ಒಂದೇ ಚಿತ್ರದಲ್ಲಿ ಕರಾವಳಿಯ ‘RRR’: ರಕ್ಷಿತ್ ಶೆಟ್ಟಿಯದೇ ಕಥೆ: Raj B Shetty ಹೇಳಿದ್ದೇನು?
Team Udayavani, Jul 18, 2023, 5:46 PM IST
ಬೆಂಗಳೂರು: ಕನ್ನಡ ಸಿನಿಮಾದಲ್ಲಿ ʼಆರ್ ಆರ್ ಆರ್ʼ ಪ್ರತಿಭೆ ಅನೇಕರನ್ನು ಸೆಳೆದಿದೆ. ʼಆರ್ ಆರ್ ಆರ್ʼ ಅಂದರೆ ಜನಪ್ರಿಯ ಸಿನಿಮಾವಲ್ಲ. ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ.
ಈ ಮೂವರ ಸಿನಿಮಾಗಳಿಗೆ ಪ್ರತ್ಯೇಕವಾದ ಫ್ಯಾನ್ ಬೇಸ್ ಗಳಿವೆ. ಮೂವರು ಅಪ್ಪಟ ಕರಾವಳಿ ಪ್ರತಿಭೆಯಾದರೂ ಕರಾವಳಿ ಆಚರಣೆಗಳ ಸುತ್ತ ಸಿನಿಮಾ ಮಾಡಿ ಪ್ಯಾನ್ ಇಂಡಿಯಾ ಮೆಚ್ಚವಂತೆ ಮಾಡಿದ್ದಾರೆ. ʼಕಾಂತಾರಾʼ ʼ777ಚಾರ್ಲಿʼ ಹಾಗೂ ʼ ಗರುಡ ಗಮನ ವೃಷಭ ವಾಹನʼ ಈ ಮೂರು ಸಿನಿಮಾಗಳು ಸಿನಿಮಾರಂಗದಲ್ಲಿ ಕಮಾಲ್ ಮಾಡಿರುವುದು ಗೊತ್ತೇ ಇದೆ.
ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ “ತುಘ್ಲಕ್”, “ಉಳಿದವರು ಕಂಡಂತೆ”, “ಕಿರಿಕ್ ಪಾರ್ಟಿ”, “ರಿಕ್ಕಿ” ಮತ್ತು “ಅವನೇ ಶ್ರೀಮನ್ನಾರಾಯಣ” ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ. ಇನ್ನು ರಿಷಬ್ ಅವರು “ಗರುಡ ಗಮನ ವೃಷಭ ವಾಹನ” ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಅವರೊಂದಿಗೆ ನಟಿಸಿದ್ದಾರೆ. ರಾಜ್ ಬಿ ಶೆಟ್ಟಿ ರಿಷಬ್ ಅವರ ʼಕಾಂತಾರʼ ಸಿನಿಮಾದ ಭೂತಕೋಲವನ್ನು ಸಂಯೋಜನೆ ಮಾಡಿದ್ದರು. ಇದರೊಂದಿಗೆ ರಾಜ್ ಬಿ ಶೆಟ್ಟಿ ರಕ್ಷಿತ್ ಶೆಟ್ಟಿ ಅವರ “777 ಚಾರ್ಲಿ” ಕೆಲ ಭಾಗಗಳನ್ನು ಬರೆದಿದ್ದಾರೆ. ಅದೇ ಚಿತ್ರದಲ್ಲಿ ಒಂದು ಪಾತ್ರವನ್ನೂ ಮಾಡಿದ್ದಾರೆ.
ಇತ್ತೀಚೆಗೆ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಒಂದೇ ತಟ್ಟೆಯಲ್ಲಿ ಊಟ ಮಾಡಿದ್ದು ವೈರಲ್ ಆಗಿತ್ತು. ಪರಸ್ಪರರ ಚಿತ್ರದಲ್ಲಿ ರಕ್ಷಿತ್, ರಿಷಬ್ ಹಾಗೂ ರಾಜ್ ಬಿ ಶೆಟ್ಟಿ ಕೆಲಸ ಮಾಡಿದ್ದಾರೆ. ಆದರೆ ಮೂವರು ಜೊತೆಯಾಗಿ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ.
ʼಟೋಬಿʼ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿರುವ ರಾಜ್ ಬಿ ಶೆಟ್ಟಿ ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
“ರಕ್ಷಿತ್ ನಮ್ಮ ಮೂವರಿಗಾಗಿ ಒಂದು ಕಥೆ ಬರೆದಿದ್ದಾರೆ. ಅದು ಪೂರ್ಣಗೊಂಡರೆ ನಾವು ಮೂವರು ಆ ಕಥೆಯಲ್ಲಿರುತ್ತೇವೆ. ಆದರೆ ಕೆಲವೊಂದು ಕಾರಣಗಳಿಂದಾಗಿ ಆ ಯೋಜನೆ ಸದ್ಯಕ್ಕೆ ನಿಂತಿದೆ. ಎಲ್ಲವೂ ಹೊಂದಾಣಿಕೆಯಾದರೆ ಪ್ರೇಕ್ಷಕರು ನಮ್ಮನ್ನು ಒಟ್ಟಿಗೆ ದೊಡ್ಡ ಪರೆದಯಲ್ಲಿ ನೋಡಬಹುದು” ಎಂದು ಹೇಳಿರುವುದಾಗಿ “ಓಟಿಟಿ ಪ್ಲೇ” ವರದಿ ತಿಳಿಸಿದೆ.
ಸದ್ಯ ಬಾಸಿಲ್ ನಿರ್ದೇಶನದ ʼಟೋಬಿʼ ಸಿನಿಮಾದ ಪ್ರಚಾರ ಭರದಿಂದ ಸಾಗುತ್ತಿದ್ದು, ಸಿನಿಮಾದ ಪೋಸ್ಟರ್, ಫಸ್ಟ್ ಲುಕ್ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಆಗಸ್ಟ್ 25 ರಂದು ಸಿನಿಮಾ ತೆರೆಗೆ ಬರಲಿದೆ. ಕೆವಿಎನ್ ಪ್ರೊಡಕ್ಷನ್ಸ್ ಕರ್ನಾಟಕದಲ್ಲಿ ಚಿತ್ರವನ್ನು ಪ್ರಸ್ತುತ ಹಾಗೂ ವಿತರಣೆಯನ್ನು ಮಾಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ