ಮಿ ಟೂ ಅಭಿಯಾನ; ಕಾದು ನೋಡಿ…ಬಿಗ್ ಬಿ ವಿರುದ್ಧ ಸಪ್ನಾ ಭವಾನಿ ಬಾಂಬ್!
Team Udayavani, Oct 13, 2018, 12:32 PM IST
ನವದೆಹಲಿ:ಭಾರತದಲ್ಲಿ ಆರಂಭಗೊಂಡ ಮಿ ಟೂ ಅಭಿಯಾನದಲ್ಲಿ ಇದೀಗ ಅಲೋಕ್ ನಾಥ್, ವಿಕಾಸ್ ಬಾಲ್, ನಾನಾ ಪಾಟೇಕರ್, ಸಾಜಿದ್ ಖಾನ್, ಅನು ಮಲಿಕ್, ಕೈಲಾಶ್ ಖೇರ್ ಸೇರಿದಂತೆ ಘಟಾನುಘಟಿಗಳ ಹೆಸರು ಕೇಳಿಬರತೊಡಗಿದೆ. ಈ ಹಿಂದೆ ತಾವು ಅನುಭವಿಸಿದ ಲೈಂಗಿಕ ಕಿರುಕುಳ, ಅಸಭ್ಯ ವರ್ತನೆಗಳ ಕುರಿತಾಗಿ ಆರೋಪಿಸುತ್ತಿದ್ದಾರೆ.
ಅದಕ್ಕೊಂದು ಹೊಸ ಸೇರ್ಪಡೆ ಎಂಬಂತೆ ಖ್ಯಾತ ಕೇಶ ವಿನ್ಯಾಸಕಿ ಸಪ್ನಾ ಭವಾನಿ ತನ್ನ ಟ್ವೀಟರ್ ಖಾತೆಯಲ್ಲಿ, ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ವಿರುದ್ಧವೇ ತಿರುಗುಬಾಣ ಬಿಟ್ಟಿದ್ದಾರೆ. “ಮಿ ಟೂ ಅಭಿಯಾನಕ್ಕೆ ಅಮಿತಾಬ್ ಬಚ್ಚನ್” ವ್ಯಕ್ತಪಡಿಸಿರುವ ಬೆಂಬಲದ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಸಪ್ನಾ, ಇದೊಂದು ದೊಡ್ಡ ಸುಳ್ಳು. ಸರ್ ಈಗಾಗಲೇ ಪಿಂಕ್ ಸಿನಿಮಾ ಬಿಡುಗಡೆಯಾಯಿತು ಹಾಗೇ ಹೋಯ್ತು. ಮತ್ತು ಸಾಮಾಜಿಕ ಕಳಕಳಿಯ ಹೋರಾಟಗಾರನಾಗಿ ಗುರುತಿಸಿಕೊಂಡಿರುವ ನಿಮ್ಮ ಮುಖವಾಡ ಶೀಘ್ರವೇ ಕಳಚಿ ಬೀಳಲಿದೆ. ಅತೀ ಶೀಘ್ರದಲ್ಲಿಯೇ ನಿಮ್ಮ ಕುರಿತ ಸತ್ಯ ಬಹಿರಂಗವಾಗಲಿದೆ. ನೀವು ನಿಮ್ಮ ಉಗುರನ್ನು ಕಚ್ಚಿಕೊಳ್ಳುತ್ತಿರಬಹುದು ಎಂದು ಆಶಿಸುತ್ತೇನೆ..ಆದರೆ ಅದು ಸಾಕಾಗಲ್ಲ ಎಂದು ವ್ಯಂಗ್ಯವಾಡಿದ್ದಾರೆ.
This has to be the biggest lie ever. Sir the film Pink has released and gone and your image of being an activist will soon too. Your truth will come out very soon. Hope you are biting your hands cuz nails will not be enough. @SrBachchan #Metoo #MeTooIndia #comeoutwomen https://t.co/gMQXoRtPW3
— Sapna Moti Bhavnani (@sapnabhavnani) October 11, 2018
ಬಚ್ಚನ್ ಅವರ ಅಸಭ್ಯ ವರ್ತನೆ ಕುರಿತು ನಾನು(ಸಪ್ನಾ) ವೈಯಕ್ತಿವಾಗಿ ಹಲವು ವಿಷಯಗಳನ್ನು ಕೇಳಿದ್ದೇನೆ..ಹೀಗಾಗಿ ಧೈರ್ಯವಂತ ಮಹಿಳೆಯರು ಹೊರಗೆ ಬಂದು ಸತ್ಯವನ್ನು ಬಹಿರಂಗಗೊಳಿಸಬೇಕು ಎಂದು ಸಪ್ನಾ ಟ್ವೀಟರ್ ನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್