ತಾರೆಯರ ನವರಾತ್ರಿ ವೈಭವ: ಹಬ್ಬದ ಮೂಡ್‌ನ‌ಲ್ಲಿ ನಟಿಯರು


Team Udayavani, Oct 7, 2021, 10:51 AM IST

ತಾರೆಯರ ನವರಾತ್ರಿ ವೈಭವ: ಹಬ್ಬದ ಮೂಡ್‌ನ‌ಲ್ಲಿ ನಟಿಯರು

ಇಂದಿನಿಂದ ದಸರಾ ಹಬ್ಬದ ಸಂಭ್ರಮ. ನಾಡಿನ ಜನ-ಮನ ದಸರಾ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇನ್ನು ಚಿತ್ರರಂಗದ ತಾರೆಯರೂ ಕೂಡ ದಸರಾ ಹಬ್ಬದ ಸಂಭ್ರಮಕ್ಕೆ ಜೋರಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹಬ್ಬದ ಸಂಭ್ರಮದಲ್ಲಿರುವ ಸ್ಯಾಂಡಲ್‌ ವುಡ್‌ ತಾರೆಯರು ದಸರಾಕ್ಕಾಗಿ ಏನೇನು ತಯಾರಿ ಮಾಡಿಕೊಂಡಿದ್ದಾರೆ ಅನ್ನೋದನ್ನ “ಉದಯವಾಣಿ’ ಜೊತೆ ಹಂಚಿಕೊಂಡಿದ್ದಾರೆ.

ದಸರಾ ಅಂದ್ರೆ ಇಡೀ ತಿಂಗಳು ಹಬ್ಬದ ಸಂಭ್ರಮದ ವಾತಾವರಣವಿರುತ್ತದೆ. ನಮ್ಮ ಮನೆಯಲ್ಲೆ ದಸರಾವನ್ನು ವಿಶೇಷವಾಗಿ ಆಚರಿಸುತ್ತಾರೆ. ನಾನು ಕೂಡ ಈ ಸೆಲೆಬ್ರೇಶನ್‌ನಲ್ಲಿ ಭಾಗಿಯಾಗುತ್ತೇನೆ. ಕೋವಿಡ್‌ ಭಯ ನಿಧಾನವಾಗಿ ಕಡಿಮೆಯಾಗುತ್ತಿರುವುದರಿಂದ, ಕಳೆದ ಬಾರಿಗಿಂತ ಈ ವರ್ಷ ಹಬ್ಬದ ರಂಗು ಹೆಚ್ಚಾಗುತ್ತಿದೆ. ಇನ್ನು ದಸರಾ ಹಬ್ಬದ ಸಂದರ್ಭದಲ್ಲೇ ನಾನು ಅಭಿನಯಿಸಿರುವ ಮೊದಲ ತೆಲುಗು ಸಿನಿಮಾ “ಪೆಲ್ಲಸಂದಡಿ’ ರಿಲೀಸ್‌ ಆಗುತ್ತಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಆ ಸಿನಿಮಾದ ಪ್ರಮೋಶನ್‌ ಕೂಡ ನಡೆಯುತ್ತಿದೆ. ಎಲ್ಲರಿಗೂ ದಸರಾ ಹಬ್ಬ ಖುಷಿಯನ್ನು ತಂದುಕೊಡಲಿ.

– ಶ್ರೀಲೀಲಾ, ನಟಿ

ನವರಾತ್ರಿ ಸಂದರ್ಭದಲ್ಲಿ ಮನೆಯಲ್ಲಿ ಪ್ರತಿನಿತ್ಯ ಪೂಜೆಯಂತೂ ಇರುತ್ತದೆ. ಆದ್ರೆ ನಾನು ಮಾತ್ರ ಮನೆಯಲ್ಲಿ ಇರೋದಕ್ಕೆ ಸಾಧ್ಯವಾಗುತ್ತಿಲ್ಲ. ಸದ್ಯ ಡಾರ್ಲಿಂಗ್‌ ಕೃಷ್ಣ ಅವರ ಜೊತೆ “ದಿಲ್‌ ಪಸಂದ್‌’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಸಿನಿಮಾದ ಶೂಟಿಂಗ್‌ ನಡೆಯುತ್ತಿದೆ. ಇದರ ಜೊತೆ ಸೀರಿಯಲ್‌ ಶೂಟಿಂಗ್‌, ಟಿ.ವಿ ಪ್ರೋಗ್ರಾಂ ಇವೆಂಟ್ಸ್‌ ಕೂಡ ಇರುವುದರಿಂದ, ಈ ಬಾರಿ ಇಡೀ ನವರಾತ್ರಿ ಸಂದರ್ಭದಲ್ಲಿ ಎಂದಿನಂತೆ ನಾನು ಶೂಟಿಂಗ್‌ನಲ್ಲೇ ಬಿಝಿ ಯಾಗಿರುತ್ತೇನೆ. ಈ ನವರಾತ್ರಿ ಎಲ್ಲರಿಗೂ ಸುಖ, ಶಾಂತಿ, ಸಮೃದ್ಧಿ, ನೆಮ್ಮದಿ ತರಲಿ ಎಂದು ಹಾರೈಸುತ್ತೇನೆ.

-ಮೇಘಾ ಶೆಟ್ಟಿ, ನಟಿ

ಇದನ್ನೂ ಓದಿ:ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಮತ್ತು ಪ್ರಥಮ ಮಹಿಳೆ ಸವಿತಾ ಕೋವಿಂದ್‌ ಚಹಾಕೂಟ

ನಮ್ಮ ಮನೆಯಲ್ಲಿ ಪ್ರತಿವರ್ಷ ಅಮ್ಮನ ನೇತೃತ್ವದಲ್ಲೇ ದಸರಾ ಆಚರಣೆ ಆಗುತ್ತದೆ. ಮನೆಯಲ್ಲಿ ಪ್ರತಿನಿತ್ಯ ಪೂಜೆ, ಆಮೇಲೆ ಒಂದಷ್ಟು ದೇವಸ್ಥಾನಗಳಿಗೆ ಹೋಗುತ್ತೇವೆ. ಈ ಸಲ ದಸರಾ ಹಬ್ಬದ ಸಂದರ್ಭದಲ್ಲಿಯೇ ನನ್ನ ಸಿನಿಮಾ ಕೆಲಸಗಳನ್ನೂ ಮಾಡಬೇಕಾಗಿದೆ. ಸದ್ಯ “ಚಾರ್ಲಿ 777′, “ಲಕ್ಕಿ ಮ್ಯಾನ್‌’ ಸಿನಿಮಾಗಳ ಡಬ್ಬಿಂಗ್‌ ನಡೆಯುತ್ತಿದ್ದು, ಹಬ್ಬದ ನಡುವೆ ಈ ಸಿನಿಮಾಗಳ ಕೆಲಸವನ್ನೂ ಮಾಡುತ್ತಿದ್ದೇನೆ. ಸದ್ಯದ ಮಟ್ಟಿಗೆ ಕೊರೋನಾ ಇನ್ನೂ ಭಯ ಇರುವುದರಿಂದ, ಆದಷ್ಟು ಹೊರಗೆ ಹೋಗದೆ ಎಲ್ಲರೂ ಮನೆಯಲ್ಲೇ ಸರಳವಾಗಿ ದಸರಾ ಆಚರಿಸಿದರೆ ಒಳ್ಳೆಯದು. ಈ ದಸರಾ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಹಾರೈಸುತ್ತೇನೆ

-ಸಂಗೀತಾ ಶೃಂಗೇರಿ, ನಟಿ

ಈ ವರ್ಷ ದಸರಾ ನನಗೆ ಹಿಂದೆಂದಿಗಿಂತಲೂ ಡಬಲ್‌ ಖುಷಿಗೆ ಕಾರಣವಾಗಿದೆ. ಅದಕ್ಕೆ ಕಾರಣ “ಸಲಗ’ ಸಿನಿಮಾ. ಈ ದಸರಾ ಹಬ್ಬದ ಸಂದರ್ಭದಲ್ಲಿ ನಾನು ಅಭಿನಯಿಸಿರುವ “ಸಲಗ’ ಸಿನಿಮಾ ರಿಲೀಸ್‌ ಆಗ್ತಿದೆ. ಕಳೆದ ಕೆಲ ದಿನಗಳಿಂದ “ಸಲಗ’ ಪ್ರಮೋಶನ್ಸ್‌ ಜೋರಾಗಿ ನಡೆಯುತ್ತಿದೆ. ಈ ವರ್ಷ ರಿಲೀಸ್‌ ಆಗುತ್ತಿರುವ ನನ್ನ ಮೊದಲ ಸಿನಿಮಾ ಆಗಿರುವುದರಿಂದ, ನನ್ನ ಸಂಪೂರ್ಣ ಗಮನ “ಸಲಗ’ದ ಕಡೆಗಿದೆ. ಜೊತೆಗೆ ಮನೆಯಲ್ಲೂ ಹಬ್ಬಕ್ಕೆ ತಯಾರಿ ಮಾಡಿಕೊಂಡಿದ್ದೇನೆ. ಎಲ್ಲರೂ ಖುಷಿಯಿಂದ ದಸರಾ ಆಚರಿಸಿ ಜೊತೆಗೆ ನಮ್ಮ ಸಿನಿಮಾ ನೋಡಿ ಹರಸಿ. ಈ ದಸರಾ ಎಲ್ಲರಿಗೂ ಖುಷಿ, ಸಂತೋಷ ತರಲಿ ಎಂದು ಕೇಳಿಕೊಳ್ಳುತ್ತೇನೆ.

-ಸಂಜನಾ ಆನಂದ್‌, ನಟಿ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.