Actress: 17ಕ್ಕೆ ಹೀರೋಯಿನ್‌,19ಕ್ಕೆ ಸೂಪರ್ ಸ್ಟಾರ್‌, 24ರ ವಯಸ್ಸಿಗೆ ನಟನೆ ತೊರೆದ ನಟಿ


Team Udayavani, Sep 21, 2023, 2:56 PM IST

Actress: 17ಕ್ಕೆ ಹೀರೋಯಿನ್‌,19ಕ್ಕೆ ಸೂಪರ್ ಸ್ಟಾರ್‌, 24ರ ವಯಸ್ಸಿಗೆ ನಟನೆ ತೊರೆದ ನಟಿ

ಮುಂಬಯಿ: ಸಿನಿಮಾ ಎನ್ನುವ ಬಣ್ಣದ ಲೋಕದಲ್ಲಿ ಅವಕಾಶ ಸಿಗುವುದೇ ಕಷ್ಟ. ಕೆಲವರಿಗೆ ಅಂಥ ಅವಕಾಶಗಳು ಸಿಗುತ್ತದೆ. ಆದರೆ ಆ ಅವಕಾಶದ ಹಾದಿ ಅಷ್ಟು ಸುಲಭವಾಗಿರುವುದಿಲ್ಲ. ಸಿನಿಮಾ ಕ್ಷೇತ್ರದಲ್ಲಿ ಒಮ್ಮೆ ಯಶಸ್ಸು ಸಿಕ್ಕರೆ, ಮತ್ತೊಮ್ಮೆ ಸೋಲು ಎದುರಾಗುತ್ತದೆ. ಯಶಸ್ಸು – ಸೋಲು ಎರಡನ್ನೂ ಬ್ಯಾಲೆನ್ಸ್‌ ಮಾಡಿಕೊಂಡು ಬಣ್ಣದ ಲೋಕದಲ್ಲಿ ಹೆಜ್ಜೆಯಿಡಬೇಕಾಗುತ್ತದೆ.

ಅತೀ ಸಣ್ಣ ವಯಸ್ಸಿನಲ್ಲಿ ಸಿನಿಮಾ ಲೋಕದಲ್ಲಿ ಮಿಂಚಿದ ನಟಿಯಲ್ಲಿ ನಿರ್ದೇಶಕ ಮಹೇಶ್‌ ಭಟ್‌ ಅವರ ಪುತ್ರಿ ಪೂಜಾ ಭಟ್‌ ಕೂಡ ಒಬ್ಬರು. ಪೂಜಾ ಭಟ್‌ ಅವರ ವೃತ್ತಿ ಜೀವನದಲ್ಲಿ ಯಶಸ್ಸಿನೊಂದಿಗೆ ವಿವಾದ ಕೂಡ ಸಮಾನವಾಗಿ ಕೇಳಿ ಬಂದಿದೆ ಬಂದಿದೆ.

ಇತ್ತೀಚೆಗೆ ನಟಿ ಪೂಜಾ ಭಟ್‌ ಬಿಗ್‌ ಬಾಸ್‌ ಓಟಿಟಿ-2 ನಲ್ಲಿ ಸ್ಪರ್ಧಿಯಾಗಿ ಭಾಗಿದ್ದರು. ಆದಾದ ಬಳಿಕ ಅವರು ಹಲವು ಸಂದರ್ಶನವನ್ನು ಕೊಟ್ಟಿದ್ದು, ಇದರಲ್ಲಿ ವೃತ್ತಿ ಹಾಗೂ ವೈಯಕ್ತಿಕ ಜೀವನದ ಅನೇಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. 25 ರ ವಯಸ್ಸಿನಲ್ಲಿ ವೃತ್ತಿ ಜೀವನ ಉತ್ತುಂಗದಲ್ಲಿರುವಾಗಲೇ ನಟನೆ ತೊರೆದ ಬಗ್ಗೆ ಪೂಜಾ ಭಟ್‌ ಮಾತನಾಡಿದ್ದಾರೆ.

ಪೂಜಾ ಭಟ್‌ ತನ್ನ 17 ರ ವಯಸ್ಸಿನಲ್ಲಿ ʼಡ್ಯಾಡಿʼ ಸಿನಿಮಾದ ಮೂಲಕ ಬಾಲಿವುಡ್‌ ಗೆ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾವನ್ನು ಅವರ ತಂದೆ ಮಹೇಶ್‌ ಭಟ್‌ ಅವರೇ ನಿರ್ದೇಶನ ಮಾಡಿದ್ದರು.

ಈ ಬಗ್ಗೆ ಮಾತನಾಡುವ ನಟಿ ಪೂಜಾ ಭಟ್‌, “ಡ್ಯಾಡಿ, ದಿಲ್ ಹೈ ಕಿ ಮಾಂತಾ ನಹಿ” ನಂತರ “ಸಡಕ್” ಹ್ಯಾಟ್ರಿಕ್ ಹಿಟ್ ಆಗಿತ್ತು. 19 ನೇ ವಯಸ್ಸಿನಲ್ಲಿ ನಾನು ಸೂಪರ್ ಸ್ಟಾರ್ ಆದೆ. ಆದರೆ 24 ನೇ ವಯಸ್ಸಿನಲ್ಲಿ ಇಂಡಸ್ಟ್ರಿ ಮುಗಿದಿದೆ ಎಂದು ಹೇಳಿದಾಗ ನಾನು ‘ಯೇ ಹೈ ದುನಿಯಾ’ ಎಂದು ಹೇಳಿದೆ. 24 ನೇ ವಯಸ್ಸಿನಲ್ಲಿ, ಹೆಚ್ಚಿನ ಜನರು ವೃತ್ತಿ ಪ್ರಾರಂಭಿಸುತ್ತಿರುವಾಗ‌, ಸಣ್ಣ ವಯಸ್ಸಿನಲ್ಲಿ ಸ್ಟಾರ್‌ಡಮ್‌ ಉತ್ತುಂಗಕ್ಕೇರುವ ಭಾರತದ ಏಕೈಕ ಉದ್ಯಮ ಇದಾಗಿದೆ” ಎಂದಿದ್ದಾರೆ.

25 ರ ವಯಸ್ಸಿನಲ್ಲಿ ನಾನು ನಟನೆ ಬಿಟ್ಟು, ಪ್ರೊಡಕ್ಷನ್‌ ಹೌಸ್‌ ಆರಂಭಿಸಿದೆ. ʼತಮನ್ನಾʼ ಎನ್ನುವ ಸಿನಿಮಾವನ್ನು ನಿರ್ಮಾಣ ಮಾಡಿದೆ. ಇದರಿಂದ ನನಗೆ ಮೊದಲ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತು. ಆಗ ನನಗೆ ಆತ್ಮ ತೃಪ್ತಿಯ ಅನುಭವವಾಯಿತು. ನಾನು ದೇಶಾದ್ಯಂತ ಜನರನ್ನು ಭೇಟಿ ಮಾಡಿದ್ದೆ. ಆ ಸಿನಿಮಾದ ಹಣವನ್ನು ಚಾರಿಟಿಗೆ ದಾನವಾಗಿ ನೀಡಲಾಯಿತು. ನಂತರ ನಾನು ಕಾಜೋಲ್ ಜೊತೆ ʼದುಷ್ಮನ್ʼ ಸಿನಿಮಾ ಮಾಡಿದೆ ಆ ಬಳಿಕ ʼಝಖ್ಮ್ʼ ಸಿನಿಮಾವನ್ನು ನಿರ್ದೇಶಿಸಿದೆ” ಎಂದರು.

“ನಾನು 21 ಕ್ಯಾಮರಾವನ್ನು ಫೇಸ್‌ ಮಾಡಿಲ್ಲ. ಬರೀ ಸಿನಿಮಾ ನಿರ್ದೇಶನ ಹಾಗೂ ನಿರ್ಮಾಣ ಮಾಡಿದೆ. ಆ ವೇಳೆ ನನಗೆ ನನ್ನ ಸ್ಟಾರ್‌ ಡಮ್‌ ಮುಗಿಯಿತು. ಇದು ನನ್ನ ಹೊಸ ಅಧ್ಯಾಯವೆಂದು ಅನ್ನಿಸಿತು” ಎಂದು ಹೇಳಿದ್ದಾರೆ.

ಪೂಜಾ ಭಟ್‌ ಕೊನೆಯ ಬಾರಿ ನಿರ್ಮಾಪಕಿಯಾಗಿ ʼಜಿಸ್ಮ್ 2ʼ ಮಾಡಿದ್ದರು. ಇದು ಸನ್ನಿ ಲಿಯೋನ್‌ ಅವರ  ಚೊಚ್ಚಲ ಬಾಲಿವುಡ್‌ ಸಿನಿಮಾವಾಗಿತ್ತು.

 

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.