ರಿಯಲ್ ಫೈಟ್ ಗೆ ಯಾವಾಗ ಬರುತ್ತೀರಿ…WWF ದೈತ್ಯನ ನೇರ ಸವಾಲು; ಅಕ್ಷಯ್ ಉತ್ತರವೇನು?
ಆದರೆ ಅದು ರಿಯಲ್ ಅಲ್ಲ, ನಕಲಿ ಎಂದು ಅಕ್ಷಯ್ ಬಹಿರಂಗಗೊಳಿಸಿದ್ದರು.
Team Udayavani, Jun 19, 2021, 6:43 PM IST
ಮುಂಬಯಿ: ಸಿನಿಮಾದಲ್ಲಿ ತಮ್ಮ ಇಷ್ಟದ ಹೀರೋ ಎದುರಾಳಿ ಎಷ್ಟೇ ಬಲಶಾಲಿಯಾಗಿದ್ದರೂ ಹೊಡೆದು ಉರುಳಿಸಿ ಬಿಡುತ್ತಾರೆ. ಹೌದು ರೀಲ್ ಲೈಫ್ ಬೇರೆ, ರಿಯಲ್ ಲೈಫ್ ಬೇರೆ. ಅದಕ್ಕೊಂದು ತಾಜಾ ಉದಾಹರಣೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೆ ಡಬ್ಲ್ಯುಡಬ್ಲ್ಯು ಎಫ್ ನ ರಿಯಲ್ ಅಂಡರ್ ಟೇಕರ್ ಮಾರ್ಕ್ ಕ್ಯಾಲಾವೇ ನೇರ ಕಾದಾಟಕ್ಕೆ ಬರುವಂತೆ ಸವಾಲು ಹಾಕಿದ್ದಾರೆ!
ಇದನ್ನೂ ಓದಿ:ಚುನಾವಣೆಯಲ್ಲಿ ಭರ್ಜರಿ ಜಯ: ಇರಾನ್ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ರೈಸಿ ಆಯ್ಕೆ
ಹೌದು ಸಿನಿಮಾದಲ್ಲಾದರೆ ವಿಲನ್ ಆಹ್ವಾನ ಸ್ವೀಕರಿಸಿ ಕಾದಾಡುವುದು ಸಹಜ, ಆದರೆ ರಿಯಲ್ ಲೈಫ್ ನಲ್ಲಿ ಸವಾಲು ಸ್ವೀಕರಿಸಲು ಸಾಧ್ಯವೇ? ಆದರೆ ನಟ ಅಕ್ಷಯ್ ಕುಮಾರ್ ನೀಡಿರುವ ಉತ್ತರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ!
ಅಕ್ಷಯ್ ಕುಮಾರ್ ಅವರು ನಟಿಸಿದ್ದ ಬಾಲಿವುಡ್ ನ ಖಿಲಾಡಿಯೋಂ ಕಾ ಕಿಲಾಡಿ ಸಿನಿಮಾ ತೆರೆಗೆ ಬಂದು ಬರೋಬ್ಬರಿ 25 ವರ್ಷ ಪೂರೈಸಿತ್ತು. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಅಂಡರ್ ಟೇಕರ್ ನಡುವೆ ಹೊಡೆದಾಟದ ದೃಶ್ಯವಿತ್ತು. ಆದರೆ ಅದು ರಿಯಲ್ ಅಲ್ಲ, ನಕಲಿ ಎಂದು ಅಕ್ಷಯ್ ಬಹಿರಂಗಗೊಳಿಸಿದ್ದರು.
ಅಕ್ಷಯ್ ಕುಮಾರ್ ಅವರ ಟ್ವೀಟ್ ಗೆ ರಿಯಲ್ ಅಂಡರ್ ಟೇಕರ್ ಮಾರ್ಕ್, ರಿಯಲ್ ಮ್ಯಾಚ್ ಗೆ ನೀವು ಯಾವಾಗ ಸಿದ್ದರಿದ್ದೀರಿ ಹೇಳಿ ಎಂದು ನೇರ ಸವಾಲು ಹಾಕಿದ್ದರು. ಅದಕ್ಕೆ ಅಕ್ಷಯ್ ಕುಮಾರ್ ಅವರು, ನಾನು ನನ್ನ ಇನ್ಸೂರೆನ್ಸ್ ಅನ್ನು ಚೆಕ್ ಮಾಡಿ ಬರುವೆ ಬ್ರೊ…ಎಂದು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದರು…
Interesting… ? ? @akshaykumar @undertaker #KhiladiyonKaKhiladi #WWE pic.twitter.com/hOZMPBDShq
— WWE India (@WWEIndia) June 18, 2021
ರಿಯಲ್ ಅಂಡರ್ ಟೇಕರ್ ಸವಾಲು ಮತ್ತು ಅಕ್ಷಯ್ ಕುಮಾರ್ ಉತ್ತರದ ಟ್ವೀಟ್ ಅನ್ನು ಡಬ್ಲ್ಯುಡಬ್ಲ್ಯುಎಫ್ ಇಂಡಿಯಾ ತನ್ನ ಅಧಿಕೃತ ಟ್ವೀಟರ್ ಪೇಜ್ ನಲ್ಲಿ ಅಚ್ಚರಿಯ ಕಣ್ಣುಗಳ ಇಮೋಜಿ ಹಾಕಿ ಇಂಟರೆಸ್ಟಿಂಗ್ ಎಂದು ಉಲ್ಲೇಖಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ