ರಕ್ತ ಬಂದ್ರೆ ಒಪ್ಪಿಕೊಳ್ಳೋಕೆ ಆಗಲ್ಲ; ಸುದೀಪ್ ಮಾತಿಗೆ ರಶ್ಮಿಕಾ ಪ್ರತಿಕ್ರಿಯೆ
Team Udayavani, Jan 21, 2023, 10:54 AM IST
ಸಿನಿಮಾಗಿಂತ ಹೆಚ್ಚಾಗಿ ವಿವಾದಗಳ ಮೂಲಕ ಸದ್ದು ಮಾಡುವ ನಟಿಯರ ಪೈಕಿ ರಶ್ಮಿಕಾ ಕೂಡ ಒಬ್ಬರು. ಬೇಕೋ, ಬೇಡವೋ ರಶ್ಮಿಕಾ ಆಡುವ ಮಾತುಗಳು ಆಗಾಗ್ಗೆ ನೆಟ್ಟಿಗರನ್ನು ಕೆರಳಿಸುವುದು, ಟ್ರೋಲ್ ಪ್ರಿಯರಿಗೆ ಆಹಾರವಾಗೋದು ಮಾಮೂಲಿ ಎಂಬಂತಾಗಿದೆ. ಈಗ ರಶ್ಮಿಕಾ ಆಡಿರುವ ಅಂಥದ್ದೇ ಮಾತು ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇತ್ತೀಚೆಗಷ್ಟೇ ನಟ ಸುದೀಪ್, “ಸಾರ್ವಜನಿಕ ಜೀವನಕ್ಕೆ ಬಂದರೆ ಹೂಮಾಲೆ, ಮೊಟ್ಟೆ, ಟೊಮೆಟೋ ಮತ್ತು ಕಲ್ಲು ಯಾವಾಗಲು ನಿಮ್ಮ ಬಳಿಗೆ ಬರುತ್ತದೆ, ಹ್ಯಾಂಡಲ್ ಮಾಡುವುದನ್ನು ಕಲಿಯಬೇಕು’ ಎಂದು ಹೇಳಿದ್ದರು.
ಇದನ್ನೂ ಓದಿ:ಸಂತಾನಕ್ಕಾಗಿ ಸೊಸೆಗೆ ಸ್ಮಶಾನದಲ್ಲಿ ಎಲುಬಿನ ಪುಡಿ ತಿನ್ನಿಸಿದರು..; ಮಂತ್ರವಾದಿ ಸೇರಿ 7 ಜನರ ವಿರುದ್ದ ಎಫ್ಐಆರ್
ಸುದೀಪ್ ಅವರ ಮಾತಿಗೆ ಪ್ರತಿಕ್ರಿಯಿಸಿರುವ ರಶ್ಮಿಕಾ, “ನಾನು ಈ ಮಾತನ್ನು ಒಪ್ಪುತ್ತೇನೆ. ಏಕೆಂದರೆ ನಾವು ಸಾರ್ವಜನಿಕ ವ್ಯಕ್ತಿಗಳು. ಆದರೆ ಕಲ್ಲು ಎಸೆದು ನೋವಾದಾಗ, ರಕ್ತ ಬಂದಾಗಲೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದಿದ್ದಾರೆ.
ಸದ್ಯ ಸುದೀಪ್ ಅವರ ಮಾತು ಮತ್ತು ಅದಕ್ಕೆ ಕೌಂಟರ್ ರಿಯಾಕ್ಷನ್ ನಂತಿರುವ ರಶ್ಮಿಕಾ ಮಾತಿನ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು