ಅಧೀರನ ಅಭಿನಯದಲ್ಲಿ ರಾಜಿ ಇಲ್ಲ: ಸಂಜಯ್ ದತ್ತ್
Team Udayavani, Dec 30, 2020, 7:02 PM IST
ಮುಂಬೈ: ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್ ಚಾಪ್ಟರ್ 2 ನಲ್ಲಿ ತನ್ನ ಪಾತ್ರವನ್ನು ಸರಳಗೊಳಿಸುವ ಮೂಲಕ ನನ್ನನ್ನು ಮುಜುಗರಕ್ಕೆ ಈಡು ಮಾಡಬೇಡಿ ಎಂದು ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ಹೇಳಿಕೆ ನೀಡಿದ್ದಾರೆ.
ಕೆಜಿಫ್ ಚಾಪ್ಟರ್ 2 ನ ಅಧೀರನ ಪಾತ್ರದಾರಿಯಾಗಿ ಕಾಣಿಸಿಕೊಳ್ಳಲಿರುವ ನಟ ಸಂಜಯ್ ದತ್ತ್ ಇತ್ತೀಚೆಗಷ್ಟೆ ಕ್ಯಾನ್ಸರ್ ಕಾಯಿಲೆಯನ್ನು ಗೆದ್ದು ಹೈದರಾಬಾದ್ ಗೆ ಚಿತ್ರೀಕರಣಕ್ಕಾಗಿ ಆಗಮಿಸಿದ್ದರು.
ನಮಗೆ ನಟ ಸಂಜಯ್ ದತ್ ಅವರ ಆರೋಗ್ಯ ಅತೀ ಮುಖ್ಯ ಅವರು ಆರಾಮದಾಯಕವಾಗಿ ಇರಬೇಕು ಹಾಗಾಗಿ ಆದಷ್ಟು ಸರಳವಾದ ಸಾಹಸಮಯ ದೃಶ್ಯಗಳನ್ನು ಅವರಿಂದ ಮಾಡಿಸಬೇಕು ಎಂದು ಚಿತ್ರತಂಡ ನಿರ್ಧರಿಸಿತ್ತು ಎಂದು ತಿಳಿದು ಬಂದಿದೆ.
ಚಿತ್ರತಂಡದ ಈ ನಿರ್ದಾರಕ್ಕೆ ಉತ್ತರ ನೀಡಿರುವ ನಟ ಸಂಜಯ್ ದತ್ ನನಗೆ ಸರಳವಾದ ಸಾಹಸಮಯ ದೃಶ್ಯಗಳನ್ನು ಮಾಡುವಂತೆ ಹೇಳಿ ನನ್ನನ್ನು ಮುಜುಗರಕ್ಕೆ ಈಡು ಮಾಡಬೇಡಿ. ನಾನು ಚಿತ್ರದ ಕಥೆಯಲ್ಲಿ ಯಾವ ರೀತಿಯ ಪಾತ್ರವಿದೆಯೋ ಹಾಗೆಯೇ ನಟಿಸುತ್ತೇನೆ . ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಚಿತ್ರದಲ್ಲಿನ ಯಾವುದೇ ಸಾಹಸಮಯ ದೃಶ್ಯಗಳಲ್ಲಿ ಬದಲಾವಣೆ ಮಾಡುವುದು ಬೇಡ. ನನ್ನ ಪಾತ್ರದ ಎಲ್ಲಾ ಸಾಹಸ ದೃಶ್ಯಗಳನ್ನು ನಾನೇ ಮಾಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಮಾರುಕಟ್ಟೆಗೆ ಲಗ್ಗೆ ಇಟ್ಟ ಶವೋಮಿ ಎಂಐ 11
ಸಂಜಯ್ ದತ್ ಅವರ ಆರೋಗ್ಯದ ಹಿನ್ನೆಲೆಯಲ್ಲಿ ನಟ ಯಶ್ ಸಂಜಯ್ ದತ್ ಅವರು ಇರುವ ಸ್ಥಳಗಳಲ್ಲಿ ಧೂಳು ಇರದ ರೀತಿ ನೋಡಿಕೊಳ್ಳಿ ಮತ್ತು ಅವರು ನಟಿಸುವುದಕ್ಕಿಂತ ಮೊದಲು ಆ ಜಾಗವನ್ನು ಸ್ಯಾನಿಟೈಸ್ ಮಾಡಿ ಎಂದಿದ್ದರು. ಆದರೆ ಇದಕ್ಕೆ ಒಪ್ಪಿಗೆ ನೀಡದ ನಟ ಸಂಜಯ್ ದತ್, ಪ್ರೇಕ್ಷಕರು ತುಂಬಾ ಬುದ್ದಿವಂತರು ಅವರಿಗೆ ದೃಶ್ಯಗಳಲ್ಲಿ ಚೀಟಿಂಗ್ ಮಾಡಿರುವುದು ಗೊತ್ತಾಗುತ್ತದೆ. ಹಾಗಾಗಬಾರದು ನಾನು ಕಥೆಯಲ್ಲಿ ನನ್ನ ಪಾತ್ರ ಹೇಗಿದೆ ಹಾಗೆಯೇ ನಟಿಸುತ್ತೇನೆ ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್