ಕನ್ನಡದ ಮತ್ತೊಂದು ಗೀತೆಗೆ ಧ್ವನಿಯಾದ ಸಿದ್ ಶ್ರೀರಾಮ್
Team Udayavani, Feb 2, 2023, 4:31 PM IST
ಇ.ವಿ. ಗಣೇಶ್ ಬಾಬು ನಿರ್ದೇಶನದ “ಮಂಚ’ ಚಿತ್ರದ “ದೇಗುಲದಿ…’ ಎಂಬ ಲಿರಿಕಲ್ ಹಾಡು ಇದೀಗ ಯೂ-ಟ್ಯೂಬ್ನಲ್ಲಿ ಬಿಡುಗಡೆಯಾಗಿದೆ. “ಜಗವೇ ನೀನು’ ಖ್ಯಾತಿಯ ಸಿದ್ ಶ್ರೀರಾಮ್ ಈ ಹಾಡಿಗೆ ಧ್ವನಿಯಾಗಿದ್ದು, “ಪುಷ್ಪ’ ಚಿತ್ರದ ಜನಪ್ರಿಯ ಗೀತೆ “ಶ್ರೀವಳ್ಳಿ’ ಹಾಡಿಗೆ ಕನ್ನಡ ಸಾಹಿತ್ಯ ಬರೆದಿದ್ದ ವರದರಾಜ ಚಿಕ್ಕಬಳ್ಳಾಪುರ, ಈ ಹಾಡಿಗೂ ಸಾಹಿತ್ಯ ರಚಿಸಿದ್ದಾರೆ.
“ಮಂಚ’ ಎಂಬ ಹೆಸರೇ ಹೇಳುವಂತೆ, ಈ ಚಿತ್ರವು ಒಂದು ಪ್ರತಿಷ್ಠಿತ ಕುಟುಂಬದ ಮೂರು ತಲೆಮಾರಿನವರು ಉಪಯೋಗಿಸಿದ ಒಂದು ಮಂಚದ ಸುತ್ತ ಸಾಗುತ್ತದೆ. ಜನ ಹೇಗೆ ತಮ್ಮ ಸಂಪ್ರದಾಯ ಮತ್ತು ಗುರುತುಗಳನ್ನು ಕ್ರಮೇಣ ಮರೆಯುತ್ತಿದ್ದಾರೆ ಎಂದು ಹೇಳುವ ಪ್ರಯತ್ನ ಮಾಡಿರುವ ಈ ಚಿತ್ರವು ಈಗಾಗಲೇ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಗೊಂಡು, ಕೆಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
“ಮಂಚ’ ಒಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು ತಮಿಳಿನಲ್ಲಿ ನಿರ್ಮಾಣಗೊಂಡು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಿಗೆ ಡಬ್ ಆಗಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಸದ್ಯ ಬಿಡುಗಡೆಯಾಗಿರುವ ಈ ಹಾಡನ್ನು ನಾಲ್ಕೂ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ.
ಈ ಹಿಂದೆ “ಅಮೃತವರ್ಷಿಣಿ’ ಚಿತ್ರದ ಹಾಡುಗಳನ್ನು ಸಂಯೋಜಿಸಿದ್ದ ಸಂಗೀತ ನಿರ್ದೇಶಕ ದೇವ ಅವರ ಪುತ್ರ ಶ್ರೀಕಾಂತ್ ದೇವ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಇ.ವಿ. ಗಣೇಶ್ ಬಾಬು ಈ ಚಿತ್ರವನ್ನು ನಿರ್ಮಿಸಿ-ನಿರ್ದೇಶಿಸುವುದರ ಜತೆಗೆ ನಾಯಕನಾಗಿಯೂ ಕಾಣಿಸಿಕೊಂದ್ದಾರೆ.
ನಾಯಕಿಯಾಗಿ ಸೃಷ್ಟಿ ದಂಗೆ ಅಭಿನಯಿಸಿದ್ದು, ಮಿಕ್ಕಂತೆ ವಿದಾರ್ಥ್ (ಅತಿಥಿ ಪಾತ್ರ), ಮಾಸ್ಟರ್ ನಿಧೀಶ್, ಗೀತಾ ಕೈಲಾಸಂ, ಇಂದಿರಾ ಸೌಂರ್ದ ರಾಜನ್, ಸಂಪತ್ ರಾಮ್, ಸಮ್ಮಾಲರ್ ಅಣ್ಣಂ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ