ಪ್ರತಿನಿತ್ಯ ಈ ಕಾರಣದಿಂದ ಮನೆ ಕೆಲಸದಾಕೆಯ ಪಾದವನ್ನು ಸ್ಪರ್ಶಿಸುತ್ತಾರೆ ಅಂತೆ ನಟಿ ರಶ್ಮಿಕಾ
Team Udayavani, Mar 23, 2023, 2:48 PM IST
ಮುಂಬಯಿ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಟ್ರೆಂಡಿಂಗ್ ಸ್ಟಾರ್ ಗಳಲ್ಲಿ ಒಬ್ಬರು. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುತ್ತಾರೆ. ನಗುಮುಖದಿಂದಲೇ ಅಭಿಮಾನಿಗಳೊಂದಿಗೆ ಬೆರೆಯುತ್ತಾರೆ.
ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ತನ್ನ ವ್ಯಕ್ತಿತ್ವ ಹಾಗೂ ದಿನಚರಣೆಯ ಬಗ್ಗೆ ಮಾತನಾಡಿದ್ದಾರೆ. ಇದರಲ್ಲಿ ಅವರು ಆಡಿದ ಒಂದು ಮಾತಿನಿಂದ ಕೊಡಗಿನ ಬೆಡಗಿ ಮತ್ತೆ ಸುದ್ದಿ ಆಗಿದ್ದಾರೆ.
ಇದನ್ನೂ ಓದಿ: ಐಪಿಎಲ್ ಆರಂಭಕ್ಕೆ ಮೊದಲೇ ಪಂಜಾಬ್ ಕಿಂಗ್ಸ್ ಗೆ ಆಘಾತ; ಸ್ಟಾರ್ ಕ್ರಿಕೆಟರ್ ಔಟ್
“ನನಗೆ ಜೀವನದಲ್ಲಿ ಸಣ್ಣ ವಿಚಾರಗಳು ಕೂಡ ಮಹತ್ವದಾಗುತ್ತದೆ. ನಾನು ಪ್ರತಿನಿತ್ಯ ನನ್ನ ಸ್ನೇಹಿತರು, ಸಾಕು ಪ್ರಾಣಿಗಳೊಂದಿಗೆ ದಿನಕಳೆಯುತ್ತೇನೆ ಅದು ನನಗೆ ಖುಷಿ ಕೊಡುತ್ತದೆ. ಮಾತುಗಳು ಮುಖ್ಯ ಏಕಂದರೆ ಅದು ಸಂತಸವನ್ನು ನೀಡುತ್ತದೆ ಅಥವಾ ಮನಸ್ಸಿಗೆ ನೋವನ್ನೂ ಮಾಡಬಹುದು. ನನಗೆ ಯಾರಾದರೂ ಏನಾದರೂ ಹೇಳಿದಾಗ, ಅದು ಮನಸ್ಸಿಗೆ ತಟ್ಟಿದರೆ ಅದನ್ನು ನಾನು ಡೈರಿಯಲ್ಲಿ ಬರೆದಿಡುತ್ತೇನೆ. ನನಗೆ ಮನೆಗೆ ಹಿಂತಿರುಗಿ, ಪ್ರತಿಯೊಬ್ಬರ ಪಾದಗಳನ್ನು ಗೌರವದಿಂದ ಸ್ಪರ್ಶಿಸುವ ಅಭ್ಯಾಸವಿದೆ. ನಾನು ನನ್ನ ಮನೆ ಕೆಲಸದವಳ ಪಾದವನ್ನು ಸ್ಪರ್ಶಿಸುತ್ತೇನೆ. ನಾನು ಎಲ್ಲರನ್ನೂ ಸಮಾನವಾಗಿ ನೋಡಲು ಇಷ್ಟಪಡುತ್ತೇನೆ. ಹಾಗೆ ಮಾಡಿದಾಗ ಒಬ್ಬ ವ್ಯಕ್ತಿಯಾಗಿ ನಾನು ಯಾರು ಎಂಬುದು ಗೊತ್ತಾಗುತ್ತದೆ” ಎಂದು ʼಬಜಾರ್ ಇಂಡಿಯಾʼ ಕ್ಕೆ ಹೇಳಿದ್ದಾರೆ.
ಇತ್ತೀಚೆಗಷ್ಟೇ ʼಮಿಷನ್ ಮಜ್ನುʼ ಚಿತ್ರದಲ್ಲಿ ಕಾಣಿಸಿಕೊಂಡ ರಶ್ಮಿಕಾ ರಣ್ಬೀರ್ ಕಪೂರ್ ಅವರ ʼಆ್ಯನಿಮಲ್ʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ʼಪುಷ್ಪ-2ʼ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramayana Movie: ʼರಾವಣʼನ ಪತ್ನಿಯಾಗಿ ಯಶ್ ಜೊತೆ ನಟಿಸಲಿದ್ದಾರೆ 51 ಹರೆಯದ ಈ ನಟಿ?
ದೀರ್ಘಕಾಲದ ಗೆಳೆಯನೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟ ತಾಪ್ಸಿ: ಗುಟ್ಟಾಗಿ ಹಸಮಣೆ ಏರಿದ ನಟಿ
ಮೀಟಿಂಗ್ ಮಾಡೋಕ್ಕೂ ರೇಟ್ ಫಿಕ್ಸ್: ನನ್ನ 10 ನಿಮಿಷ ಬೇಕಿದ್ರೆ 1ಲಕ್ಷ ಕೊಡಿ ಎಂದ ನಿರ್ದೇಶಕ
Box office: ʼವೀರ್ ಸಾವರ್ಕರ್ʼ ಆಗಿ ಗೆದ್ರಾ ರಣದೀಪ್ ಹೂಡಾ?; ಮೊದಲ ದಿನ ಗಳಿಸಿದ್ದೆಷ್ಟು?
Priyanka Chopra: ಅಯೋಧ್ಯೆ ರಾಮಲಲ್ಲಾನ ದರ್ಶನ ಪಡೆದ ಪ್ರಿಯಾಂಕಾ ಚೋಪ್ರಾ ದಂಪತಿ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ