ನಾಯಕಿಗಿಂತ ಉತ್ತಮ ನಟಿಯಾಗುವ ಹಂಬಲ: ಚಾರ್ಲಿಯ ಗೆಲುವು ಸಂಗೀತಾ ನಗು


Team Udayavani, Jul 31, 2022, 3:17 PM IST

sangeetha sringeri

“777 ಚಾರ್ಲಿ’ ಸಿನಿರಸಿಕರು, ಪ್ರಾಣಿಪ್ರಿಯರು ಕೈ ಬೀಸಿ ಅಪ್ಪಿಕೊಂಡ ಸಿನಿಮಾ. ಈ ಚಿತ್ರದ ಮೂಲಕ ಕನ್ನಡ ಸಿನಿ ಪ್ರೇಮಿಗಳಿಗೆ ದೊಡ್ಡ ಮಟ್ಟದಲ್ಲಿ ಪರಿಚಯವಾದ ಭರವಸೆಯ ನಟಿ ಸಂಗೀತಾ ಶೃಂಗೇರಿ. ಚಾರ್ಲಿ ಗೆಲುವಿನ ಖುಷಿಯಲ್ಲಿರುವ, ಮುಂದಿನ ದಿನಗಳಲ್ಲಿ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗುತ್ತಿರುವ ಸಂಗೀತಾ ಜೊತೆಗಿನ ಚಿಟ್‌ಚಾಟ್‌ ಇಲ್ಲಿದೆ..

ಚಾರ್ಲಿ’ ನಂತರ ಹೇಗಿದೆ ಲೈಫ್?

– ತುಂಬಾ ಚೆನ್ನಾಗಿದೆ. ಖುಷಿಯಾಗಿದ್ದೇನೆ. ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದೆ. ನನ್ನ ಪಾತ್ರದ ಬಗ್ಗೆಯೂ ಮೆಚ್ಚುಗೆ ಸಿಕ್ಕಿತು. ಒಂದು ಉತ್ತಮ ಕಂಟೆಂಟ್‌ ಇರುವ ಚಿತ್ರದಲ್ಲಿ ನಟಿಸುವುದರ ಜೊತೆಗೆ ಪಾತ್ರಕ್ಕೆ ಜೀವ ತುಂಬುವ ನಟನೆ ಮಾಡಿದ್ದೀರಿ ಎಂಬ ಮಾತುಗಳು ಕೇಳಿಬರುತ್ತಿರೋದು ಖುಷಿಕೊಟ್ಟಿದೆ.

ಚಾರ್ಲಿಗೆ ಆಯ್ಕೆಯಾದ ಬಗ್ಗೆ ಹೇಳಿ?

ಚಾರ್ಲಿ ಅಡಿಷನ್‌ಗೆ ನನಗೆ ಕರೆ ಬಂದಾಗ ಹೋಗಿ ಆಡಿಷನ್ಸ್‌ನಲ್ಲಿ ಒಂದೇ ಟೇಕ್‌ ಗೆ, ಕೊಟ್ಟ ಡೈಲಾಗ್‌ಅನ್ನು ಹೇಳಿದೆ. ಪಾತ್ರದ ಕುರಿತು ನಿರ್ದೇಶಕರು ವಿವರಿಸಿದ ರೀತಿ ಬಹಳ ಇಷ್ಟವಾಗಿ, ತಾನು ಈ ಚಿತ್ರದಲ್ಲಿ ನಟನೆ ಮಾಡಲೇಬೇಕು ಎಂದುಕೊಂಡೆ. ಆದರೆ ಚಿತ್ರದ ಆಡಿಷನ್ಸ್‌ ನೀಡಿ ಆರು ತಿಂಗಳು ಕಳೆದರೂ, ಒಂದು ಕರೆ ಕೂಡಾ ಬರದಿದ್ದಾಗ ತುಂಬಾ ಚಿಂತೆಗಿಡಾಗಿದ್ದೆ. ಕೊನೆಗೆ ಅವಕಾಶ ಸಿಕ್ಕಾಗ ಒಂದು ಷರತ್ತು ಇತ್ತು. ಎರಡು ವರ್ಷ ಬೇರೆಯಾವ ಚಿತ್ರಗಳಲ್ಲೂ ನಟಿಸಬಾರದು ಎಂದು. ಚಾರ್ಲಿ ಬರುವ ಮೊದಲೇ ಮತ್ತೂಂದು ಚಿತ್ರದ ಶೂಟಿಂಗ್‌ ಅಲ್ಲಿ ಇದ್ದ ನಾನು ಎಲ್ಲವನ್ನು ಸಮದೂಗಿಸಿ ಎರಡು ಚಿತ್ರ ಮುಗಿಸಿದೆ. ಕೋವಿಡ್‌ ಕಾರಣದಿಂದ ನಾಲ್ಕು ವರ್ಷ ತೆಗೆದುಕೊಂಡಿತ್ತು ಚಾರ್ಲಿ.

ಪ್ರಚಾರದ ಸಮಯದಲ್ಲಿ ಹೊರ ರಾಜ್ಯಗಳಲ್ಲಿ ಸುತ್ತಿದ್ದೀರಿ. ಹೇಗಿತ್ತು ಅನುಭವ?

– ಚಿತ್ರದ ಪ್ರಚಾರಕ್ಕಾಗಿ ಬೇರೆ ಬೇರೆ ರಾಜ್ಯಗಳಿಗೆ ತೆರಳಿದ್ದೆವು. ನಾನು ಚಿತ್ರರಂಗಕ್ಕೆ ಹೊಸಬಳು. ನನ್ನ ಬಗ್ಗೆ ಅವರಿಗೆ ಅಷ್ಟು ಗೊತ್ತಿರಲ್ಲಾ ಅಂತಾ ಅಂದುಕೊಂಡಿದ್ದೇ, ಆದರೆ ಪತ್ರಕರ್ತರ ಕೈಯಲ್ಲಿ ನನ್ನ ಜಾತಕವೇ ಇತ್ತು! ನನ್ನ ಹಿನ್ನೆಲೆ, ಅಪ್ಪ -ಅಮ್ಮ, ನಟನೆ ಬಗ್ಗೆ ಎಲ್ಲವೂ ತಿಳಿದ್ದರು. ಇದು ತುಂಬಾ ಆಶ್ಚರ್ಯ ಅನಿಸಿತ್ತು. ಹೊರ ರಾಜ್ಯಗಳಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುವುದರ ಜೊತೆಗೆ ಜನರಿಗೆ ಪರಿಚಯವಾಗಿದ್ದು ಸಂತಸ ತಂದಿದೆ.

ಸಾಲು ಸಾಲು ಚಿತ್ರಗಳು ತೆರೆಗೆ ರೆಡಿಯಾಗಿವೆಯಲ್ಲ?

– ಹೌದು, “ಚಾರ್ಲಿ ನಂತರ ಮೂರು ಚಿತ್ರಗಳು ರಿಲೀಸ್‌ಗೆ ರೆಡಿಯಾಗಿದೆ. ಈ ಮೊದಲು ನಟಿಸಿದ್ದ ಎಸ್‌ ಮಹೇಂದ್ರ ಅವರ “ಪಂಪ’ ಚಿತ್ರ ಆಗಸ್ಟ್‌ನಲ್ಲಿ ರಿಲೀಸ್‌ ಆಗಲಿದೆ. ಹಾಗೆ “ಲಕ್ಕಿ ಮ್ಯಾನ್‌’ ಕೂಡಾ ಆಗಸ್ಟ್‌ ನಲ್ಲಿ ತೆರೆಗೆ ಬರಲಿದ್ದು, “ಮಾರಿಗೋಲ್ಡ್‌ ‘ ಕೂಡಾ ಆಗಸ್ಟ್‌ ತಿಂಗಳ ಕೊನೆಗೆ ತೆರೆಗೆ ಬರುವ ನಿರೀಕ್ಷೆ ಇದೆ.

ಉತ್ತಮ ನಟಿಯಾಗುವ ಹಂಬಲ

ಸಾಮಾನ್ಯವಾಗಿ ನಟಿಯರಿಗೆ ಭಿನ್ನ ಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುವ ಆಸೆ. ಆದರೆ ಸಂಗೀತಾ, “ಸದ್ಯ ನಾನು ಮಾಡಿರುವ ಎಲ್ಲಾ ಚಿತ್ರಗಳಲ್ಲೂ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದು, ಗೆಟಪ್‌ಗಿಂತ ಪಾತ್ರ ಮುಖ್ಯ’ ಅನ್ನುತ್ತಾರೆ. ಒಂದು ಚಿತ್ರದಲ್ಲಿ ಕನ್ನಡಪರ ಕಾಲೇಜು ಹುಡುಗಿಯಾಗಿ ನಟಿಸಿದ್ದು, ಮತ್ತೂಂದರಲ್ಲಿ ಪಕ್ಕಾ ಫ್ಯಾಮಿಲಿ ಹುಡುಗಿಯಾಗಿ ಅಭಿನಯಿಸಿದ್ದಾರೆ. ಹೀಗೆ ಭಿನ್ನ ಪಾತ್ರಗಳಲ್ಲಿ ಗುರುತಿಸಿಕೊಳ್ಳಲು ಇಷ್ಟ ಪಡುವ ಸಂಗೀತಾ, ಚಿತ್ರರಂಗದಲ್ಲಿ ಕೇವಲ ನಾಯಕಿಯಾಗಿ ಅಲ್ಲ ಉತ್ತಮ ನಟಿಯಾಗಿ ಬೆಳೆಯಬೇಕು ಎಂಬ ಆಸೆ ಹೊಂದಿದ್ದಾರೆ.

ಸಾಕು ನಾಯಿ ಸತ್ತಾಗ ಡಿಪ್ರಶನ್‌ಗೆ ಹೋಗಿದ್ದೆ…

ಚಾರ್ಲಿ ಚಿತ್ರದಲ್ಲಿ ಎನಿಮಲ್‌ ವೆಲ್‌ಫೇರ್‌ ಅಧಿಕಾರಿಯಾಗಿ ಪಾತ್ರ ನಿರ್ವಹಿಸಿರುವ ಸಂಗೀತಾ, ನಿಜ ಜೀವನದಲ್ಲೂ ಪ್ರಾಣಿ ಪ್ರೇಮಿಯಂತೆ. ಶಾಲಾ ದಿನಗಳಿಂದಲೂ ಬೀದಿಯಲ್ಲಿ ಸಿಕ್ಕ ನಾಯಿಗಳನ್ನು ತಂದು, ಕದ್ದು ಮುಚ್ಚಿ ಸಾಕುತ್ತಿದ್ದರಂತೆ. ಇತ್ತೀಚೆಗೂ ಬೀದಿ ನಾಯಿ ಸಾಕಿದ್ದರು. ಎರಡು ಬಾರಿ  ಅವರ ಸಾಕು ನಾಯಿಗಳು ಖಾಯಿಲೆಯಿಂದ ಮೃತಪಟ್ಟಿತ್ತು. ಸಾಕು ನಾಯಿ ಸಾವಿನ ನೋವಿನಲ್ಲಿ ಡಿಪ್ರಶನ್‌ಗೆ ಓಳಗಾಗಿದ್ದರಂತೆ. ಸಂಗೀತಾ ಪ್ರಾಣಿಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದಾರೆ.

ಟಾಪ್ ನ್ಯೂಸ್

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

ಎ. 20ರಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ?

Lok Sabha Election; ಎ. 20ರಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ?

Daily Horoscope

Daily Horoscope; ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದಲ್ಲಿ ಶುಭವಾಗುವ ಲಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

marigold

Marigold; ನಿರ್ಮಾಪಕರ ಮೊಗದಲ್ಲಿ ಮಾರಿಗೋಲ್ಡ್‌ ನಗು

Sapthami Gowda

Sapthami Gowda: ‘ಕಾಂತಾರ-1’ ಚಿತ್ರದಲ್ಲಿ ನಟಿಸುತ್ತಾರಾ ಸಪ್ತಮಿ ; ನಟಿ ಹೇಳಿದ್ದೇನು?

Film Producer: ಸ್ಯಾಂಡಲ್‌ ವುಡ್‌ ನಿರ್ಮಾಪಕ ಸೌಂದರ್ಯ ಜಗದೀಶ್‌ ಆತ್ಮಹತ್ಯೆ

Film Producer: ಸ್ಯಾಂಡಲ್‌ ವುಡ್‌ ನಿರ್ಮಾಪಕ ಸೌಂದರ್ಯ ಜಗದೀಶ್‌ ಆತ್ಮಹತ್ಯೆ

eltu mutta kannada movie

Eltu Mutta Movie; ಸಾವಿನ ಮನೆಯಲ್ಲಿ ಡೋಲು ಬಡಿಯುವವರ ಕಥೆ

karimani malika kannada movie

Kannada Cinema; ‘ಕರಿಮಣಿ ಮಾಲೀಕ’ನ ನಂಬಿ ಬಂದವರು

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.