ಗಲ್ಲಿ ಬೇಕರಿಯಲ್ಲಿ ಮನ ಮಿಡಿಯುವ ಪ್ರೇಮಕಥೆ
Team Udayavani, Oct 30, 2018, 11:06 AM IST
“ಗಲ್ಲಿ ಬೇಕರಿ’…. ಇದು ವಿದೇಶಿ ಕನ್ನಡಿಗ ನಿರ್ಮಾಣದ ಚಿತ್ರ. ನಿರ್ಮಾಪಕರ ಹೆಸರು ಮಹ್ಮದ್ ಮುಸ್ತಾಫ. ಮೂಲತಃ ಮಂಗಳೂರಿನವರಾದ ಮಹ್ಮದ್ ಮುಸ್ತಾಫ, ಕತಾರ್ನಲ್ಲಿ ನೆಲೆಸಿದ್ದಾರೆ. ನಿರ್ದೇಶಕ ವಿ.ಆರ್.ಕೆ.ರಾಧಾಕೃಷ್ಣ ಹೇಳಿದ ಕಥೆ ಕೇಳಿ, ನಿರ್ಮಾಣಕ್ಕೆ ಇಳಿದಿದ್ದಾರೆ.
ಗಲ್ಲಿ ಬೇಕರಿಯಲ್ಲಿ ಕೆಲಸ ಮಾಡುವ ಹುಡುಗ, ಅದೇ ಏರಿಯಾದಲ್ಲಿರುವ ಪೋಲೀಸ್ ಅಧಿಕಾರಿ ಮಗಳ ನಡುವಿನ ಲವ್ಸ್ಟೋರಿ ಇಲ್ಲಿದೆ. ಇದು ನೈಜ ಘಟನೆ ಆಧರಿಸಿದ ಮಾಡಿದ ಚಿತ್ರ ಎನ್ನುವ ನಿರ್ದೇಶಕರು, ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ.
ಇನ್ನು, ಇಲ್ಲಿ ಹಲವು ವಿಶೇಷತೆಗಳಿದ್ದು, ಅದನ್ನು ಸಿನಿಮಾದಲ್ಲೇ ನೋಡಬೇಕೆಂಬುದು ನಿರ್ದೇಶಕರ ಮಾತು. ಇಲ್ಲಿ ಜಯಕರ್ನಾಟಕ ಸಂಘದ ಕೆಲಸವನ್ನೂ ತೋರಿಸಲಾಗಿದೆ. ಅದಕ್ಕೊಂದು ಹಾಡು ಇರಿಸಿ, ರಾಜ್ಯದ 20 ಜಿಲ್ಲೆಗಳಲ್ಲಿ ಚಿತ್ರೀಕರಿಸಲಾಗಿದೆ. ಸಂತೋಷ್ ಚಿತ್ರದ ನಾಯಕರಾದರೆ, ಆರ್ಯನ್ ಮತ್ತೂಂದು ನಾಯಕನ ಪಾತ್ರ ಮಾಡಿದ್ದಾರೆ.
ಪ್ರಜ್ವಲ್ಪೂವಯ್ಯ ನಾಯಕಿ. ಇನ್ನುಳಿದಂತೆ ಚಿತ್ರದಲ್ಲಿ ಸುಚೇಂದ್ರಪ್ರಸಾದ್, ಯಮುನಾ ಶ್ರೀನಿಧಿ, ರಮೇಶ್ಭಟ್, ಉಗ್ರಂಮಂಜು ಇತರರು ನಟಿಸಿದ್ದಾರೆ. ಅಂದಹಾಗೆ, ಇತ್ತೀಚೆಗೆ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಲಹರಿ ವೇಲು ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಸುನಾದ್ ಗೌತಮ್ ಸಂಗೀತವಿದೆ. ಆಡಿಯೋ ಬಿಡುಗಡೆ ಸಂದರ್ಭದಲ್ಲಿ ಚಿತ್ರದಲ್ಲಿ ಹಾಡು ಮತ್ತು ಟ್ರೇಲರ್ ಪ್ರದರ್ಶನ ಮಾಡಿದ್ದು ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ