ಭಜರಂಗಿ ಮಾಂತ್ರಿಕನ ತೆಲುಗು ಪಯಣ


Team Udayavani, Jul 26, 2018, 11:16 AM IST

madhu-guruswamy.jpg

ತನ್ನ 26 ನೇ ವಯಸ್ಸಲ್ಲಿ ಭಯಹುಟ್ಟಿಸೋ ಮಾಂತ್ರಿಕ! 29 ನೇ ವಯಸ್ಸಲ್ಲಿ ಹಠಮಾರಿ ತಂದೆ! ಇದೇನು, ಮಾಂತ್ರಿಕ, ಹಠಮಾರಿ ತಂದೆ ಎಂಬ ಪ್ರಶ್ನೆ ಎದುರಾದರೆ, ಆ ಪ್ರಶ್ನೆಗೆ ಉತ್ತರ ನಟ ಮಧುಗುರುಸ್ವಾಮಿ. ಹೌದು, ಇದು ಅವರ ವಿಭಿನ್ನ ಪಾತ್ರಗಳ ವಿವರ. ಮಧುಗುರುಸ್ವಾಮಿ ಅಂದಾಕ್ಷಣ,  ಎಲ್ಲರಿಗೂ ಗೊತ್ತಾಗಲಿಕ್ಕಿಲ್ಲ.

ಆದರೆ, “ಭಜರಂಗಿ’ಯ ಮಾಂತ್ರಿಕ ಮತ್ತು “ವಜ್ರಕಾಯ’ ಚಿತ್ರದ ಹಠಮಾರಿ ತಂದೆ ಪಾತ್ರ ನೆನಪಿಸಿಕೊಂಡವರಿಗೆ ಈ ಮಧುಗುರುಸ್ವಾಮಿ ಅವರು ಥಟ್ಟನೆ ನೆನಪಾಗುತ್ತಾರೆ. ಅದೇ ಮಧುಗುರುಸ್ವಾಮಿ ಇದೀಗ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟು, ಸದ್ದಿಲ್ಲದೆಯೇ ಅಲ್ಲೊಂದು ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ ಬಂದಿದ್ದಾರೆ.

ಈ ವಾರ ಆ ಚಿತ್ರ ಬಿಡುಗಡೆಯಾಗುತ್ತಿದೆ. ಅಂದಹಾಗೆ, ಆ ಚಿತ್ರದ ಹೆಸರು “ಸಾಕ್ಷ್ಯಂ’. ಜಗಪತಿಬಾಬು ಅವರ ಕಾಂಬಿನೇಷನ್‌ನಲ್ಲಿ ನಟಿಸಿರುವ ಮಧುಗುರುಸ್ವಾಮಿ ಅವರಿಗೆ ಆ ಚಿತ್ರ ಹೊಸ ಇಮೇಜ್‌ ತಂದುಕೊಡಲಿದೆ ಎಂಬ ಅದಮ್ಯ ವಿಶ್ವಾಸ. “ಭಜರಂಗಿ’ ಚಿತ್ರದ ಪಾತ್ರ ನೋಡಿದ ತೆಲುಗು ನಿರ್ದೇಶಕ ಶ್ರೀವಾಸ್‌, “ಸಾಕ್ಷ್ಯಂ’ ಚಿತ್ರದಲ್ಲಿ ವಿಶೇಷ ಪಾತ್ರ ಕೊಟ್ಟಿದ್ದಾರೆ.

ಬೆಲಂಕೊಂಡ ಶ್ರೀನಿವಾಸ್‌, ಪುಜಾ ಹೆಗಡೆ, ಸುಮಾರು 40 ದಿನಗಳ ಕಾಲ ಹೈದರಾಬಾದ್‌ ಸುತ್ತಮುತ್ತ ಚಿತ್ರೀಕರಣದಲ್ಲಿ ಪಾಲ್ಗೊಂಡ ಮಧು ಗುರುಸ್ವಾಮಿ, ತಮ್ಮ ಪಾತ್ರಕ್ಕೆ ತಾವೇ ಡಬ್‌ ಮಾಡಿದ್ದಾರೆ. ಹೀಗಾಗಿ ಮಧುಗುರುಸ್ವಾಮಿ ಅವರ ಮೊದಲ ತೆಲುಗು ಚಿತ್ರ ಇದಾಗಿರುವುದರಿಂದ “ಸಾಕ್ಷ್ಯಂ’ ಮೇಲೆ ಸಂಪೂರ್ಣ ವಿಶ್ವಾಸವಿದೆ.

ಹಾಗೆ ನೋಡಿದರೆ, ಕನ್ನಡದಲ್ಲಿ ಈಗ ಖಳನಟರ ಸಂಖ್ಯೆ ಹೆಚ್ಚುತ್ತಲೇ ಇದೆ. ಅದರಲ್ಲೂ ತರಹೇವಾರಿ ಪಾತ್ರಗಳ ಮೂಲಕ ಗಮನಸೆಳೆಯುತ್ತಿರುವ ಬೆರಳೆಣಿಕೆ ಖಳನಟರ ಪೈಕಿ ಮಧುಗುರುಸ್ವಾಮಿ ಮೊದಲ ಸಾಲಲ್ಲಿ ಕಾಣ ಸಿಗುತ್ತಾರೆ. ಟಿ.ನರಸಿಪುರದ ಮಧು ಗುರುಸ್ವಾಮಿ, ಶಾಲೆ ದಿನಗಳಲ್ಲೇ ಸಿನಿಮಾ ಹುಚ್ಚು ಅಂಟಿಸಿಕೊಂಡವರು.

ಸಿನಿಮಾ ನೋಡುವ ಮೂಲಕ, ಮುಂದೊಂದು ದಿನ ನಾನೂ ನಟಿಸಬೇಕು ಎಂಬ ಆಸೆ ಇಟ್ಟುಕೊಮಡಿದ್ದರು. ಕಾಲೇಜು ಮುಗಿಸಿದ ಬಳಿಕ 2007 ರಲ್ಲಿ ಬೆಂಗಳೂರಿಗೆ ಬಂದ ಮಧುಗುರುಸ್ವಾಮಿ, ಹಿರಿಯ ರಂಗಭೂಮಿ ಕಲಾವಿದರಾದ ಎ.ಎಸ್‌.ಮೂರ್ತಿ ಅವರ ಅಭಿನಯ ತರಂಗದಲ್ಲಿ ನಟನೆ ತರಬೇತಿ ಪಡೆದು, “ಡೆಡ್ಲಿ ಸೋಮ’ ಚಿತ್ರಕ್ಕೆ ಸಹ ನಿರ್ದೇಶಕರಾಗಿಯೂ ಕೆಲಸ ಮಾಡಿದರು.

ನಂತರ “ಡೆಡ್ಲಿ 2′ ಚಿತ್ರದ ಮೂಲಕ ನಟರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದ ಮಧು ಗುರುಸ್ವಾಮಿ, ಅಂದಿನಿಂದ ಇಂದಿನವರೆಗೂ ಹಿಂದಿರುಗಿ ನೋಡಿಲ್ಲ. “ಚಿಂಗಾರಿ’, “ಜಾನು’,”ಭಜರಂಗಿ’, “ವಜ್ರಕಾಯ’, “ಮಾರುತಿ 800′, “ಮಫ್ತಿ’ ಹೀಗೆ ಒಂದಷ್ಟು ಯಶಸ್ವಿ ಚಿತ್ರಗಳಲ್ಲಿ ನಟಿಸಿದರು.

ಕೆಲ ಚಿತ್ರಗಳ ಪಾತ್ರಕ್ಕಾಗಿ ಅವರು ಸುಮಾರು 12 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದೂ ಉಂಟು, 20 ಕೆಜಿ ಹೆಚ್ಚು ಮಾಡಿಕೊಂಡಿದ್ದೂ ಇದೆ. “ಭಜರಂಗಿ’ ಚಿತ್ರದ ಬಳಿಕ ಇವರಿಗೆ ಹುಡುಕಿ ಬಂದ ಅವಕಾಶಗಳಿಗೆ ಲೆಕ್ಕವೇ ಇಲ್ಲ. ಆಗ ಸುಮಾರು 60 ಕಥೆಗಳನ್ನು ಕೇಳಿ ಬಿಟ್ಟಿದ್ದುಂಟು.

ಕಾರಣ, ಇಷ್ಟವಾಗದ ಪಾತ್ರ. ಅದರಲ್ಲೂ ಪೂರ್ಣ ಕಥೆ ಹೇಳಿ, ಆ ಪಾತ್ರ ಭಯ ಹುಟ್ಟಿಸುವಂತಿದ್ದರೆ ಅಥವಾ, ಚಾಲೆಂಜ್‌ ಎನಿಸಿದರೆ ಮಾತ್ರ ಹೊಸದನ್ನು ಕಲಿಯಲು ಸಾಧ್ಯ ಅಂದುಕೊಂಡು ಇಷ್ಟದ ಪಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅದೇನೆ ಇರಲಿ, ಕನ್ನಡ ಚಿತ್ರರಂಗದಲ್ಲಿ ಖಳನಟರಾಗಿ ಘರ್ಜಿಸುವುದರ ಜೊತೆಗೆ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟು, ಅಲ್ಲೂ ಒಂದಷ್ಟು ಮೆಚ್ಚುಗೆ ಪಡೆದಿರುವುದು ಮಧುಗುರುಸ್ವಾಮಿ ಅವರ ವಿಶೇಷ.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.