ಸೂಪರ್ ಹಿಟ್ ಆಯ್ತು ರಣಬೀರ್ ಕಪೂರ್ ‘ಬ್ರಹ್ಮಾಸ್ತ್ರ’: ಎರಡೇ ದಿನಕ್ಕೆ ಚಿತ್ರ ಗಳಿಸಿದ್ದೆಷ್ಟು?
Team Udayavani, Sep 11, 2022, 3:05 PM IST
ಬಾಲಿವುಡ್ ನ ಬಹು ನಿರೀಕ್ಷಿತ ಚಿತ್ರವಾದ ‘ಬ್ರಹ್ಮಾಸ್ತ್ರ’ ಸೆ.9ರಂದು ತೆರೆಗಪ್ಪಳಿಸಿದೆ. ಬಾಯ್ಕಾಟ್ ಟ್ರೆಂಡ್ ನ ನಡುವೆಯೂ ಚಿತ್ರಮಂದಿರಗಳಿಗೆ ಲಗ್ಗೆಯಿಟ್ಟಿದ್ದ ‘ಬ್ರಹ್ಮಾಸ್ತ್ರ’ ಬಾಲಿವುಡ್ ಮಂದಿಯನ್ನು ತನ್ನ ಉತ್ತಮ ಆರಂಭದಿಂದ ನಿರಾಳರನ್ನಾಗಿಸಿದೆ.
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ‘ಬ್ರಹ್ಮಾಸ್ತ್ರ’ ವಿಶ್ವದಾದ್ಯಂತ 8913 ಸ್ಕ್ರೀನ್ ಗಳಲ್ಲಿ ರಿಲೀಸ್ ಆಗಿತ್ತು. ಆದರೂ ಅಯಾನ್ ಮುಖರ್ಜಿ ನಿರ್ದೇಶನದ ಚಿತ್ರವು ಮೊದಲ ದಿನ ಭಾರತ ಮಾರುಕಟ್ಟೆಯಲ್ಲೇ 37 ಕೋಟಿ ರೂ ಗಳಿಸಿತ್ತು.
ಇದನ್ನೂ ಓದಿ:ವೀಲ್ ಚೇರ್ ನಲ್ಲಿ ಫುಡ್ ಡೆಲಿವೆರಿ: ಸ್ಪೂರ್ತಿಯಾದ ವಿಶೇಷ ಚೇತನ ಮಹಿಳೆ; ವಿಡಿಯೋ ವೈರಲ್
ವಿಶ್ವದಾದ್ಯಂತ ಉತ್ತಮ ಆರಂಭ ಪಡೆದಿರುವ ರಣಬೀರ್ ಕಪೂರ್ ಚಿತ್ರವು ಕೇವಲ ಎರಡು ದಿನಗಳಲ್ಲಿ 160 ಕೋಟಿ ರೂ ಗಳಿಸಿದೆ. ಶುಕ್ರವಾರ 75 ಕೋಟಿ ರೂ ಗಳಿಸಿದ ಚಿತ್ರವು, ಶನಿವಾರ ವಿಶ್ವ ಮಾರುಕಟ್ಟೆಯಲ್ಲಿ 85 ಕೋಟಿ ರೂ ಸಂಪಾದಿಸಿದೆ.
ಇದರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಚಿತ್ರವು ಮೊದಲ ದಿನ 37 ಕೋಟಿ ರೂ ಸಂಪಾದನೆ ಮಾಡಿದ್ದರೆ, ಶನಿವಾರ 42 ಕೋಟಿ ರೂ ಗಳಿಕೆ ಮಾಡಿದೆ. ಎರಡು ದಿನಗಳಲ್ಲಿ ಭಾರತದಲ್ಲಿ ಬ್ರಹ್ಮಾಸ್ತ್ರ ಚಿತ್ರವು ಒಟ್ಟು 79 ಕೋಟಿ ರೂ ಗಳಿಕೆ ಮಾಡಿದ್ದರೆ, 93 ಕೋಟಿ ರೂ ನಿವ್ವಳ ಗಳಿಕೆ ಮಾಡಿದೆ ಎಂದು ಫಿಲ್ಮ್ ಟ್ರೇಡ್ ಅನಲಿಸ್ಟ್ ಸಮಿತ್ ಕಡೇಲ್ ಟ್ವೀಟ್ ಮಾಡಿದ್ದಾರೆ.
#Brahmastra records a MASSIVE day-2 collection worldwide.
Friday – ₹ 75 cr Gross
Saturday- ₹ 85 cr Gross2 days total WW Total- ₹ 160 cr
India Biz
Friday – ₹ 37 cr ( All Lang)
Saturday- ₹ 42 cr ( All Lang)Two days India – ₹ 79 cr nett
Gross 93 cr #RanbirKapoor pic.twitter.com/pDC2pJgoJm— Sumit Kadel (@SumitkadeI) September 11, 2022
‘ಬ್ರಹ್ಮಾಸ್ತ್ರ’ ಚಿತ್ರವು ಎರಡು ಭಾಗಗಳಲ್ಲಿ ತಯಾರಾಗುತ್ತಿದೆ. ಮೊದಲ ಭಾಗ ಶಿವದಲ್ಲಿ ರಣಬೀರ್, ಆಲಿಯಾ ಭಟ್ ಜೊತೆಗೆ ಅಮಿತಾಭ್ ಬಚ್ಚನ್, ನಾಗಾರ್ಜುನ, ಮೌನಿ ರಾಯ್, ಸೌರವ್ ಗುರ್ಜಾರ್ ಮುಂತಾದವರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ