‘ಮಹಾನಟಿ ನಾಪತ್ತೆ’ .. ನಟನ ತಮಾಷೆ ಟ್ವಿಟ್ಗೆ ಪೊಲೀಸರು ಏನಂದ್ರು ಗೊತ್ತಾ ?
Team Udayavani, Mar 21, 2021, 2:30 PM IST
ಹೈದರಾಬಾದ್ : ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ನಾಪತ್ತೆಯಾಗಿದ್ದಾರೆ. ಅರೇ ಇದೇನಿದು ? ಮುಂದಿನ ಶುಕ್ರವಾರ ಅವರು ನಟಿಸಿರುವ ‘ರಂಗ್ ದೇ’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಚಿತ್ರ ತಂಡ ಪ್ರಮೋಷನ್ ಕಾರ್ಯದಲ್ಲಿ ಬ್ಯುಝಿಯಾಗಿದೆ. ಇಂತಹ ಸಮಯದಲ್ಲಿ ಚಿತ್ರನಟಿ ನಾಪತ್ತೆಯಾಗುವುದೆಂದರೇ ಏನರ್ಥ ?
ಗಾಬರಿಯಾಗಬೇಡಿ, ಯಾಕಂದರೆ ಕೀರ್ತಿ ಸುರೇಶ್ ನಿಜವಾಗಿಯೂ ನಾಪತ್ತೆಯಾಗಿಲ್ಲ. ಬದಲಾಗಿ ನಟ ನಿತಿನ್ ತಮ್ಮ ಟ್ವಿಟರ್ ನಲ್ಲಿ ‘ಕೀರ್ತಿ ಸುರೇಶ್ ಮಿಸ್ಸಿಂಗ್’ ಅಂತಾ ತಮಾಷೆ ಮಾಡಿದ್ದಾರಷ್ಟೆ.
Don’t worry @actor_nithiin we will take care?
— హైదరాబాద్ సిటీ పోలీస్ Hyderabad City Police (@hydcitypolice) March 20, 2021
‘ರಂಗ್ ದೇ’ ಚಿತ್ರದಲ್ಲಿ ಕೀರ್ತಿ ಸುರೇಶ್ ಹಾಗೂ ಭೀಷ್ಮ ಖ್ಯಾತಿಯ ನಿತಿನ್ ಒಟ್ಟಾಗಿ ತೆರೆ ಹಂಚಿಕೊಂಡಿದ್ದಾರೆ. ಬರುವ ಶುಕ್ರವಾರ ಈ ಸಿನಿಮಾ ಬೆಳ್ಳಿ ಪರದೆಗೆ ಅಪ್ಪಳಿಸುತ್ತಿದೆ. ಚಿತ್ರದ ಪ್ರಚಾರ ಜೋರಾಗಿಯೇ ನಡೆಯುತ್ತಿದೆ. ಇದರ ನಡುವೆ ನಟ ನಿತಿನ್ ಅವರ ಕೈಗೆ ಕೀರ್ತಿ ಸುರೇಶ್ ಅವರ ಶಾಲಾ ಸಮಯದ ಪಾಸ್ಪೋರ್ಟ್ ಸೈಜ್ನ ಫೋಟೊ ಸಿಕ್ಕಿದೆ. ಇದನ್ನು ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಅವರು, ಪ್ರೀತಿಯ ಅನು, ಎಲ್ಲಿದಿಯಾ? ರಂಗ್ ದೇ ಪ್ರಮೋಷನ್ಗೆ ನಮ್ಮ ಜತೆ ಹಾಜರಾಗು ಎನ್ನುವುದು ನಮ್ಮ ಕೋರಿಕೆ ಎಂದು ಬರೆದುಕೊಂಡಿದ್ದಾರೆ.
View this post on Instagram
ಇನ್ನು ನಿತಿನ್ ಅವರ ಈ ಫೋಸ್ಟ್ ಸಾಕಷ್ಟು ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಹೈದರಾಬಾದ್ ಪೊಲೀಸ್ ಕೂಡ ಪ್ರತಿಕ್ರಿಯೆ ನೀಡಿದ್ದು, ನೀವು ಚಿಂತಿಸಬೇಡಿ, ನಾವು ನೋಡಿಕೊಳ್ಳುತ್ತೇವೆ ಎಂದು ನಗುಮೊಗದ ಇಮೋಜಿ ಪೋಸ್ಟ್ ಮಾಡಿದೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?
MUST WATCH
ಹೊಸ ಸೇರ್ಪಡೆ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು