ಭಜರಂಗಿಗೆ ಬಲ ತುಂಬಿದ ಶಿವಣ್ಣ
Team Udayavani, Nov 15, 2021, 9:50 AM IST
ಶಿವರಾಜ್ಕುಮಾರ್ ನಟನೆಯ “ಭಜರಂಗಿ-2′ ಚಿತ್ರ ಬಿಡುಗಡೆಯಾಗಿ, ಮೆಚ್ಚುಗೆಯ ಜೊತೆ ಉತ್ತಮ ಪ್ರದರ್ಶನ ಕಾಣುತ್ತಿರುವಾಗಲೇ ಪುನೀತ್ ನಿಧನದ ಸುದ್ದಿ ಇಡೀ ಕರ್ನಾಟಕವನ್ನು ಕಂಗೆಡಿಸಿತ್ತು. ಸಹಜವಾಗಿಯೇ ಚಿತ್ರಮಂದಿದಿಂದಲೂ ಪ್ರೇಕ್ಷಕರು ದೂರವೇ ಉಳಿದಿದ್ದರು. ಆದರೆ, ಶಿವಣ್ಣ ಮಾತ್ರ ತನ್ನನ್ನು ನಂಬಿದ ನಿರ್ಮಾಪಕರ ಕೈ ಬಿಟ್ಟಿಲ್ಲ.
ಕೋಟಿಗಟ್ಟಲೇ ಬಂಡವಾಳ ಹಾಕಿದ ನಿರ್ಮಾಪಕನಿಗೆ ಸಾಥ್ ನೀಡುವ ಉದ್ದೇಶದಿಂದ ಶಿವಣ್ಣ ಭಾನುವಾರ ಅನುಪಮ ಚಿತ್ರಮಂದಿರದಲ್ಲಿ ಅಭಿಮಾನಿ ಗಳ ಜೊತೆ “ಭಜರಂಗಿ-2′ ಸಿನಿಮಾ ವೀಕ್ಷಿಸಿದರು. ಸಿನಿಮಾ ವೀಕ್ಷಣೆಗೂ ಮೊದಲು ತಾವು ಚಿತ್ರಮಂದಿರಕ್ಕೆ ಬರುವ ಕುರಿತು ವಿಡಿಯೋ ಬಿಟ್ಟಿದ್ದರಿಂದ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಚಿತ್ರಮಂದಿರಕ್ಕೆ ಆಗಮಿಸಿದ್ದರು.
ಇದನ್ನೂ ಓದಿ:ತಂದೆ ತುಂಬಾ ಸ್ಟ್ರಿಕ್ಟ್ ಅವರನ್ನು ಕರೆದುಕೊಂಡು ಹೋಗಿ : ದ್ರಾವಿಡ್ ಮಗನಿಂದ ಗಂಗೂಲಿಗೆ ದೂರು!
ಚಿತ್ರಮಂದಿರಕ್ಕೆ ಬಂದ ಶಿವಣ್ಣ, ಪುನೀತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಬಳಿಕ ಅಲ್ಲೇ ಆಯೋಜಿಸಿದ್ದ ಅನ್ನ ಸಂತರ್ಪಣೆಯಲ್ಲಿ ಭಾಗಿಯಾಗಿ, ಅಭಿಮಾನಿಗಳಿಗೆ ಬಡಿಸಿದರು. ಈ ಮೂಲಕ “ಭಜರಂಗಿ-2′ ಚಿತ್ರಕ್ಕೆ ಬಲ ತುಂಬಿದ್ದಾರೆ. ಈ ಚಿತ್ರವನ್ನು ಎ.ಹರ್ಷ ನಿರ್ದೇಶನ ಮಾಡಿದ್ದು, ಜಯಣ್ಣ ನಿರ್ಮಾಣ ಮಾಡಿದ್ದಾರೆ