ದಾಂಪತ್ಯ ಕಲಹ : ನಟ ನಾಗಚೈತನ್ಯಗೆ ಕಾಡುತ್ತಿದೆಯಂತೆ ಆ ಭಯ
Team Udayavani, Sep 15, 2021, 2:25 PM IST
ಹೈದರಾಬಾದ್ : ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ಅವರ ದಾಂಪತ್ಯ ಕಲಹ ಕಳೆದ ಕೆಲ ದಿನಗಳಿಂದ ಟಾಕ್ ಆಫ್ ದಿ ಟೌನ್ ಆಗಿದೆ. ಈ ಜೋಡಿ ವಿಚ್ಛೇದನ ತೆಗೆದುಕೊಳ್ಳಲಿದ್ದಾರೆ ಎನ್ನುವ ವದಂತಿ ಕೇಳಿ ಬರುತ್ತಿದ್ದರೂ ಇವರ ಕುಟುಂಬದವರು ಇದರ ಬಗ್ಗೆ ತುಟಿ ಪಿಟಕ್ ಅಂದಿಲ್ಲ. ಇದೀಗ ಹೊಸ ವಿಚಾರ ಏನಂದರೆ ಸಮಂತಾ ಹಾಗೂ ಡಿವೋರ್ಸ್ ವಿಷಯದ ಬಗ್ಗೆ ಮಾಧ್ಯಮಗಳಿಂದ ಎದುರಾಗಬಹುದಾದ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ನಾಗಚೈತನ್ಯ ಮುಂದಾಗಿದ್ದಾರೆ.
ನಾಗ ಚೈತನ್ಯ ನಟಿಸಿರುವ ‘ಲವ್ ಸ್ಟೋರಿ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದ ಪ್ರಮೋಷನ್ ಕಾರ್ಯ ಚಿತ್ರತಂಡದಿಂದ ಭರದಿಂದ ಸಾಗಿದೆ. ಚಿತ್ರದ ನಾಯಕ ಚೈತನ್ಯ ಕೂಡ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಮಾಧ್ಯಮಗಳ ಎದುರು ಅವರು ಹಾಜರಾಗುತ್ತಿಲ್ಲ. ಇದಕ್ಕೆ ಕಾರಣ ತನ್ನ ಹಾಗೂ ಪತ್ನಿ ಸಮಂತಾ ಕುರಿತು ಪ್ರಶ್ನೆಗಳು ಎದುರಾಗಬಹುದೆನ್ನುವ ಭಯವಂತೆ.
ಮಾಧ್ಯಮಗಳ ಎದುರು ಫ್ಯಾಮಿಲಿ ಮ್ಯಾಟರ್ ಮಾತಾಡಬಾರದು ಎನ್ನುವ ಯೋಚನೆಯಲ್ಲಿದ್ದಾರಂತೆ ಈ ನಟ. ಆದರೂ ಸಿನಿಮಾ ಪ್ರಮೋಷನ್ಗಾಗಿ ಮಾಧ್ಯಮಗಳ ಎದುರು ಅವರು ಹಾಜರಾಗಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.
ಲವ್ ಸ್ಟೋರಿ ಪ್ರಮೋಷನ್ಗಾಗಿ ಮಾಧ್ಯಮಗಳ ಎದುರು ಕಾಣಿಸಿಕೊಳ್ಳುತ್ತಿರುವ ನಾಗ ಚೈತನ್ಯ ತಮ್ಮ ಚಿತ್ರತಂಡ ಹಾಗೂ ಪಿಆರ್ ಗಳಿಗೆ ಮೊದಲೆ ತಾಕಿತ್ತು ಮಾಡಿದ್ದಾರಂತೆ. ಯಾವುದೇ ಕಾರಣಕ್ಕೂ ಮಾಧ್ಯಮಗಳು ಸಮಂತಾ ಹಾಗೂ ಡಿವೋರ್ಸ್ ಬಗ್ಗೆ ಪ್ರಶ್ನೆಗಳನ್ನು ಕೇಳದಂತೆ ನೋಡಿಕೊಳ್ಳಿ ಎಂದು ಕಂಡಿಷನ್ ಹಾಕಿದ್ದಾರಂತೆ.
ಇನ್ನು ಸಮಂತಾ ಅಕ್ಕೀನೆನಿ ಹೆಸರು ಕೈ ಬಿಟ್ಟಾಗಿನಿಂದ ಇವರ ದಾಂಪತ್ಯದಲ್ಲಿ ಎಲ್ಲವೂ ಸರಿ ಇಲ್ಲ ಅನುಮಾನ ಹೊಗೆಯಾಡಲು ಶುರುವಾಯಿತು. ಇತ್ತೀಚಿಗೆ ಈ ಜೋಡಿ ಜೊತೆಯಾಗಿ ಕಾಣಿಸಿಕೊಳ್ಳದಿರುವುದು ಕೂಡ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramayana Movie: ʼರಾವಣʼನ ಪತ್ನಿಯಾಗಿ ಯಶ್ ಜೊತೆ ನಟಿಸಲಿದ್ದಾರೆ 51 ಹರೆಯದ ಈ ನಟಿ?
ದೀರ್ಘಕಾಲದ ಗೆಳೆಯನೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟ ತಾಪ್ಸಿ: ಗುಟ್ಟಾಗಿ ಹಸಮಣೆ ಏರಿದ ನಟಿ
ಮೀಟಿಂಗ್ ಮಾಡೋಕ್ಕೂ ರೇಟ್ ಫಿಕ್ಸ್: ನನ್ನ 10 ನಿಮಿಷ ಬೇಕಿದ್ರೆ 1ಲಕ್ಷ ಕೊಡಿ ಎಂದ ನಿರ್ದೇಶಕ
Box office: ʼವೀರ್ ಸಾವರ್ಕರ್ʼ ಆಗಿ ಗೆದ್ರಾ ರಣದೀಪ್ ಹೂಡಾ?; ಮೊದಲ ದಿನ ಗಳಿಸಿದ್ದೆಷ್ಟು?
Priyanka Chopra: ಅಯೋಧ್ಯೆ ರಾಮಲಲ್ಲಾನ ದರ್ಶನ ಪಡೆದ ಪ್ರಿಯಾಂಕಾ ಚೋಪ್ರಾ ದಂಪತಿ
MUST WATCH
ಹೊಸ ಸೇರ್ಪಡೆ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ