ಅಖಾಡಕ್ಕೆ ಸೌತ್‌ ಇಂಡಿಯನ್‌ ಹೀರೋ


Team Udayavani, Feb 8, 2023, 2:27 PM IST

ಅಖಾಡಕ್ಕೆ ಸೌತ್‌ ಇಂಡಿಯನ್‌ ಹೀರೋ

ಕೆಲವು ಸಿನಿಮಾಗಳ ಫ‌ಸ್ಟ್‌ಲುಕ್‌, ಟ್ರೇಲರ್‌ ನೋಡಿದಾಗ ಈ ಸಿನಿಮಾದೊಳಗೆ ಏನೋ ಇದೆ ಎಂಬ ಭರವಸೆ ಬರುತ್ತದೆ. ಸದ್ಯ ಆ ತರಹದ ಒಂದು ಭರವಸೆ ಮೂಡಿಸಿರುವ ಸಿನಿಮಾ “ಸೌತ್‌ ಇಂಡಿಯನ್‌ ಹೀರೋ’.

ಈ ಹಿಂದೆ “ಫ‌ಸ್ಟ್‌ ರ್‍ಯಾಂಕ್‌ ರಾಜು’, “ರಾಜು ಕನ್ನಡ ಮೀಡಿಯಂ’ನಂತಹ ಹಿಟ್‌ ಸಿನಿಮಾಗಳನ್ನು ನಿರ್ದೇಶಿಸಿರುವ ನರೇಶ್‌ ಈ ಚಿತ್ರದ ನಿರ್ದೇಶಕರು.  ಈಗ ಸದ್ದಿಲ್ಲದೇ “ಸೌತ್‌ಇಂಡಿಯನ್‌ ಹೀರೋ’ ಎಂಬ ಸಿನಿಮಾ ಮಾಡಿದ್ದು, ಚಿತ್ರ ಫೆ.24ರಂದು ತೆರೆಕಾಣುತ್ತಿದೆ.

ಇತ್ತೀಚೆಗೆ ಚಿತ್ರದ ಟ್ರೇಲರ್‌ ಅನ್ನು ನಟ ಉಪೇಂದ್ರ ಬಿಡುಗಡೆ ಮಾಡಿ, ಸಿನಿಮಾವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

“ಐದೈದು ವರ್ಷ ಸಿನಿಮಾ ಮಾಡಿ ಒಂದು ಹಿಟ್‌ ಕೊಡೋದು ದೊಡ್ಡ ವಿಚಾರವಲ್ಲ. ಬದಲಿಗೆ ಗ್ಯಾಪಲ್ಲಿ ಬಂದು ಹೊಡ್ಕೊಂಡು ಹೋಗ್ತಾರಲ್ವಾ ಅದು ಕೆಪಾಸಿಟಿ. ನಿರ್ದೇಶಕ ನರೇಶ್‌ ಆ ತರಹದ ಟ್ಯಾಲೆಂಟ್‌ ಇರುವ ವ್ಯಕ್ತಿ. ನನ್ನ ಸಿನಿಮಾಗಳ ಸ್ಕ್ರಿಪ್ಟ್ ಡಿಸ್ಕಶನ್‌ ಇವರ ಜೊತೆ ಮಾಡುತ್ತೇನೆ. ಚೆನ್ನಾಗಿದ್ದರೂ, ಇಲ್ಲದಿದ್ದರೂ ನೇರವಾಗಿ ಹೇಳುತ್ತಾರೆ. ನಾನು “ಸೌತ್‌ ಇಂಡಿಯನ್‌ ಹೀರೋ’ ಸಿನಿಮಾ ನೋಡಿದ್ದೇನೆ. ಕೆಲವು ಸಿನಿಮಾಗಳು ಇದು ಶೂರ್‌ ಶಾಟ್‌ ಸಿನಿಮಾ ಎಂಬ ಭಾವನೆ ಮೂಡಿಸುತ್ತವೆ. ಇದು ಕೂಡಾ ಆ ತರಹದ ಒಂದು ಸಿನಿಮಾ. ಮೊದಲ ಚಿತ್ರದಲ್ಲೇ ನಾಯಕನಿಗೆ ಎಲ್ಲಾ ರೀತಿಯ ಪಾತ್ರ ಸಿಕ್ಕಿದೆ. ಸಿನಿಮಾ ನೋಡಿದಾಗ ನಾನೇ ಈ ತರಹದ ಪಾತ್ರಗಳನ್ನು ಮಾಡಿಲ್ವಲ್ಲ ಎಂಬ ಭಾವನೆಬಂತು. ಈ ಸಿನಿಮಾವನ್ನು ಬೇರೆ ಭಾಷೆಗಳಿಗೂ ಡಬ್‌ ಮಾಡಿ ರಿಲೀಸ್‌ ಮಾಡಿ. ಈಗ ಸಿನಿಮಾದೊಳಗೆ ಹೀರೋ ಸ್ಟಾರ್‌ ಆಗಿದ್ದಾರೆ. ನಾಳೆ ಸಿನಿಮಾ ಆದ ನಂತರ ಜನ ನಿಮ್ಮನ್ನು ಸ್ಟಾರ್‌ ಮಾಡುತ್ತಾರೆ’ ಎಂದರು.

ಈ ಚಿತ್ರವನ್ನು “ರಿಯನ್ಷಿ ಫಿಲಂಸ್‌’ನಡಿ ನಿರ್ಮಾಣ ಮಾಡಲಾಗಿದೆ. ನರೇಶ್‌ ಅವರೇ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

“ಸೌತ್‌ಇಂಡಿಯನ್‌ ಹೀರೋ’ ಸಿನಿಮಾ ಬಗ್ಗೆಮಾತನಾಡುವ ನಿರ್ದೇಶಕ ನರೇಶ್‌, “ಇದು ಲಾಕ್‌ಡೌನ್‌ನಲ್ಲಿ ಆರಂಭವಾದ ಕಥೆ. ಒಂದು ಗಟ್ಟಿ ಕಂಟೆಂಟ್‌ ಇರುವ ಸಿನಿಮಾ ಮಾಡಬೇಕೆಂದು ಯೋಚಿಸಿದ ಹುಟ್ಟಿದ ಕಥೆಯೇ “ಸೌತ್‌ ಇಂಡಿಯನ್‌ ಹೀರೋ’. ಸಿನಿಮಾದ ಚಿತ್ರೀಕರಣ ಕೂಡಾ ಲಾಕ್‌ಡೌನ್‌ ಸಮಯದಲ್ಲೇ ಮುಗಿಸಿದೆವು’ ಎಂದು ಸಿನಿಮಾ ಬಗ್ಗೆ ವಿವರ ನೀಡುತ್ತಾರೆ.

“ಸೌತ್‌ ಇಂಡಿಯನ್‌ ಹೀರೋ’ ಸಿನಿಮಾದ ಪ್ರಮುಖ ಹೈಲೈಟ್‌ ಎಂದರೆ ಲಾಜಿಕ್‌ ಲಕ್ಷ್ಮಣ್‌ ರಾವ್‌ ಪಾತ್ರ. ಎಲ್ಲದರಲ್ಲೂ ಲಾಜಿಕ್‌ ಹುಡುಕುವ ಲಕ್ಷ್ಮಣ್‌ ರಾವ್‌ ಎಂಬ ವ್ಯಕ್ತಿ ಸಿನಿಮಾಕ್ಕೆ ಎಂಟ್ರಿಕೊಟ್ಟರೆ ಏನಾಗುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ.

ಈ ಬಗ್ಗೆ ಮಾತನಾಡುವ ನರೇಶ್‌, “ಮೊದಲು ಹುಟ್ಟಿದ ಪಾತ್ರವೇ ಲಾಜಿಕ್‌ ಲಕ್ಷ್ಮಣ್‌ ರಾವ್‌. ಸಾಮಾನ್ಯವಾಗಿ ಸಿನಿಮಾದವರು ಲಾಜಿಕ್‌ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ.ಅದರಲ್ಲೂ ಕಮರ್ಷಿಯಲ್‌ ಸಿನಿಮಾದಲ್ಲಿ ಹೀರೋಏಳೆಂಟು ಜನರಿಗೆ ಹೊಡೆಯುವುದು ಸೇರಿದಂತೆಅನೇಕ ಸಾಹಸಗಳನ್ನು ಮಾಡುತ್ತಾರೆ. ಇವೆಲ್ಲವನ್ನುನಾವು ಲಾಜಿಕ್‌ ದೃಷ್ಟಿಯಿಂದ ನೋಡಲಾಗುವುದಿಲ್ಲ. ಆದರೆ, ಲಾಜಿಕ್‌ ಲಕ್ಷ್ಮಣ್‌ ರಾವ್‌ ಪಾತ್ರ ಎಲ್ಲದರಲ್ಲೂ ಲಾಜಿಕ್‌ ಹುಡುಕುವ ವ್ಯಕ್ತಿತ್ವ ಹೊಂದಿರುತ್ತದೆ. ಇಂತಹ ವ್ಯಕ್ತಿ ಸಿನಿಮಾಕ್ಕೆಬರುತ್ತಾನೆ, ಸ್ಟಾರ್‌ ಆಗುತ್ತಾನೆ, ಸೌತ್‌ಇಂಡಿಯನ್‌ ಸ್ಟಾರ್‌ ಆಗಿ ಮೆರೆಯುತ್ತಾ ನೆ. ಆತನ ಈ ಹಾದಿ ಹೇಗಿರುತ್ತದೆ. ಲಾಜಿಕ್‌ ಹುಡುಕುವ ಆತ ಸಿನಿಮಾದಲ್ಲಿಹೇಗೆ ವರ್ತಿಸುತ್ತಾನೆ ಎಂಬ ಅಂಶ ಸೇರಿದಂತೆ ಅನೇಕ ವಿಚಾರಗಳನ್ನು ಈಸಿನಿಮಾದಲ್ಲಿ ಹೇಳಿದ್ದೇವೆ’ ಎನ್ನುವುದು ನರೇಶ್‌ ಮಾತು.

ಚಿತ್ರದಲ್ಲಿ ಸಾರ್ಥಕ್‌ ಎನ್ನುವವರು ಹೀರೋ ಆಗಿ ನಟಿಸಿದ್ದಾರೆ. ನರೇಶ್‌ ಅವರಿಗೆ ಯಾವುದೇ ಇಮೇಜ್‌ ಇಲ್ಲದ ಹೊಸ ಮುಖ ಬೇಕಾದ ಕಾರಣ ಸಾರ್ಥಕ್‌ ಅವರನ್ನು ಆಯ್ಕೆ ಮಾಡಿದ್ದಾರೆ. ಉಳಿದಂತೆ ಊರ್ವಶಿ, ಕಾಶಿಮಾ ನಾಯಕಿಯರು. ಚಿತ್ರದಲ್ಲಿ ಯೋಗರಾಜ್‌ ಭಟ್‌ ನಟಿಸಿದ್ದಾರೆ. ಇಡೀ ತಂಡ ಸಿನಿಮಾದ ಬಗ್ಗೆ ಮಾತನಾಡಿತು.

ಟಾಪ್ ನ್ಯೂಸ್

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಇದು ಮರ್ಯಾದೆ ಪ್ರಶ್ನೆ!

Sandalwood: ಇದು ಮರ್ಯಾದೆ ಪ್ರಶ್ನೆ!

15

Pawan Wadeyar: ವೆಂಕ್ಯಾನ ಹಿಂದೆ ಸಾಗರ್‌-ಪವನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.