ಟೈಟಲ್ ವಿವಾದದಲ್ಲಿ “ಸ್ವಾತಿ ಮುತ್ತಿನ ಮಳೆ ಹನಿಯೇ..”
Team Udayavani, Dec 13, 2022, 11:37 AM IST
ನಟಿ ರಮ್ಯಾ ತಮ್ಮ ಆ್ಯಪಲ್ ಬಾಕ್ಸ್ ಬ್ಯಾನರ್ನಡಿ “ಸ್ವಾತಿ ಮುತ್ತಿನ ಮಳೆ ಹನಿಯೇ..’ ಎಂಬ ಚಿತ್ರವನ್ನು ನಿರ್ಮಿಸುತ್ತಿರುವ ವಿಚಾರವನ್ನು ಕೇಳಿರಬಹುದು. ರಾಜ್ ಬಿ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಈಗಾಗಲೇ ಚಿತ್ರೀಕರಣ ಕೂಡಾ ಪೂರ್ಣಗೊಳಿಸಿದೆ. ಹೀಗಿರುವಾಗಲೇ ಚಿತ್ರತಂಡಕ್ಕೆ ಟೈಟಲ್ ಸಮಸ್ಯೆ ಎದುರಾಗಿದೆ.
“ಸ್ವಾತಿ ಮುತ್ತಿನ ಮಳೆ ಹನಿಯೇ…’ ಟೈಟಲ್ ಬಳಸಬಾರದೆಂದು ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ. ತಮ್ಮ ವಕೀಲರ ಮೂಲಕ ಮಂಡಳಿಗೆ ಪತ್ರ ರವಾನಿಸಿದ್ದಾರೆ.
ವಕೀಲರು ನೀಡಿರುವ ಪತ್ರದಲ್ಲಿ “ರಾಜೇಂದ್ರ ಸಿಂಗ್ ಬಾಬು ಅವರು ಅಂಬರೀಶ್ ಹಾಗೂ ಸುಹಾಸಿನಿ ಜೋಡಿಯಾಗಿ “ಸ್ವಾತಿ ಮುತ್ತಿನ ಮಳೆ ಹನಿಯೇ’ ಟೈಟಲ್ನಡಿ ಸಿನಿಮಾ ನಿರ್ಮಿಸುತ್ತಿದ್ದು, ಶೇ 80ರಷ್ಟು ಚಿತ್ರೀಕರಣ ಕೂಡಾ ಆಗಿದೆ. ಆದರೆ, ಅಂಬರೀಶ್ ಅವರು ನಿಧನರಾದ ಕಾರಣ ಸಿನಿಮಾ ನಿಂತಿದೆ. ಜೊತೆಗೆ ಈ ಟೈಟಲ್ ಸಿಂಗ್ ಬಾಬು ಅವರು ನಿರ್ದೇಶಿಸಿರುವ “ಬಣ್ಣದ ಗೆಜ್ಜೆ’ ಚಿತ್ರದ ಹಾಡಿನದ್ದಾಗಿದ್ದು, ಈ ಟೈಟಲ್ ಅನ್ನು ಅವರೇ ನೋಂದಾವಣೆ ಮಾಡಿರುವುದರಿಂದ ಬೇರೆಯವರು ಬಳಸುವಂತಿಲ್ಲ. ಹಾಗಾಗಿ, ಈ ಟೈಟಲ್ ಅನ್ನು ಬೇರೆ ಯಾರಿಗೂ ನೀಡಬಾರದು’ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್?
New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’
Uttara Khand; ಕನ್ವರ್ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!
Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!
Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.