ಟೈಟಲ್ ವಿವಾದದಲ್ಲಿ “ಸ್ವಾತಿ ಮುತ್ತಿನ ಮಳೆ ಹನಿಯೇ..”
Team Udayavani, Dec 13, 2022, 11:37 AM IST
ನಟಿ ರಮ್ಯಾ ತಮ್ಮ ಆ್ಯಪಲ್ ಬಾಕ್ಸ್ ಬ್ಯಾನರ್ನಡಿ “ಸ್ವಾತಿ ಮುತ್ತಿನ ಮಳೆ ಹನಿಯೇ..’ ಎಂಬ ಚಿತ್ರವನ್ನು ನಿರ್ಮಿಸುತ್ತಿರುವ ವಿಚಾರವನ್ನು ಕೇಳಿರಬಹುದು. ರಾಜ್ ಬಿ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಈಗಾಗಲೇ ಚಿತ್ರೀಕರಣ ಕೂಡಾ ಪೂರ್ಣಗೊಳಿಸಿದೆ. ಹೀಗಿರುವಾಗಲೇ ಚಿತ್ರತಂಡಕ್ಕೆ ಟೈಟಲ್ ಸಮಸ್ಯೆ ಎದುರಾಗಿದೆ.
“ಸ್ವಾತಿ ಮುತ್ತಿನ ಮಳೆ ಹನಿಯೇ…’ ಟೈಟಲ್ ಬಳಸಬಾರದೆಂದು ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ. ತಮ್ಮ ವಕೀಲರ ಮೂಲಕ ಮಂಡಳಿಗೆ ಪತ್ರ ರವಾನಿಸಿದ್ದಾರೆ.
ವಕೀಲರು ನೀಡಿರುವ ಪತ್ರದಲ್ಲಿ “ರಾಜೇಂದ್ರ ಸಿಂಗ್ ಬಾಬು ಅವರು ಅಂಬರೀಶ್ ಹಾಗೂ ಸುಹಾಸಿನಿ ಜೋಡಿಯಾಗಿ “ಸ್ವಾತಿ ಮುತ್ತಿನ ಮಳೆ ಹನಿಯೇ’ ಟೈಟಲ್ನಡಿ ಸಿನಿಮಾ ನಿರ್ಮಿಸುತ್ತಿದ್ದು, ಶೇ 80ರಷ್ಟು ಚಿತ್ರೀಕರಣ ಕೂಡಾ ಆಗಿದೆ. ಆದರೆ, ಅಂಬರೀಶ್ ಅವರು ನಿಧನರಾದ ಕಾರಣ ಸಿನಿಮಾ ನಿಂತಿದೆ. ಜೊತೆಗೆ ಈ ಟೈಟಲ್ ಸಿಂಗ್ ಬಾಬು ಅವರು ನಿರ್ದೇಶಿಸಿರುವ “ಬಣ್ಣದ ಗೆಜ್ಜೆ’ ಚಿತ್ರದ ಹಾಡಿನದ್ದಾಗಿದ್ದು, ಈ ಟೈಟಲ್ ಅನ್ನು ಅವರೇ ನೋಂದಾವಣೆ ಮಾಡಿರುವುದರಿಂದ ಬೇರೆಯವರು ಬಳಸುವಂತಿಲ್ಲ. ಹಾಗಾಗಿ, ಈ ಟೈಟಲ್ ಅನ್ನು ಬೇರೆ ಯಾರಿಗೂ ನೀಡಬಾರದು’ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!