿ ನಾಗರಾಜ.ಆರ್ ಹಾಗೂ ಟಿ.ಕೆ.ರವಿ ಸೇರಿ ನಿರ್ಮಾಣ ಮಾಡಿದ್ದಾರೆ. ಚೇತಸ್ ಆರ್. ಮತ್ತು ಸತೀಶ್ ಕೃಷ್ಣ ಶೆಟ್ಟಿ ಚಿತ್ರದ ನಾಯಕರಾಗಿ ನಟಿಸಿದ್ದು, ಅಗ್ನಿಸಾಕ್ಷಿ ಖ್ಯಾತಿಯ ಸುಕೃತಾನಾಗ್ ಹಾಗೂ ಪ್ರೀತಿ ಮಿರಾಜ್ಕರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕ ಗೌತಮ್ ಗೌಡ ಮಾತನಾಡಿ, “ಇದು ನನ್ನ ಮೊದಲ ಚಿತ್ರ. ಇಬ್ಬರು ಸ್ನೇಹಿತರ, ಸ್ನೇಹದ ಸುತ್ತ ನಡೆಯುವ ಕಥೆ ಇದಾಗಿದ್ದು, ಫ್ಯಾಮಿಲಿ ಎಮೋಶನ್ಸ್, ಲವ್ ಸ್ಟೋರಿ, ತಾಯಿ ಸೆಂಟಿಮೆಂಟ್..ಎಲ್ಲ ಅಂಶಗಳು ಈ ಚಿತ್ರದಲ್ಲಿದೆ. ಯಾವುದನ್ನೂ ಅನವಶ್ಯಕವಾಗಿ ಸೇರಿಸಿಲ್ಲ, ಚಿತ್ರವನ್ನು ಕೋವಿಡ್ ಸಮಯದಲ್ಲಿ ಶುರು ಮಾಡಿದ್ದೆವು. 15 ದಿನ ಶೂಟಿಂಗ್ ನಂತರ ನಿಲ್ಲಿಸಬೇಕಾಯಿತು. ಚಿತ್ರದಲ್ಲಿ ಬಲರಾಜವಾಡಿ, ಶಿವರಾಜ್ ಕೆ.ಆರ್. ಆರ್.ಪೇಟೆ ಪ್ರಮುಖ ಪಾತ್ರಗಳಲ್ಲಿದ್ದಾರೆ ‘ಎಂದರು.
ನಾಯಕ ಹಾಗೂ ನಿರ್ಮಾಪಕರೂ ಆದ ಚೇತಸ್, “ನಮ್ಮ ಚಿತ್ರ ಇಲ್ಲಿಯವರೆಗೆ ಬಂದಿದೆ ಎಂದರೆ, ಚಿತ್ರತಂಡ ನೀಡಿದ ಸಹಕಾರವೇ ಕಾರಣ. ನಾನು ಅರ್ಜುನ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎನ್ನುವುದು ಅವರ ಮಾತು. “ಕೃಷ್ಣ, ಅರ್ಜುನರ ನಡುವಿನ ಸ್ನೇಹ ಸಂಬಂಧ ಹೇಗಿತ್ತು ಅಂತ ಚಿತ್ರದಲ್ಲಿ ತೋರಿಸಿದ್ದೇವೆ’ ಎನ್ನುವುದು ಮತ್ತೂಬ್ಬ ನಾಯಕ ಸತೀಶ್ ಕೃಷ್ಣ ಮಾತು.
ನಾಯಕಿ ಸುಕೃತಾ ಮಾತನಾಡಿ, “ಕಿರುತೆರೆ ಯಲ್ಲಿ ಅಭಿನಯಿಸಿದ್ದ ನನಗೂ ಇದು ಮೊದಲ ಚಿತ್ರ. ಬಜಾರಿ ಥರದ, ರಾಬರಿ ಮಾಡುತ್ತ ಓಡಾಡಿಕೊಂಡಿರೋ ಹುಡುಗಿ ಪಾತ್ರ ತನ್ನದು’ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.