ಸಾಕಷ್ಟು ಶ್ರಮದ ಫಲ ‘ಪಠಾಣ್’ ಚಿತ್ರ : ಸಂಭ್ರಮದಲ್ಲಿ ನಟ ಜಾನ್ ಅಬ್ರಹಾಂ
ಚಿತ್ರರಂಗದಲ್ಲಿ 20 ವರ್ಷ ಕಂಡ ನಟನಿಗೆ ಚಿತ್ರದ ಮೇಲೆ ಭಾರಿ ನಿರೀಕ್ಷೆ
Team Udayavani, Jan 12, 2023, 7:44 PM IST
ಮುಂಬೈ: ಬಹು ನಿರೀಕ್ಷಿತ ಚಿತ್ರ “ಪಠಾಣ್” ಟ್ರೇಲರ್ನ ಮೇಲೆ ಪ್ರೀತಿಯ ಮಳೆಗರೆದಿದ್ದಕ್ಕಾಗಿ ಅಭಿಮಾನಿಗಳಿಗೆ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಬಾಲಿವುಡ್ ತಾರೆ ಜಾನ್ ಅಬ್ರಹಾಂ ಗುರುವಾರ ಧನ್ಯವಾದ ಅರ್ಪಿಸಿದ್ದಾರೆ. ಆಕ್ಷನ್ ಸ್ಪೈ ಥ್ರಿಲ್ಲರ್ ಅನ್ನು “ಬಿಗ್ಗಿ” ಎಂದು ಬಣ್ಣಿಸಿ, ಇದು ಸಾಕಷ್ಟು ಶ್ರಮದ ಫಲವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಮುಂದಿನ ವಾರ ಚಿತ್ರರಂಗದಲ್ಲಿ 20 ವರ್ಷಗಳನ್ನು ಪೂರ್ಣಗೊಳಿಸುತ್ತೇನೆ, ಯಶ್ ರಾಜ್ ಫಿಲ್ಮ್ಸ್ ಪ್ರಾಜೆಕ್ಟ್ ಬಿಡುಗಡೆಯು ನನಗೆ ವಿಶೇಷ ಕ್ಷಣವಾಗಿದೆ ಎಂದು ಹೇಳಿದ್ದಾರೆ.
ಶಾರುಖ್ ಖಾನ್ ಅವರು ಮುಖ್ಯಭೂಮಿಕೆಯಲ್ಲಿರುವ “ಪಠಾಣ್” ಜನವರಿ 25 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.ಸಿದ್ಧಾರ್ಥ್ ಆನಂದ್ ನಿರ್ದೇಶನದ ಚಿತ್ರದ ಟ್ರೇಲರ್ ಮಂಗಳವಾರ ಬಿಡುಗಡೆಯಾಗಿದೆ.
“ಸಿನಿಮಾದಲ್ಲಿ ನನ್ನ ಈ ಕ್ಷಣ, ಇಲ್ಲಿಯೇ… ಇದೀಗ, ವಿಶೇಷವಾದದ್ದು. ಪಠಾಣ್ ಚಿತ್ರದ ಟ್ರೇಲರ್ನಲ್ಲಿ ನೀವು ತುಂಬಾ ಪ್ರೀತಿಯನ್ನು ತೋರಿಸಿರುವುದು ಅದ್ಭುತವಾಗಿದೆ. ಇದನ್ನು ತಯಾರಿಸಲು ಸಾಕಷ್ಟು ಶ್ರಮ ವಹಿಸಲಾಗಿದೆ. ಇದು ಒಂದು ದೊಡ್ಡ ವಿಷಯ ಎಂದು 2003 ರಲ್ಲಿ “ಜಿಸ್ಮ್” ಚಿತ್ರದ ಮೂಲಕ ಪದಾರ್ಪಣೆ ಮಾಡಿದ ಅಬ್ರಹಾಂ, ತಮ್ಮ ಇನ್ಸ್ಟಾ ಗ್ರಾಂ ಸ್ಟೋರಿಯಲ್ಲಿ ಬರೆದಿದ್ದಾರೆ.
ರಾ ಫೀಲ್ಡ್ ಏಜೆಂಟ್ ಪಠಾಣ್ ಆಗಿ ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಜಿಮ್ ಆಗಿ ಜಾನ್ ಅಬ್ರಹಾಂ, ಕರ್ನಲ್ ಸುನಿಲ್ ಲೂತ್ರಾ ಪಾತ್ರದಲ್ಲಿ ಅಶುತೋಷ್ ರಾಣಾ, ಗೌತಮ್ ರೋಡ್, ಡಿಂಪಲ್ ಕಪಾಡಿಯಾ, ಸಿದ್ಧಾಂತ್ ಘೇಗದ್ಮಲ್, ಶಾಜಿ ಚೌಧರಿ, ಕ್ಯಾಪ್ಟನ್ ಅಬ್ರಾರ್ ಪಾತ್ರದಲ್ಲಿ ಗವಿ ಚಾಹಲ್, ಸಲ್ಮಾನ್ ಖಾನ್ ಅವಿನಾಶ್ ಸಿಂಗ್ “ಟೈಗರ್” ರಾಥೋಡ್ ಅತಿಥಿ ಪಾತ್ರದಲ್ಲಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
50 ವರ್ಷದ ನಟ ಜಾನ್ ಅಬ್ರಹಾಂ ಅವರು ತಮ್ಮ ವೃತ್ತಿಜೀವನದ “ನನ್ನ ಕೆಲವು ಅತ್ಯುತ್ತಮ ಪಾತ್ರಗಳನ್ನು” ನೀಡಿದ್ದಕ್ಕಾಗಿ ಚಿತ್ರದ ನಿರ್ಮಾಪಕ ಆದಿತ್ಯ ಚೋಪ್ರಾ ಅವರನ್ನು ಹೊಗಳಿದ್ದಾರೆ. “ಧೂಮ್” (2004), “ಕಾಬೂಲ್ ಎಕ್ಸ್ಪ್ರೆಸ್” (2006), ಮತ್ತು “ನ್ಯೂಯಾರ್ಕ್” (2009) ನಂತಹ ಬೃಹತ್ ಮತ್ತು ವಿಮರ್ಶಾತ್ಮಕ ಹಿಟ್ಗಳಲ್ಲಿ ಬ್ಯಾನರ್ನೊಂದಿಗೆ ಕೆಲಸ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್ ಬಿ; ಗಮನ ಸೆಳೆದ ಪಾತ್ರದ ಝಲಕ್
Road mishap: ಭೀಕರ ರಸ್ತೆ ಅಪಘಾತದಲ್ಲಿ ನಟ ಪಂಕಜ್ ತ್ರಿಪಾಠಿ ಬಾವ ಮೃತ್ಯು: ಸಹೋದರಿಗೆ ಗಾಯ
ʼಭಜರಂಗಿ ಭಾಯಿಜಾನ್ʼ, ʼರೌಡಿ ರಾಥೋರ್ʼ ಸೀಕ್ವೆಲ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ನಿರ್ಮಾಪಕ
MUST WATCH
ಹೊಸ ಸೇರ್ಪಡೆ
Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
Police Raid: 346 ರೌಡಿಶೀಟರ್ಗಳ ಮನೆಗಳ ಮೇಲೆ ದಾಳಿ
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು