Review bombing: ವಿಮರ್ಶಕರಿಂದ ಸಿನಿಮಾಗಳು ಸಾಯಲು ಸಾಧ್ಯವಿಲ್ಲ; ನಟ ಮಮ್ಮುಟ್ಟಿ


Team Udayavani, Nov 20, 2023, 6:20 PM IST

tdy-17

ಕೊಚ್ಚಿ: ಮಾಲಿವುಡ್‌ ನಲ್ಲಿ ಕಳೆದ ಕೆಲ ಸಮಯದಿಂದ ಸಿನಿಮಾಗಳಿಗೆ ನೆಗೆಟಿವ್‌ ರಿವ್ಯೂ ನೀಡುವ ವಿಚಾರದಲ್ಲಿ ದೂರುಗಳು ದಾಖಲಾಗಿವೆ.

ಇತ್ತೀಚೆಗೆ ನಟ ದಿಲೀಪ್‌ ಹಾಗೂ ತಮನ್ನಾ ಅಭಿನಯದ ʼಬಾಂದ್ರಾʼ ಚಿತ್ರತಂಡ ಸಿನಿಮಾದ ಕುರಿತು ನೆಗೆಟಿವ್‌ ರಿವ್ಯೂ ನೀಡಿದ ಕಾರಣಕ್ಕಾಗಿ ಯೂಟ್ಯೂಬರ್ಸ್‌ ಹಾಗೂ ವ್ಲಾಗರ್‌ ಗಳ ವಿರುದ್ಧ ಚಿತ್ರತಂಡವೊಂದು ದೂರು ದಾಖಲಿಸಿತ್ತು. ಇದಕ್ಕೂ ಮೊದಲು ಅಕ್ಟೋಬರ್‌ 13 ರಂದು ರಿಲೀಸ್‌ ಆದ ʼರಾಹೆಲ್‌ ಮಕಲ್‌ʼ ಸಿನಿಮಾದ ನಿರ್ದೇಶಕ ಉಬೈನಿ ಇ ಕೂಡ ನೆಗೆಟಿವ್‌ ರಿವ್ಯೂ ನೀಡಿದ ಫೇಸ್‌ ಬುಕ್‌, ಯೂಟ್ಯೂಬರ್ಸ್‌ ಹಾಗೂ ವ್ಲಾಗರ್ಸ್‌ ಗಳ ವಿರುದ್ಧ ದೂರು ದಾಖಲಿಸಿದ್ದರು.

ಇದರ ಬೆನ್ನಲ್ಲೇ ಈ ಕುರಿತು ಮಾಲಿವುಡ್‌ ಸಿನಿಮಾರಂಗದ ಹಿರಿಯ ನಟ ಮಮ್ಮುಟ್ಟಿ ಅವರು ಮಾತನಾಡಿದ್ದಾರೆ.

ಮಮ್ಮುಟ್ಟಿ ಹಾಗೂ ಜ್ಯೋತಿಕಾ ಪ್ರಧಾನ ಪಾತ್ರದಲ್ಲಿರುವ ʼ ಕಾತಲ್-ದಿ ಕೋರ್ʼ ಸಿನಿಮಾ ಇದೇ ನ.23 ರಂದು ತೆರೆ ಕಾಣಲಿದೆ. ಪ್ರಚಾರದ ಅಂಗವಾಗಿ ಸಿನಿಮಾ ತಂಡ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿತು. ಇದೇ ವೇಳೆ ಮಮ್ಮುಟ್ಟಿ ಸಿನಿಮಾಗಳ ವಿಮರ್ಶೆ ಬಗ್ಗೆ ಮಾತನಾಡಿದ್ದಾರೆ.

ಕೋಟ್ಯಂತರ ರೂಪಾಯಿಯಲ್ಲಿ ತಯಾರಾದ ಮತ್ತು ಅನೇಕ ಜನರ ಪರಿಶ್ರಮದಿಂದ ಮಾಡಿದ ಸಿನಿಮಾವೊಂದು ವಿಮರ್ಶೆಯಿಂದ ಥಿಯೇಟರ್‌ ನಲ್ಲಿ ಸೋಲುತ್ತದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು “ಒಂದು ವಿಮರ್ಶೆಯಿಂದಾಗಿ ಸಿನಿಮಾದ ಸೋಲು ಆಗುವುದಿಲ್ಲ. ವಿಮರ್ಶೆಯು ವಿಮರ್ಶಕರ ದೃಷ್ಟಿಕೋನವನ್ನು ಆಧರಿಸಿದೆ. ವಿಮರ್ಶೆಗಳನ್ನು ನಿಲ್ಲಿಸುವುದರಿಂದ ಸಿನಿಮಾಕ್ಕೇನು ಹೊಡೆತ ಬೀಳುವುದಿಲ್ಲ ಅಥವಾ ಲಾಭವಾಗುದಿಲ್ಲ. ಯಾವ ಸಿನಿಮಾವನ್ನು ನೋಡಬೇಕೆನ್ನುವ ನಿರ್ಧಾರವನ್ನು ಪ್ರೇಕ್ಷಕರು ಮಾಡುತ್ತಾರೆ. ಇದಲ್ಲದೆ ನಮಗೆ ಅಭಿಪ್ರಾಯವನ್ನು ಹೇಳುವ ಸ್ವಾತಂತ್ಯವಿದೆ” ಎಂದು ಮಮ್ಮುಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: Kollywood: ಅನಾರೋಗ್ಯ: ಹಿರಿಯ ನಟ ವಿಜಯಕಾಂತ್ ಆಸ್ಪತ್ರೆಗೆ ದಾಖಲು; ಐಸಿಯುನಲ್ಲಿ ಚಿಕಿತ್ಸೆ

“ಸಿನಿಮಾ ನೋಡಿದ ಬಳಿಕ ಅಭಿಪ್ರಾಯಗಳು ನಮ್ಮದೇ ಆಗಿರಬೇಕು ಹೊರತು ಇತರರದ್ದಲ್ಲ. ನಾವು ಇತರರ ಅಭಿಪ್ರಾಯವನ್ನು ಕೇಳಿ ಮುಂದುವರೆದರೆ ಆಗ ನಮ್ಮ ಸ್ವಂತ ಅಭಿಪ್ರಾಯಗಳನ್ನು ಕಳೆದುಕೊಳ್ಳುತ್ತೇವೆ. ಹಾಗಾಗಿ ಪ್ರತಿಯೊಬ್ಬರು ತಮ್ಮ ತಮ್ಮ ಅಭಿಪ್ರಾಯಕ್ಕೆ ತಕ್ಕಂತೆ ಸಿನಿಮಾ ನೋಡಬೇಕು” ಎಂದರು.

ಜಿಯೋ ಬೇಬಿ ನಿರ್ದೇಶನದ ʼಕಾತಲ್-ದಿ ಕೋರ್ʼ ಸಿನಿಮಾದ ಕಥೆ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ನಡೆಯುತ್ತದೆ. ಸಿನಿಮಾದಲ್ಲಿ ಮಮ್ಮುಟ್ಟಿ ಮ್ಯಾಥ್ಯೂ ಎನ್ನುವ ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಮಮ್ಮುಟ್ಟಿ ಸಲಿಂಗಕಾಮಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

 

ಟಾಪ್ ನ್ಯೂಸ್

1-sadasad

T20; ಇಂದು ದ್ವಿತೀಯ ಟಿ20: ಗೆಲುವಿನ ಗೌರವಕ್ಕೆ ಕಾದಿದೆ ಕೌರ್‌ ಪಡೆ

1-adsadas

Women’s Premier League:ಇಂದು ಹರಾಜು; ರೇಸ್‌ನಲ್ಲಿದ್ದಾರೆ 165 ಆಟಗಾರ್ತಿಯರು

mPuttur ಹಾಲು ಸಂಸ್ಕರಣೆ, ಪ್ಯಾಕಿಂಗ್‌ ಘಟಕ: ಜಾಗ ಮಂಜೂರಿಗೆ ಸರಕಾರದ ಅನುಮತಿ

Puttur ಹಾಲು ಸಂಸ್ಕರಣೆ, ಪ್ಯಾಕಿಂಗ್‌ ಘಟಕ: ಜಾಗ ಮಂಜೂರಿಗೆ ಸರಕಾರದ ಅನುಮತಿ

Actress Leelavathi ಲೀನಾ ಸಿಕ್ವೇರಾ ಲೀಲಾವತಿಯಾಗಿ ಸಿನಿ ಲೋಕದ ಪಯಣ

Actress Leelavathi ಲೀನಾ ಸಿಕ್ವೇರಾ ಲೀಲಾವತಿಯಾಗಿ ಸಿನಿ ಲೋಕದ ಪಯಣ

priyank

Savarkar ಭಾವಚಿತ್ರ ಅಳವಡಿಕೆ ಚರ್ಚೆ ಮುನ್ನೆಲೆಗೆ

RBI

Repo ದರ ಯಥಾಸ್ಥಿತಿ: ದೂರದೃಷ್ಟಿಯ ನಿರ್ಧಾರ

1-sadsadasd

Session; ಈಡೇರದ ಆಶಯ: ಈ ಬಾರಿಯೂ ಉತ್ತರ ಕರ್ನಾಟಕದ ಸಮಸ್ಯೆಗೆ ಸಿಕ್ಕಿಲ್ಲ ಅಭಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

TDY-11

Fighter Teaser ಔಟ್: ಇಂಟರ್‌ನೆಟ್‌ ನಲ್ಲಿ ಬೆಂಕಿ ಹಚ್ಚಿದ ಹೃತಿಕ್‌ – ದೀಪಿಕಾ ಕೆಮೆಸ್ಟ್ರಿ

Tollywood: ಗೆಳತಿ ಆತ್ಮಹತ್ಯೆ ಪ್ರಕರಣದಲ್ಲಿ ʼಪುಷ್ಪʼ ನಟನ ಬಂಧನ; ಚಿತ್ರೀಕರಣಕ್ಕೆ ಅಡ್ಡಿ

Tollywood: ಗೆಳತಿ ಆತ್ಮಹತ್ಯೆ ಪ್ರಕರಣದಲ್ಲಿ ʼಪುಷ್ಪʼ ನಟನ ಬಂಧನ; ಚಿತ್ರೀಕರಣಕ್ಕೆ ಅಡ್ಡಿ

TOXIC

Welcome to ‘Toxic’ World: ರಾಕಿಭಾಯ್‌ ಹೊಸ ಸಿನಿಮಾದ ಟೈಟಲ್‌ ಬಿಡುಗಡೆ

Mumbai: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಿವುಡ್ ನ ಹಿರಿಯ ನಟ ʻಜೂನಿಯರ್ ಮೆಹಮೂದ್ʼ ನಿಧನ

Mumbai: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಿವುಡ್ ನ ಹಿರಿಯ ನಟ ʻಜೂನಿಯರ್ ಮೆಹಮೂದ್ʼ ನಿಧನ

1-sadads

Viral ‘drunk’ video; ವದಂತಿಗಳಿಗೆ ತೆರೆ ಎಳೆದ ಸನ್ನಿ ಡಿಯೋಲ್

MUST WATCH

udayavani youtube

ಬಿಜೆಪಿ ಕೈ ಹಿಡಿದ ಉತ್ತರ ಭಾರತದ ಮತದಾರರು

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

ಹೊಸ ಸೇರ್ಪಡೆ

1-sadasad

T20; ಇಂದು ದ್ವಿತೀಯ ಟಿ20: ಗೆಲುವಿನ ಗೌರವಕ್ಕೆ ಕಾದಿದೆ ಕೌರ್‌ ಪಡೆ

1-adsadas

Women’s Premier League:ಇಂದು ಹರಾಜು; ರೇಸ್‌ನಲ್ಲಿದ್ದಾರೆ 165 ಆಟಗಾರ್ತಿಯರು

mPuttur ಹಾಲು ಸಂಸ್ಕರಣೆ, ಪ್ಯಾಕಿಂಗ್‌ ಘಟಕ: ಜಾಗ ಮಂಜೂರಿಗೆ ಸರಕಾರದ ಅನುಮತಿ

Puttur ಹಾಲು ಸಂಸ್ಕರಣೆ, ಪ್ಯಾಕಿಂಗ್‌ ಘಟಕ: ಜಾಗ ಮಂಜೂರಿಗೆ ಸರಕಾರದ ಅನುಮತಿ

Actress Leelavathi ಲೀನಾ ಸಿಕ್ವೇರಾ ಲೀಲಾವತಿಯಾಗಿ ಸಿನಿ ಲೋಕದ ಪಯಣ

Actress Leelavathi ಲೀನಾ ಸಿಕ್ವೇರಾ ಲೀಲಾವತಿಯಾಗಿ ಸಿನಿ ಲೋಕದ ಪಯಣ

priyank

Savarkar ಭಾವಚಿತ್ರ ಅಳವಡಿಕೆ ಚರ್ಚೆ ಮುನ್ನೆಲೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.