ಬ್ಯಾಕ್ ಟು ಡೈರೆಕ್ಷನ್ : ಮತ್ತೆ ನಿರ್ದೇಶನಕ್ಕೆ ಮುಂದಾದ ರಿಷಬ್ ಶೆಟ್ಟಿ
Team Udayavani, Jun 22, 2021, 1:33 PM IST
ಬೆಂಗಳೂರು: ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕೊಡುಗೆ ರಾಮಣ್ಣ ರೈ’ ಸಿನಿಮಾ ಬಳಿಕ ರಿಷಬ್ ಶೆಟ್ಟಿ ಅವರು ನಟನೆಯಲ್ಲಿ ಬ್ಯುಝಿಯಾಗಿ ಬಿಟ್ಟರು. ಇದೀಗ ಮತ್ತೆ ನಿರ್ದೇಶಕರ ಕ್ಯಾಪ್ ಧರಿಸುತ್ತಿದ್ದಾರೆ ನಮ್ಮ ಶೆಟ್ಟರು.
ಹೌದು, ಪ್ರತಿಭಾವಂತ ನಟ, ನಿರ್ಮಾಪಕ, ನಿರ್ದೇಶಕ ರಿಷಬ್ ಶೆಟ್ಟಿ ಮತ್ತೆ ಡೈರೆಕ್ಷನ್ ಗೆ ಮರಳುತ್ತಿದ್ದಾರೆ. ಇದಕ್ಕಾಗಿ ಕತೆಯನ್ನೂ ಸಿದ್ದಮಾಡಿಕೊಂಡಿದ್ದಾರೆ.
ಬೆಲ್ ಬಾಟಂ ಸಿನಿಮಾ ಬಳಿಕ ರಿಷಬ್ ನಟನಾಗಿ, ನಿರ್ಮಾಪಕನಾಗಿಯೇ ಗುರುತಿಸಿಕೊಂಡಿದ್ದರು. ಇದರ ನಡುವೆ ಲಾಕ್ ಡೌನ್, ಕೊರೋನಾದಿಂದಾಗಿ ಅವರು ನಿರ್ದೇಶನ ಮಾಡಬೇಕಿದ್ದ ಸಿನಿಮಾ ರುದ್ರಪ್ರಯಾಗ ಅರ್ಧಕ್ಕೇ ನಿಂತುಹೋಯಿತು.
ಈಗ ಹೊಸ ಕತೆ ರೆಡಿ ಮಾಡಿಕೊಂಡಿದ್ದೇನೆ. ಮತ್ತೆ ನಿರ್ದೇಶನಕ್ಕೆ ಮರಳುವುದಾಗಿ ಹೇಳಿದ್ದಾರೆ. ಮಂಗಳೂರು ಹಿನ್ನೆಲೆಯಲ್ಲಿ ಮೂಡಿಬರಲಿರುವ ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಘರ್ಷದ ಕತೆಯನ್ನಿಟ್ಟುಕೊಂಡು ಅವರು ಸಿನಿಮಾ ಮಾಡಲಿದ್ದಾರಂತೆ. ಸದ್ಯಕ್ಕೆ ಅವರೀಗ ಲೊಕೇಷನ್ ಹುಡುಕುವುದರಲ್ಲಿ ಬ್ಯುಸಿ. ಉಳಿದ ಡೀಟೈಲ್ಸ್ ಸದ್ಯದಲ್ಲೇ ಕೊಡಲಿದ್ದಾರೆ.