ಲೈಂಗಿಕತೆ ಕೆಟ್ಟದ್ದು…ಆದರೆ ರೇಪ್ ಒಳ್ಳೆಯದಾ? ಏನಿದು ಏಕ್ತಾ ಕಪೂರ್ ವಿವಾದ
ಸೈನಿಕರ ಬಗ್ಗೆ ಗೌರವವಿದೆ. ಅಷ್ಟೇ ಅಲ್ಲ ಸೈನಿಕರನ್ನು ಅವಹೇಳನ ಮಾಡುವುದು ನನ್ನ ಉದ್ದೇಶವಾಗಿಲ್ಲ.
Team Udayavani, Jun 8, 2020, 11:07 AM IST
ಮುಂಬೈ:ಕಿರುತೆರೆ ಖ್ಯಾತ ನಿರ್ಮಾಪಕಿ, ಬಾಲಿವುಡ್ ಸಿನಿಮಾ ನಿರ್ಮಾಪಕಿ ಏಕ್ತಾ ಕಪೂರ್ ಅವರ ಟ್ರಿಪಲ್ ಎಕ್ಸ್ ವೆಬ್ ಸೀರೀಸ್ ನಲ್ಲಿ ಭಾರತೀಯ ಸೇನೆಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಬಿಗ್ ಬಾಸ್ ನ ಮಾಜಿ ಸ್ಪರ್ಧಿ ಹಿಂದೂಸ್ತಾನಿ ಭಾ ಅಲಿಯಾಸ್ ವಿಕಾಸ್ ಪಾಠಕ್ ಎಂಬವರು ಮುಂಬೈನ ಖಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಕಪೂರ್ ಹಾಗೂ ತಾಯಿ ಅವರನ್ನು ಕೆಟ್ಟದಾಗಿ ಟ್ರೋಲ್ ಮಾಡಿರುವುದಕ್ಕೆ ಏಕ್ತಾ ಕಪೂರ್ ಗರಂ ಆಗಿ ನೀಡಿರುವ ತಿರುಗೇಟು ಇದೀಗ ಹಲವರ ಹುಬ್ಬೇರಿಸಿದೆ.
ಕ್ಷಮೆ ಕೇಳಿದ ಏಕ್ತಾ ಕಪೂರ್:
ದೇಶದ ಸೈನಿಕರ ಬಗ್ಗೆ ಅಪಾರವಾದ ಗೌರವವಿದೆ. ಈಗಾಗಲೇ ವೆಬ್ ಸೀರೀಸ್ ನಲ್ಲಿನ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕಲಾಗಿದೆ. ಇದರಿಂದ ಯಾರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಭಾರತೀಯ ಸೇನೆ ಹಾಗೂ ಸೈನಿಕರ ಪತ್ನಿಯರ ಬಳಿಯೂ ಕ್ಷಮೆ ಕೇಳಲು ಸಿದ್ದಳಿದ್ದೇನೆ ಎಂದು ಏಕ್ತಾ ಕಪೂರ್ ಸ್ಪಷ್ಟನೆ ನೀಡಿದ್ದಾರೆ.
ಸೈನಿಕರ ಬಗ್ಗೆ ಗೌರವವಿದೆ. ಅಷ್ಟೇ ಅಲ್ಲ ಸೈನಿಕರನ್ನು ಅವಹೇಳನ ಮಾಡುವುದು ನನ್ನ ಉದ್ದೇಶವಾಗಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ನನಗೂ ಹಾಗೂ ನನ್ನ ತಾಯಿ ಬಗ್ಗೆ ಕೆಟ್ಟದಾಗಿ ಬೈದು ಕಮೆಂಟ್ ಹಾಕಿದ್ದಾರೆ. ಇದು ನನಗೆ ಬೇಸರ ತಂದಿದೆ ಎಂದು ಹೇಳಿದ್ದಾರೆ.
ಸೆಕ್ಸ್ ಗಿಂತ ರೇಪ್ ಓಕೆನಾ?
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು ಅಶ್ಲೀಲವಾಗಿ ಟ್ರೋಲ್ ಮಾಡಲಾಗಿದೆ. ಅಷ್ಟೇ ಅಲ್ಲ ರೇಪ್ ಮಾಡುವ ಬೆದರಿಕೆ ಕೂಡಾ ಒಡ್ಡಿದ್ದಾರೆ. ಇದು ಸೆಕ್ಸ್ ಅಥವಾ ಸೇನೆಗೆ ಸಂಬಂಧಿಸಿದ ಸಮಸ್ಯೆ ಅಲ್ಲ. ಈ ಜಂಟಲ್ ಮ್ಯಾನ್ (ಹಿಂದೂಸ್ತಾನಿ ಭಾ) ತನ್ನನ್ನು ತಾನು ವರ್ಷದ ದೇಶಪ್ರೇಮಿ ಎಂದು ಲೋಚಿಸಿಕೊಂಡಂತಿದೆ.ನನ್ನ, ನನ್ನ ತಾಯಿಯನ್ನು ಬಾಯಿಗೆ ಬಂದಂತೆ ಬೈದು, ಟ್ರೋಲ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ರೇಪ್ ಮಾಡುವ ಬೆದರಿಕೆಯೊಡ್ಡಿದ್ದಾರೆ. ಹಾಗಾದರೆ ಸೆಕ್ಸ್ ತುಂಬಾ ಕೆಟ್ಟದ್ದು, ಆದರೆ ರೇಪ್ ಓಕೆನಾ? ಎಂದು ಏಕ್ತಾ ಕಪೂರ್ ತಿರುಗೇಟು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?
MUST WATCH
ಹೊಸ ಸೇರ್ಪಡೆ
ಮಂಡ್ಯದಲ್ಲಿ ಐಸ್ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ
Panaji: ಸರಕಾರದ ಆ್ಯಪ್ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ
Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ
Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ